ಕಾಡಿನ ಅಂಚಿನ ಮಕ್ಕಳಿಗೆ ನಾಡಿನ ಮಕ್ಕಳಿಂದ ಪಾಠ


Team Udayavani, Aug 3, 2018, 11:56 AM IST

3-agust-5.jpg

ಮಹಾನಗರ: ಅದೊಂದು ಕಾಡಿನ ನಡುವೆ ಇರುವ ಶಾಲೆ. ಅಲ್ಲಿನ ವಿದ್ಯಾರ್ಥಿಗಳಿಗೆ ಸಿಟಿ ಲೈಫ್‌ ಹೊಸತು. ನಗರದ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯುತ್ತಾರೆ ಎಂಬ ಕುತೂಹಲ ಅವರಲ್ಲಿತ್ತು. ಸಿಟಿ ಮಕ್ಕಳಂತೆ ಶಿಕ್ಷಣ ಪಡೆದು ದೊಡ್ಡ ಹುದ್ದೆ ಅಲಂಕರಿಸಬೇಕೆಂಬ ಆಸೆ ಕಣ್ಣಂಚಲ್ಲಿತ್ತು. ಇದೀಗ ಕಾಡಿನ ಮಕ್ಕಳಲ್ಲಿ ಅವರ ಪ್ರತಿಭೆಯನ್ನು ಮತ್ತಷ್ಟು ವೃದ್ಧಿಸುವ ಕೆಲಸವನ್ನು ನಾಡಿನ ಮಕ್ಕಳು ಮಾಡಿ ಬಂದಿದ್ದಾರೆ.

ಇದಕ್ಕೆ ಕಾರಣವಾದದ್ದು ದಿನೇಶ್‌ ಹೊಳ್ಳ ನೇತೃತ್ವದ ‘ಸಹ್ಯಾದ್ರಿ ಸಂಚಯ’ ಮತ್ತು ಗೋಪಾಡ್ಕರ್‌ ನೇತೃತ್ವದ ‘ಸ್ವರೂಪ ಅಧ್ಯಯನ ಕೇಂದ್ರ’ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು. ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಇತ್ತೀಚೆಗೆ ಕಾಡಿಗೆ ತೆರಳಿ ಅಲ್ಲಿನ ಶಾಲೆಯ ವಿದ್ಯಾರ್ಥಿಗಳಿಗೆ ‘ಕಾಡುವ ಶಿಕ್ಷಣ’ ಎಂಬ ಹೆಸರಿನ ವಿನೂತನ ಶಿಬಿರವನ್ನು ಹಮ್ಮಿಕೊಂಡಿದ್ದರು. ಇದರ ಮೂಲಕ ಅಡವಿ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದ್ದರು. ಅರಣ್ಯಾಧಿಕಾರಿಯಾಗುವವನು ಕಾಡಿನಲ್ಲಿಯೇ ಹುಟ್ಟಿ ಬೆಳೆದವನಾಗಿರಬೇಕು. ಆತನಿಗೆ ಕಾಡಿನ ಇಂಚಿಂಚೂ ಮಾಹಿತಿ ತಿಳಿದಿರಬೇಕು ಎಂಬುವುದು ಈ ತಂಡದ ಆಶಯವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ದಾಂಡೇಲಿ ಅರಣ್ಯ ವ್ಯಾಪ್ತಿಯ ಜೋಯಿಡಾದ ಕಾಳೀ ಹುಲಿ ಸಂರಕ್ಷಿತ ವಲಯದಲ್ಲಿ ವಿರ್ನೋಲಿ, ಹುಡಸಾ, ದನಗರ, ಬಾಪೇಲಿ ಮುಂತಾದ ದಟ್ಟ ಅರಣ್ಯಗಳ ನಡುವೆ ಇರುವಂತಹ ಶಾಲೆಯನ್ನು ಆಯ್ದು ಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಜತೆಗೆ ಐದು ದಿನದ ಕ್ಯಾಂಪ್‌ ನಡೆಸುವ ಮೂಲಕ ಸಿಟಿ ಮಕ್ಕಳು ಕಾಡಿನ ಮಕ್ಕಳ ಜತೆ ಒಂದಾದರು.

ವಿವಿಧ ಚಟುವಟಿಕೆಗಳ ಪಾಠ
ಅರಣ್ಯ ಪ್ರದೇಶಗಳಲ್ಲಿ ಶಾಲೆಗಳಿರುವ ಕಾರಣದಿಂದಾಗಿ ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳನ್ನು ಆಯ್ದುಕೊಂಡ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಲ್ಲಿನ ಮಕ್ಕಳಿಗೆ ಚಿತ್ರಕಲೆ, ಸಂಗೀತ, ನೃತ್ಯ, ಮಿಮಿಕ್ರಿ, ಪೇಪರ್‌ ಕ್ರಾಪ್ಟ್, ಬೀಟ್‌ಬಾಕ್ಸ್‌, ಮುಖವಾಡ ತಯಾರಿ, ಗೊಂಬೆ ತಯಾರಿ ಮುಂತಾದ ಪ್ರಕಾರಗಳನ್ನು ಬೋಧಿಸಿದರು. ಇದಲ್ಲದೆ ಸ್ಮರಣ ಶಕ್ತಿಯಿಂದ ಇಡೀ ಪಾಠ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಸರಳವಾಗಿ ಕಲಿಯಬಹುದು ಎಂಬುವುದನ್ನು ಕಾಡಿನ ಮಕ್ಕಳಿಗೆ ಹೇಳಿಕೊಟ್ಟರು.

ವನ್ಯಜೀವಿಗಳ ಅಧ್ಯಯನ
ಕಾಡಿನ ಮಕ್ಕಳಿಗೆ ನಾಡಿನ ಅಧ್ಯಯನ ಯಾವ ರೀತಿ ಹೊಸತೋ, ಅದೇ ರೀತಿ ನಾಡಿನ ಮಕ್ಕಳಿಗೆ ಕೂಡ ಕಾಡಿನ ಪರಿಸರ ಹೊಸತು. ಇದೇ ಕಾರಣಕ್ಕೆಂದು ಶಿಬಿರದ ಜತೆಗೆ ಕಾಳಿ ಹಿನ್ನೀರು ಪ್ರದೇಶಕ್ಕೆ ಭೇಟಿ, ಜೋಯಿಡಾ ಅಡವಿ ಚಾರಣ, ವನ್ಯ ಜೀವಿಗಳ ಅಧ್ಯಯನ, ಸಿದ್ದಿ, ಹಾಲಕ್ಕಿ, ಕುಡುಬಿ, ಗೌಳಿ ಬುಡಕಟ್ಟು ಜನಾಂಗದವರ ವಾಡೆಗಳಿಗೆ ಭೇಟಿ, ಗದ್ದೆ ಕೆಸರಿನ ಆಟ, ಜೇನು ಬದುಕಿನ ತಿಳುವಳಿಕೆ, ಪಶ್ಚಿಮ ಘಟ್ಟದ ಮಹತ್ವದ ಔಷಧೀಯ ಸಸ್ಯಗಳ ಮಾಹಿತಿ ವಿಚಾರಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಲು ಸಹಾಯವಾಯಿತು.

ಮಾಹಿತಿ ವಿನಿಮಯ
ಅಡವಿ ಮಕ್ಕಳು ನಮ್ಮನ್ನು ನೋಡುವಾಗ ಹೆದರುತ್ತಿದ್ದರು. ನಾವು ತಂಡವನ್ನು ಕಟ್ಟಿ ಅವರಿಗೆ ನೃತ್ಯ, ಆಟ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಕಲಿಸಿದೆವು. ಆ ಬಳಿಕ ಅವರು ಕೂಡ ನಮ್ಮ ಜತೆ ಬೆರೆಯಲು ಪ್ರಾರಂಭಿಸಿದರು. ನಾವು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡೆವು.
 - ರಾಹುಲ್‌,
ಸ್ವರೂಪ ಅಧ್ಯಯನ ಕೇಂದ್ರದ ಪಿಯುಸಿ ವಿದ್ಯಾರ್ಥಿ

ಚೆನ್ನಾಗಿ ಬೆರೆತರು
ಕಾಡಿನ ಮಕ್ಕಳು ನಗರದ ಮಕ್ಕಳನ್ನು ನೋಡಿದಾಗ ಒಮ್ಮೆಲೇ ವಿಚಲಿತರಾದರು. ಆದರೆ ಚೆನ್ನಾಗಿ ಬೆರೆತರು. ಕಾಡಿನ ಮೂರು ಶಾಲೆಗಳಲ್ಲಿ ಶಿಬಿರವನ್ನು ಆಯೋಜಿಸಿದ್ದೆವು. ಸುಮಾರು ನಮ್ಮ ಶಿಕ್ಷಣ ಸಂಸ್ಥೆಯ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೆ, ಪರಿಸರ ಹೋರಾಟಗಾರ್ತಿ, ಜಾನಪದ ವಿದ್ವಾಂಸೆ ಸುಕ್ರಿಬೊಮ್ಮ ಗೌಡ ಅವರನ್ನು ಕೂಡ ಭೇಟಿಯಾಗುವ ಅವಕಾಶ ನಮಗೆ ದೊರಕಿತ್ತು.
– ಗೋಪಾಡ್ಕರ್‌, ಸ್ವರೂಪ ಶಿಕ್ಷಣ ಸಂಸ್ಥೆ ನಿರ್ದೇಶಕ

ವಿಶೇಷ ವರದಿ

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.