ಬಿಸಿಲೆ ಘಾಟಿಯಲ್ಲಿ ಭಾರೀ ಭೂಕುಸಿತ
Team Udayavani, Aug 22, 2018, 3:30 AM IST
ಸುಬ್ರಹ್ಮಣ್ಯ: ಸಕಲೇಶಪುರ- ಸುಬ್ರಹ್ಮಣ್ಯ ಬಿಸಿಲೆ ಘಾಟಿಯ ಅಲ್ಲಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಬಿಸಿಲೆ ವೀಕ್ಷಣಾ ಗೋಪುರದ ಬಳಿ ಕೂಡ ದೊಡ್ಡ ಪ್ರಮಾಣದ ಕುಸಿತ ನಡೆದಿದೆ. ಸುಬ್ರಹ್ಮಣ್ಯ- ಸಕಲೇಶಪುರ ರಾ.ಹೆ. ಉದ್ದಕ್ಕೂ ದ.ಕ. ಮತ್ತು ಸಕಲೇಶಪುರ ವಿಭಾಗಕ್ಕೆ ಸೇರಿದ ರಸ್ತೆಯಲ್ಲಿ ಭೂಕುಸಿತದ ಜತೆಗೆ ಭಾರೀ ಜಲಪ್ರವಾಹ ಉಂಟಾಗಿದೆ. ಬೃಹತ್ ಗಾತ್ರದ ಮರಗಳು ಪ್ರವಾಹದ ಜತೆ ಕೊಚ್ಚಿಕೊಂಡು ಬಂದಿವೆ. ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
ರಸ್ತೆ ಮೇಲಿನ ಮರದ ದಿಮ್ಮಿಗಳನ್ನು ಸುಬ್ರಹ್ಮಣ್ಯ ಪರಿಸರದ ಸ್ಥಳೀಯರು ತೆರವುಗೊಳಿಸಿದ್ದಾರೆ. ಸಕಲೇಶ ಪುರ ಭಾಗದಲ್ಲಿ ಭೂಕುಸಿತ ಹೆಚ್ಚು ಸಂಭವಿಸಿದ್ದರಿಂದ ಕಾರ್ಯಾಚರಣೆ ಸಾಧ್ಯವಾಗಿಲ್ಲ ಎಂದು ಸಕಲೇಶಪುರ ಭಾಗದ ನಾಗರಿಕರು ತಿಳಿಸಿದ್ದಾರೆ. ವೀಕ್ಷಣಾ ಗೋಪುರ ಬಳಿ ಬೃಹತ್ ಪ್ರಮಾಣದ ಭೂಕುಸಿತ ನಡೆದಿದ್ದು, ಇಲ್ಲಿ ನಿಂತು ನೋಡಿದರೆ ದೂರದ ಬೆಟ್ಟದಲ್ಲಿ ಗುಡ್ಡ ಜರಿದಂತೆ, ಭಾರೀ ಬಿರುಕು ಬಿಟ್ಟಂತೆ ಕಂಡುಬರುತ್ತಿದೆ. ಗುಡ್ಡದ ಕೆಳಭಾಗದಲ್ಲಿ ಜನವಸತಿ ಪ್ರದೇಶಗಳಿದ್ದು, ಆತಂಕಗೊಂಡಿದ್ದಾರೆ. ಸಕಲೇಶಪುರದಲ್ಲಿ ಈಗ ಸತತ ಮಳೆ ಆಗುತ್ತಿರುವುದರಿಂದ ಕಳವಳ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ