ಕೊಳವೆ ಬಾವಿಗೆ ಚರಂಡಿ ನೀರು ಸೋರಿಕೆ: ಯುವಕರಿಂದ ದುರಸ್ತಿ
Team Udayavani, Jul 18, 2018, 12:17 PM IST
ಎಡಪದವು : ಕುಪ್ಪೆಪದವು ಪಂಚಾಯತ್ ವ್ಯಾಪ್ತಿಯ ಕಲ್ಲಾಡಿ ಜಾರಿಗೆ ಕಟ್ಟ ಎಂಬಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ಚರಂಡಿ ನೀರು ಸೋರುವುದನ್ನು ಕಂಡ ಸ್ಥಳೀಯ ಯುವಕರು ದುರಸ್ತಿ ಮಾಡಿ ಸರಿಪಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ನಿರ್ಮಿಸಲಾಗಿದೆ. ನೀರಿನಲ್ಲಿ ಚರಂಡಿ ನೀರು ಮಿಶ್ರಗೊಂಡು ಕೆಂಪು ಬಣ್ಣಕ್ಕೆ ತಿರುಗುವುದರ ಬಗ್ಗೆ ಪಂಚಾಯತ್ಗೆ ದೂರು ನೀಡಲಾಗಿತ್ತು. ಆದರೆ ಪಂಚಾಯತ್ ಕ್ರಮಕೈಗೊಳ್ಳದೇ ಇರುವುದನ್ನು ಮನಗಂಡ ಕುಪ್ಪೆಪದವಿನ ಯುವಕರು ಕೊಳವೆ ಬಾವಿಯ ಮಣ್ಣು ತೆಗೆದು ರಿಂಗ್ ಅಳವಡಿಸಿ ನೀರು ಒಳಸೇರುವುದನ್ನು ತಡೆಗಟ್ಟಿದ್ದಾರೆ.