ಕೊಪ್ಪಳ ಕೂಲಿ ಕಾರ್ಮಿಕರಿಗೆ ಊಟ-ತಿಂಡಿ ಕೊಟ್ಟ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ಐ.!
Team Udayavani, Mar 28, 2020, 3:26 PM IST
ಬಂಟ್ವಾಳ: ಒಂದೆಡೆ ಮಾಡುವುದಕ್ಕೆ ಕೆಲಸವಿಲ್ಲ, ಕೂತು ತಿನ್ನೋಣ ಎಂದರೆ ಕೈಯಲ್ಲಿ ದುಡ್ಡಿಲ್ಲ, ಊರಿಗೆ ಹೋಗೋಣವೆಂದರೆ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ ಪರವೂರಿನ ಕೂಲಿ ಕಾರ್ಮಿಕರು.
ಇದೇ ಕಾರಣಕ್ಕೆ ಕೊಪ್ಪಳ ಮೂಲದ 12 ಮಂದಿಯ ಕುಟುಂಬವೊಂದು ನಡೆದುಕೊಂಡೇ ಊರಿಗೆ ಹೋಗಲು ಮುಂದಾಗಿದ್ದಾರೆ. ಈ ಕುಟುಂಬ ಊಟ ತಿಂಡಿಯಿಲ್ಲದೆ ನಡೆದುಕೊಂಡು ಹೋಗುವುದನ್ನು ಕಂಡ ರೌಂಡ್ಸ್ ನಲ್ಲಿದ್ದ ಬಂಟ್ವಾಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಅವರು ಕಾರ್ಮಿಕರನ್ನು ಬ್ರಹ್ಮರಕೂಟ್ಲು ಟೋಲ್ ಬಳಿ ಕೂರಿಸಿ, ಬಿಸ್ಕೇಟ್ – ನೀರು ಕೊಟ್ಟು ಸಂತೈಸಿದ್ದಾರೆ.
ಬಳಿಕ ಕುಟುಂಬ ಫರಂಗಿಪೇಟೆ ತಲುಪುತ್ತಿದ್ದಂತೆ ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿ ಕಳುಹಿಸಿದ್ದಾರೆ. ಪೊಲೀಸ್ ಇಲಾಖೆಯ ಎಎಸ್ಐ ರಮೇಶ್, ಸಿಬಂದಿ ನಝೀರ್, ಸೋಮಶೇಖರ್ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ