ಐಕಳ: ಚಿರತೆ ಓಡಾಟ; ಭೀತಿಯಲ್ಲಿ ಗ್ರಾಮಸ್ಥರು
Team Udayavani, Jul 3, 2018, 9:18 AM IST
ಕಿನ್ನಿಗೋಳಿ: ಐಕಳ ಗ್ರಾ.ಪಂ. ವ್ಯಾಪ್ತಿಯ ಐಕಳ ನೆಲ್ಲಿಗುಡ್ಡೆಯಲ್ಲಿ ಚಿರತೆ ಓಡಾಟ ಪತ್ತೆಯಾಗಿದೆ. ನೆಲ್ಲಿಗುಡ್ಡೆ ನಿವಾಸಿ ಐವನ್ ಸಲ್ದಾನ ಸೋಮವಾರ ಮುಂಜಾನೆ ತಮ್ಮ ಅಡಿಕೆ ತೋಟಕ್ಕೆ ಹೋಗುವಾಗ ಚಿರತೆ ಕಾಣಸಿಕ್ಕಿದೆ.
ಐವನ್ ಬೊಬ್ಬೆ ಹಾಕಿದಾಗ ಚಿರತೆ ಪಕ್ಕದ ಫ್ರಾನ್ಸಿಸ್ ರೆಬೆಲ್ಲೋ ಅವರ ತೋಟದ ಕಾಂಪೌಂಡ್ ಒಳಗೆ ಹಾರಿ ಗುಡ್ಡಕ್ಕೆ ಓಡಿ ಹೋಗಿದೆ. ಐವನ್ ಅವರು ಕೂಡಲೇ ಅರಣ್ಯ ಇಲಾಖೆ ಮತ್ತು ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಿನ್ನಿಗೋಳಿ ವಲಯದ ಅರಣ್ಯಾಧಿಕಾರಿ ಕೆ.ಸಿ. ಮ್ಯಾಥ್ಯೂ ಮತ್ತು ಮೂಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.