ಸಾರಾಯಿ ಶೀಶೆಯಲಿ ಸಮಸ್ಯೆಯ ನಶೆ


Team Udayavani, Jul 29, 2017, 8:20 AM IST

Liquor-28-7.jpg

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ 500 ಮೀ. ಆಸುಪಾಸಿನಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂಬ ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆ, ಒಂದೆಡೆ ಮದ್ಯ ಸಿಗುತ್ತಿಲ್ಲ, ದುಪ್ಪಟ್ಟು ಹಣ ಕೊಡಬೇಕುಎಂದು ಮದ್ಯ ಸೇವನೆ ಮಾಡುವವರ ಆರೋಪ. ಮತ್ತೂಂದೆಡೆ ಸೂಕ್ತ ಜಾಗಕ್ಕಾಗಿ ಮದ್ಯದಂಗಡಿಯವರ ಪರದಾಟ. ಜಾಗ ಸಿಕ್ಕರೂ ದೇವಸ್ಥಾನ, ದೈವಸ್ಥಾನ ಶಾಲೆ ವಠಾರ ಇದೆ ಎಂಬ ಕಾರಣಕ್ಕೆ ಎನ್‌ಒಸಿ ಪಡೆಯಲಾಗದ ಸ್ಥಿತಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನೆಡೆಯಲ್ಲಿ ಪ್ರತಿಭಟನೆಯ ಬಿಸಿ ಸಂಚಲನ ಉಂಟುಮಾಡಿದೆ.

ಎಲ್ಲಿದೆ ಮದ್ಯದಂಗಡಿ?
ಸಂಜೆಗತ್ತಲು ಆಗುತ್ತಿದ್ದಂತೆ ಜನರು ಮುಖ್ಯರಸ್ತೆಯಲ್ಲಿದ್ದ ಮದ್ಯದಂಗಡಿಗೆ ಹೋಗುವ ದೃಶ್ಯ ಸಾಮಾನ್ಯವಾಗಿತ್ತು.ಆದರೆ ಈಗ ಮದ್ಯದಂಗಡಿ ಮುಖ್ಯರಸ್ತೆಯಲ್ಲಿ ಇರದೆ, ಹೊಸತಾಗಿ ಮದ್ಯದಂಗಡಿ ತೆರೆಯದಿರುವುದರಿಂದ ಜನರು ಮದ್ಯದಂಗಡಿ ಎಲ್ಲಿದೆ ಎಂದು ಕೇಳುತ್ತಿದ್ದಾರೆ. ಮೈಲಿ ದೂರ ಇದೆ ಎಂದರೆ ರಿಕ್ಷಾ ಮಾಡಿಕೊಂಡಾದರೂ ಕುಡಿಯಲೇಬೇಕು ಎಂಬ ಹಂಬಲ ಮದ್ಯ ಪ್ರಿಯರದ್ದು.

ಮದ್ಯಕ್ಕೆ ಮಧ್ಯವರ್ತಿಗಳು
ಮದ್ಯ ಸಿಗುತ್ತಿಲ್ಲ ಎಂದಾದಾಗ ಕಳ್ಳಬಟ್ಟಿ ನಕಲಿ ಮದ್ಯದ ಹಾವಳಿ ಮತ್ತೆ ಗರಿಗೆದರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಮದ್ಯ ಹುಡುಕಿಕೊಂಡು ಬರುವವರಿಗೆೆ ಎಲ್ಲಿ ಮದ್ಯ ದೊರೆಯುತ್ತದೆ ಎಂದು ಹೇಳಲು ಕೆಲವು ಮಧ್ಯವರ್ತಿಗಳು ಕಾಣುತ್ತಿದ್ದಾರೆ.

ಅಂಗಡಿಗಳಲ್ಲಿ ಮದ್ಯ ಮಾರಾಟ
ಅಂಗಡಿಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟದ ಬಗ್ಗೆ ಗುಮಾನಿ ಇದೆ. ಪೇಟೆಯಲ್ಲಿ ಹಾಗೂ ಹಳ್ಳಿಯ ಆ ಅಂಗಡಿಗೆ ಹೋಗು ಅಲ್ಲಿ ಮದ್ಯ ದೊರೆಯುತ್ತದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಸ್ಥಳೀಯ ಪೊಲೀಸರು, ಅಬಕಾರಿ ಇಲಾಖೆಯವರು ಗಮನಹರಿಸಬೇಕಾಗಿದೆ.

ಮಡಂತ್ಯಾರು ಪೇಟೆಯಲ್ಲಿದ್ದ ಮದ್ಯದ ಅಂಗಡಿಯನ್ನು ಕೊಲ್ಪೆದಬೆ„ಲು ಸೋಣಂ ದೂರು ಗ್ರಾಮೀಣ ರಸ್ತೆಯ ಪ್ರದೇಶಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ವಿರೋಧ ವ್ಯಕ್ತವಾಗಿದೆ. ಮದ್ಯದಂಗಡಿ ಕಾನೂನು ಪ್ರಕಾರವೇ ಇದ್ದರೂ ಅಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿದ್ದು ಹತ್ತಿರದಲ್ಲೇ ಸರಕಾರಿ ಶಾಲೆ, ಐಟಿಐ ಇದೆ. ಈ ವಠಾರದಲ್ಲಿ ಪರವಾನಿಗೆ ನೀಡಬಾರದು ಎಂದು ಮಾಲಾಡಿ ಮದ್ಯದಂಗಡಿ ವಿರೋಧಿ ಹೋರಾಟ ಸಮಿತಿ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಗ್ರಾಮ ಸಮಿತಿ, ಮದ್ಯದಂಗಡಿ ಸ್ಥಳಾಂತರ ಹಕ್ಕೊತ್ತಾಯ ನಾಗರಿಕ ಸಮಿತಿ ಮಾಲಾಡಿ ವತಿಯಿಂದ ಮಾಲಾಡಿ ಗ್ರಾ.ಪಂ. ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ.
– ಚಂದ್ರಶೇಖರ್‌ ಎಸ್‌. ಅಂತರ

ಮದ್ಯಕ್ಕಾಗಿ ಸಹಿ ಸಂಗ್ರಹಣೆ
ಮದ್ಯದ ಅಂಗಡಿಯಲ್ಲಿ ಮದ್ಯ ದೊರೆಯದೆ ದುಬಾರಿ ಖರ್ಚಿನಲ್ಲಿ ಮದ್ಯ ತರಿಸಬೇಕಾದ ಅನಿವಾರ್ಯತೆ ಇದೆ.ಕೂಲಿ ಕೆಲಸ ಮಾಡುವ ನಮಗೆ ಇದು ಅಸಾಧ್ಯ.ಇದರಿಂದ ಕಳ್ಳಭಟ್ಟಿ ಸಾರಾಯಿಗಳ ಸಂಖ್ಯೆ ಜಾಸ್ತಿಯಾಗಬಹುದು. ಅಬಕಾರಿ ಇಲಾಖೆಯ ನಿಯಮ ಉಲ್ಲಂಘನೆಯಾಗದಂತೆ ಮದ್ಯದಂಗಡಿ ತೆರೆಯುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮಾಲಾಡಿ ಕೊಲ್ಪೆದಬೈಲಿನ ಸುಮಾರು 300 ನಾಗರಿಕರು ಸಹಿ ಮಾಡಿ ಗ್ರಾ.ಪಂ.ಗೆ ನೀಡಿದ್ದಾರೆ.

ನಿರ್ಣಯ ಕೈಗೊಂಡಿಲ್ಲ 
ಮದ್ಯದಂಗಡಿಗೆ ಪರವಾನಗಿ ಕೊಡುವ ಹಕ್ಕು ಗ್ರಾ.ಪಂ.ಗೆ ಇಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಬಂಧಪಟ್ಟ ಇಲಾಖೆಗೆ ಮನವಿ ನೀಡಬೇಕಾಗುತ್ತದೆ. ಹಾಗಾಗಿ ಮದ್ಯಬೇಕು ಎಂದು ಸಹಿ ಮಾಡಿದವರ ಮನವಿ ಹಾಗೂ ಮದ್ಯದಂಗಡಿ ಆ ಪ್ರದೇಶದಲ್ಲಿ ತೆರೆಯಬಾರದು ಎಂದು ಬಂದ ಮನವಿ ಕುರಿತು ನಿರ್ಣಯ ಕೈಗೊಂಡಿಲ್ಲ.
– ಬೇಬಿ ಸುವರ್ಣ, ಮಾಲಾಡಿ ಗ್ರಾ.ಪಂ. ಅಧ್ಯಕ್ಷರು

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.