ಅಡಿಕೆ ತೋಟಗಳಲ್ಲಿ ಲೀಸ್‌ ವ್ಯವಹಾರ

ಬೆಳೆಗಾರರು ಮೋಸದ ಬಲೆಗೆ ಬೀಳುವ ಅಪಾಯ

Team Udayavani, Mar 26, 2019, 6:30 AM IST

adike-thoota

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕೃಷಿಯಾದ ಅಡಿಕೆ ತೋಟಗಳನ್ನು ಗುತ್ತಿಗೆ/ಲೀಸ್‌ಗೆ ಕೊಡುವ ಪ್ರಕರಣಗಳು ಹೆಚ್ಚುತ್ತಿದ್ದು, ಲೀಸ್‌ಗೆ ಪಡೆದುಕೊಂಡವರು ನಿಧಾನವಾಗಿ ಬೆಳೆಗಾರರನ್ನು ಮೋಸದ ಬಲೆಯಲ್ಲಿ ಬೀಳಿಸುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.

ಯುವಜನಾಂಗ ಕೃಷಿಯಿಂದ ದೂರವಾಗುತ್ತಿದ್ದು, ಹಳ್ಳಿಗಳಲ್ಲಿ ಹಿರಿಯರೇ ಅಡಿಕೆ ತೋಟ ನೋಡಿ ಕೊಳ್ಳಬೇಕಾದ ಸ್ಥಿತಿ ಇದೆ. ಬೆಲೆ ಕುಸಿತ, ಕಾರ್ಮಿಕರ ಕೊರತೆ, ಕೊಳೆರೋಗ ಹೀಗೆ ಅಡಿಕೆ ಬೆಳೆಗಾರರು ನಾನಾ ಸಮಸ್ಯೆಗಳ ನಡುವೆ ಇದ್ದಾರೆ. ಇದರಿಂದ ಬೇಸತ್ತು ತೋಟವನ್ನು ಲೀಸ್‌ಗೆ ನೀಡುತ್ತಿದ್ದಾರೆ.

ತೋಟವನ್ನು ಲೀಸ್‌ಗೆ ಪಡೆದುಕೊಂಡವರಲ್ಲಿ ಕೆಲವರು ಪ್ರಾರಂಭದಲ್ಲಿ ಪ್ರಾಮಾಣಿಕರಂತೆ ವರ್ತಿಸಿ, ಬಳಿಕ ಯಾಮಾರಿಸಿದ ಘಟನೆಗಳು ವರದಿಯಾಗಿವೆ.

ಹೀಗಿರುತ್ತದೆ ವ್ಯವಹಾರ
ಲೀಸ್‌ಗೆ ಪಡೆದುಕೊಳ್ಳುವವರು ದಲ್ಲಾಳಿಗಳ ಮೂಲಕ ಬೆಳೆಗಾರನ ಬಳಿ ಬರುತ್ತಾರೆ. ಬಳಿಕ ಮೊತ್ತ ನಿಗದಿಪಡಿಸಿ ಒಪ್ಪಂದ (ಎಗ್ರಿಮೆಂಟ್‌) ಮಾಡಿಕೊಳ್ಳುತ್ತಾರೆ. ಮುಂಗಡವನ್ನೂ ನೀಡುತ್ತಾರೆ. ದಲ್ಲಾಳಿ ಊರಿನವನೇ ಆಗಿರುವುದರಿಂದ ಬೆಳೆಗಾರನಲ್ಲಿ ವಿಶ್ವಾಸ ಮೂಡಿಸುತ್ತದೆ.

ಮುಂದೆ ಲೀಸ್‌ಗೆ ಪಡೆದಾತ ಬೆಳೆಯ ಮೊದಲ ಕೊçಲು ಕೊಂಡು ಹೋಗುತ್ತಾನೆ. ಎರಡನೇ ಕೊçಲಿನ ವೇಳೆ ವಿಶ್ವಾಸಕ್ಕಾಗಿ ಚೆಕ್‌ ನೀಡುತ್ತಾನೆ. ವಿಶ್ವಾಸದಿಂದ ಮೂರನೇ ಕೊçಲಿನ ಅಡಿಕೆಯನ್ನು ಒಯ್ಯುವಾಗಲೂ ಬೆಳೆಗಾರ ಸುಮ್ಮನಿರುತ್ತಾನೆ. ಬಾಕಿ ಹಣವನ್ನು ನಾಳೆ ಕೊಡುತ್ತೇನೆ, ನಾಡಿದ್ದು ಕೊಡುತ್ತೇನೆ ಎಂದು ಸತಾಯಿಸಲು ಆರಂಭಿಸಿದಾಗಲೇ ಮೋಸ ಹೋಗಿರುವ ಅರಿವಾಗುವುದು.

ಅಲೆಯಬೇಕಾದ ಸ್ಥಿತಿ!
ಚೆಕ್ಕನ್ನು ಬ್ಯಾಂಕಿಗೆ ಹಾಕಿದರೂ ಅದು ಅಮಾನ್ಯವಾ ಗುವುದರಿಂದ ಚೆಕ್‌ ಅಮಾನ್ಯ ಪ್ರಕರಣಕ್ಕೆ ಅಲೆಯ ಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ದಾಖಲೆಗಳು ಸರಿಯಿಲ್ಲದಿದ್ದಾಗ ಚೆಕ್‌ ಅಮಾನ್ಯ ಪ್ರಕರಣ ಕೂಡ ಹಳ್ಳ ಹಿಡಿಯುವ ಸಾಧ್ಯತೆ ಇರುತ್ತದೆ. ಈ ಕುರಿತು ಅನೇಕ ಬೆಳೆಗಾರರಿಗೆ ಮಾಹಿತಿಯೂ ಇರುವುದಿಲ್ಲ!

ಎಲ್ಲರೂ ಹಾಗಿಲ್ಲ; ಎಚ್ಚರ ಅಗತ್ಯ
ತೋಟವನ್ನು ಒಂದು ವರ್ಷ, ಐದು ವರ್ಷ-ಹೀಗೆ ಬೇರೆ ಬೇರೆ ಅವಧಿಗೆ ಲೀಸ್‌ಗೆ ಪಡೆಯಲಾಗುತ್ತದೆ. ಈ ರೀತಿ ಪಡೆದುಕೊಂಡವರು ಎಲ್ಲರೂ ಮೋಸಗಾರರಲ್ಲ. ವಂಚಕರು ಒಬ್ಬರಾದರೂ ಬೆಳೆಗಾರರು ಎಚ್ಚರದಿಂದಿರಬೇಕಾಗುತ್ತದೆ.

ವಂಚನೆ ಹೀಗಿದೆ …
ಗುತ್ತಿಗೆದಾರ ವಾರ್ಷಿಕ ಒಂದು ಮರಕ್ಕೆ 500ರಿಂದ 1 ಸಾವಿರ ರೂಪಾಯಿ ನಿಗದಿಪಡಿಸುತ್ತಾನೆ. ಮೊದಲ ಕೊçಲಿನ ಫ‌ಸಲಿಗೆ ಮೂರನೇ ಒಂದಂಶ ಹಣವನ್ನೂ ನೀಡುತ್ತಾನೆ. ಮುಂದಿನ ಹಂತಗಳಲ್ಲಿ ಹಣ ನೀಡದೆ ಸತಾಯಿಸುತ್ತಾನೆ. ಪೊಲೀಸರಿಗೆ ದೂರು ನೀಡಿದಲ್ಲಿ ಆತ ಮುಂದೆ ಹಣ ನೀಡದೇ ಇದ್ದರೆ ಎಂಬ ಭೀತಿಯಿಂದ ಬೆಳೆಗಾರ ಅಧಿಕೃತವಾಗಿ ಯಾರಲ್ಲೂ ಹೇಳಲಾಗದೆ ತೊಳಲಾಡುತ್ತಾನೆ.

ಅನಿವಾರ್ಯ ಸ್ಥಿತಿ
ಪ್ರಸ್ತುತ ದಿನಗಳಲ್ಲಿ ತೋಟಗಳನ್ನು ವೃದ್ಧರಿಗೆ ಮೀಸಲಿಟ್ಟು ಯುವಕರು ಪೇಟೆ ಕಡೆ ಮುಖ ಮಾಡಿದ್ದಾರೆ. ಅನಿವಾರ್ಯವಾಗಿ ತೋಟಗಳನ್ನು ಲೀಸ್‌ಗೆ ನೀಡಬೇಕಾದ ಸ್ಥಿತಿ ಇದೆ. ಇದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಇರಬಹುದು. ಈ ತನಕ ಲೀಸ್‌ಗೆ ಪಡೆದವರು ಮೋಸ ಮಾಡಿದ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ.
– ರವಿಕಿರಣ್‌ ಪುಣಚ,
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ

ಅಡಿಕೆ ತೋಟಗಳನ್ನು ಲೀಸ್‌ಗೆ ಪಡೆದು ಮೋಸ ಮಾಡಿರುವ ಕುರಿತು ಮೌಖೀಕ ದೂರುಗಳು ಬಂದಿವೆ. ಆದರೆ ನಮ್ಮ ವ್ಯಾಪ್ತಿಯ ಯಾವುದೇ ಠಾಣೆಯಲ್ಲಿ ಇಂತಹ ಪ್ರಕರಣ ದಾಖಲಾಗಿಲ್ಲ.
– ಸಂದೇಶ ಪಿ.ಜಿ., ಸರ್ಕಲ್‌ ಇನ್ಸ್‌ಪೆಕ್ಟರ್‌, ಬೆಳ್ತಂಗಡಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.