ಗ್ರಂಥಾಲಯದ ಕನಸು ಸಾಕಾರ : ಕುತ್ಯಾರು ಸಮೀಪ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ವಾಚನಾಲಯ


Team Udayavani, Feb 22, 2022, 3:39 PM IST

ಗ್ರಂಥಾಲಯದ ಕನಸು ಸಾಕಾರ : ಕುತ್ಯಾರು ಸಮೀಪ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ವಾಚನಾಲಯ

ಬೆಳ್ತಂಗಡಿ : ಗ್ರಂಥಾಲಯವು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವನ್ನು ಹಂಚುವ ಉನ್ನತ ಕಾರ್ಯ ಮಾಡುತ್ತದೆ. ಹಲವು ದಶಕಗಳಿಂದ ಓದುಗರನ್ನು ಸೆಳೆಯುತ್ತಿದ್ದ ತಾಲೂಕು ಸಾರ್ವಜನಿಕ ಗ್ರಂಥಾಲಯ ಕಟ್ಟಡ ಅಪಾಯಕಾರಿ ಹಂತ ತಲುಪಿದ್ದರಿಂದ ಇದೀಗ ಬೆಳ್ತಂಗಡಿ ಜೂನಿಯರ್‌ ಕಾಲೇಜು ಸಮೀಪ 9,000 ಚದರಡಿಯಲ್ಲಿ 1 ಕೋ.ರೂ. ವೆಚ್ಚದಲ್ಲಿ ಆಧುನಿಕ ಶೈಲಿಯಲ್ಲಿ ನವೀನ ವಿನ್ಯಾಸವುಳ್ಳ ಗ್ರಂಥಾಲಯವೊಂದು ತಲೆ ಯೆತ್ತಲಿದೆ.

ಪ್ರಸಕ್ತ ಬೆಳ್ತಂಗಡಿ ನಗರದಲ್ಲಿರುವ ಸುಮಾರು 50 ವರ್ಷ ಹಳೆಯ ಕಟ್ಟಡ ದಲ್ಲಿ ಬಿರುಕುಬಿಟ್ಟ ಛಾವಣಿಯಲ್ಲೇ ಗ್ರಂಥಾಲಯ ಕಾರ್ಯಾಚರಿಸುತ್ತಿದೆ. ಸುಮಾರು 40 ಸಾವಿರಕ್ಕೂ ಅಧಿಕ ಪುಸ್ತಗಳ ಸಂರಕ್ಷಣೆ ಸವಾಲಾಗಿದೆ. ಇದೆಲ್ಲವನ್ನು ಮನಗಂಡು ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ 1 ಕೋ.ರೂ. ವಿಶೇಷ ಅನುದಾನದಡಿ ಕುತ್ಯಾರು ಸಮೀಪ ಸರಕಾರಿ ಪ.ಪೂ. ಕಾಲೇಜು ಸಮೀಪ 17 ಸೆಂಟ್ಸ್‌ ಸ್ಥಳವಕಾಶದಲ್ಲಿ ಎರಡು ಅಂತಸ್ತಿನ ಆಧುನಿಕ ಶೈಲಿಯ ಗ್ರಂಥಾಲಯ ರಚನೆಗೆ ನೀಲನಕಾಶೆ ಸಿದ್ಧಗೊಂಡಿದೆ.

9,000 ಚದರಡಿ ವಿಸ್ತೀರ್ಣ
ಒಟ್ಟು 9,000 ಚದರಡಿ ಸ್ಥಳದಲ್ಲಿ 3,988 ಚದರಡಿ ಕಟ್ಟಡದ ವಿನ್ಯಾಸವಿರಲಿದೆ. 2,025 ಚದರಡಿ ಕೆಳ ಅಂತಸ್ತು, 1,963 ಚದರಡಿ ಮೊದಲ ಅಂತಸ್ತು ಇರಲಿದೆ. ಕೆಳ ಅಂತಸ್ತಿನಲ್ಲಿ ಪುರುಷ, ಮಹಿಳೆ ಸಹಿತ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಗಾರ್ಡನಿಂಗ್‌, ಮಧ್ಯ ಓದಲು ಅನುಕೂಲವುಳ್ಳ ತ್ರಿಕೋನ ಆಕೃತಿಯ ಮಧ್ಯ ವೃತ್ತಾಕಾರದ ರಚನೆಯಲ್ಲಿ ಗಾಳಿಬೆಳಕು ಸದಾಕಾಲ ಇರುವಂತೆ ವಿನ್ಯಾಸ ರಚಿಸಲಾಗಿದೆ. ಗ್ರಂಥಾಲಯದಲ್ಲಿ ಗಾಳಿ-ಬೆಳಕು ಸಮ ರ್ಪಕವಾಗಿರಬೇಕು, ಪ್ರಶಾಂತ ವಾತಾ ವರಣದಿಂದ ಕೂಡಿರಬೇಕು. ಇದಕ್ಕಾಗಿ ಪೇಟೆಯ ಸಮೀಪ, ಓದುಗರಿಗೆ ಅನು ಕೂಲಕರ ವಾತಾವರಣದಲ್ಲಿ ಗ್ರಂಥಾ ಲಯ ನಿರ್ಮಿ ಸುವ ಉದ್ದೇಶವಿದೆ. ಹೀಗಾಗಿ ವಾಕಿಂಗ್‌ ಪ್ರಿಯರಿಗೆ ಅನು ಕೂಲ ವಾಗುವಂತೆ ಗ್ರಂಥಾಲಯ ಸುತ್ತ ವಾಕಿಂಗ್‌ ಟ್ರಾÂಕ್‌, 8ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಸಣ್ಣ ಪ್ಲೇ ಗ್ರೌಂಡ್‌ ಹೊಂದಲಿದೆ.

ಇದನ್ನೂ ಓದಿ : ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರಂತೆ ಬಿಎಸ್‌ ಯಡಿಯೂರಪ್ಪ!

350 ಆಸನ, ಡಿಜಿಟಲ್‌ ಗ್ರಂಥಾಲಯ
ನೂತನ ಗ್ರಂಥಾಲಯದಲ್ಲಿ 1 ಲಕ್ಷ ಪುಸ್ತಕ ಹೊಂದಿಸುವಂತಹ ವಿನ್ಯಾಸ ಮಾಡ ಲಾಗು ತ್ತದೆ. ಒಂದು ವೇಳೆ ಪುಸ್ತಕಗಳು ಇಲ್ಲದಿದ್ದಲ್ಲಿ ಆನ್‌ಲೈನ್‌ನಲ್ಲಿ ಪಡೆಯುವಂತೆ 25 ಕಂಪ್ಯೂಟರ್‌ಗಳಿರುವ ಡಿಜಿಟಲ್‌ ಗ್ರಂಥಾ ಲಯ ಸ್ಥಾಪನೆಗಾಗಿಯೂ ಯೋಜನೆ ರೂಪಿಸಲಾಗಿದೆ. ದಿನಪತ್ರಿಕೆ, ವಾರಪತ್ರಿಕೆ ಓದುಗರಿಗಾಗಿ ಕೆಳ ಅಂತಸ್ತಿನಲ್ಲಿ 100 ಆಸನ ವ್ಯವಸ್ಥೆ ಸೇರಿ 2 ಅಂತಸ್ತಿನಲ್ಲಿ 350 ಮಂದಿ ಕುಳಿತುಕೊಳ್ಳುವ, 25 ವರ್ಷಗಳ ದೂರದೃಷ್ಟಿಯುಳ್ಳ ನವೀನ ವಿನ್ಯಾಸದಡಿ ಗ್ರಂಥಾಲಯ ಬಳಕೆಗೆ ಯೋಗ್ಯವಾಗಲಿದೆ.

ಏಕರೂಪದ ಬೆಳಕಿನ ವ್ಯವಸ್ಥೆ
ವಿದ್ಯುತ್‌ ಇಲ್ಲದಿದ್ದರೂ ಒಂದೇ ರೀತಿ ಎಲ್ಲೆಡೆ ಬೆಳಕು ಬೀಳುವಂತೆ ಮಣ್ಣಿನ ಇಟ್ಟಿಗೆಗಳಿಂದ ಎರಡನೇ ಅಂತಸ್ತಿನ ಗೋಡೆ ರಚನೆಯಾಗಲಿದೆ. ಮೇಲ್ಭಾಗದಲ್ಲಿ ಗ್ಲಾಸ್‌ ಮಾದರಿ ಮುಚ್ಚಳಿಕೆ ಇರಲಿದ್ದು (uniform intensity of light) ಎಲ್ಲೆಡೆ ಏಕರೂಪದ ಬೆಳಕು ಹರಡುವಂತೆ ವಿನ್ಯಾಸವಿರಲಿದೆ. ಹೊರಬದಿ ತ್ರಿಕೋನ ಆಕೃತಿಯುಳ್ಳ ಮೂರು ಪಾರ್ಶ್ವದಲ್ಲಿ ಗಾರ್ಡನ್‌ ವ್ಯವಸ್ಥೆ ಇರಲಿದೆ. ತಲಾ 4 ಆಸನದಂತೆ ಹೊರಭಾಗದಲ್ಲೂ ಕುಳಿತು ಓದುವ ವಾತಾವರಣ ಗ್ರಂಥಾಲಯದಲ್ಲಿದೆ. ಜಿಲ್ಲೆಯಲ್ಲೇ ವಿಶೇಷ ಗ್ರಂಥಾಲಯವೊಂದು ಪುಸ್ತಕ ಪ್ರಿಯರಿಗೆ ಲೋಕಾರ್ಪಣೆಗೊಳ್ಳಲಿದೆ.

ಉತ್ತಮ ವಾತಾವರಣ
ಸಾರ್ವಜನಿಕ ಗ್ರಂಥಾಲಯ ಇಲಾಖೆಯಡಿ ಅತ್ಯುತ್ತಮ ವಿನ್ಯಾಸವುಳ್ಳ ಗ್ರಂಥಾಲಯ ರಚನೆಯಾಗಲಿದೆ. 9,000 ಚದರಡಿಯಲ್ಲಿ 300 ಚದರಡಿ ಪ್ರಕೃತಿ ಮಡಿಲಲ್ಲಿ ಓದುವಂಥ ವಾತಾವರಣ ನಿರ್ಮಿಸಲಾಗುವುದು. 2 ವಾರಗಳ ಒಳಗಾಗಿ ಶಿಲಾನ್ಯಾಸ ಕಾಮಗಾರಿ ಹಮ್ಮಿಕೊಳ್ಳಲಾಗುವುದು.
-ಹರೀಶ್‌ ಪೂಂಜ, ಶಾಸಕರು

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.