ಚಂದ್ರಗ್ರಹಣ: ಪೂಜೆ, ಸೇವೆ, ಅನ್ನಸಂತರ್ಪಣೆ ವ್ಯತ್ಯಯ
Team Udayavani, Jul 27, 2018, 10:58 AM IST
ಬೆಳ್ತಂಗಡಿ: ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆ ವರೆಗೆ ಸಂಭವಿಸುವ ಈ ಶತಮಾನದ ಅತಿದೀರ್ಘ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕರಾವಳಿಯ ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಸೇವೆ, ಅನ್ನಸಂತರ್ಪಣೆ ವ್ಯತ್ಯಯಗೊಳ್ಳಲಿದೆ.
ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ದೇವರ ದರ್ಶನ, ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಅನ್ನ ಪೂರ್ಣ ಛತ್ರದಲ್ಲಿ ಸಂಜೆ 6.30ರಿಂದ 8ರ ವರೆಗೆ ಅನ್ನದಾನ ನಡೆಯಲಿದೆ.
ಕಟೀಲು: ಕಟೀಲು ದೇವಸ್ಥಾನದಲ್ಲಿ ಅಪರಾಹ್ನ 2.50ರ ಅನಂತರ ಯಾವುದೇ ಸೇವೆ ಇರುವುದಿಲ್ಲ. ರಾತ್ರಿ ಪೂಜೆ ಮತ್ತು ಅನ್ನಪ್ರಸಾದ ಇರುವುದಿಲ್ಲ. ಆದರೆ ದೇವಸ್ಥಾನ ತೆರೆದಿದ್ದು, ಭಕ್ತರು ಭೇಟಿ ಕೊಡಬಹುದಾಗಿದೆ. ರಾತ್ರಿಯಿಂದ ಬೆಳಗ್ಗಿನ ತನಕ ಭಜನೆ ನಡೆಯಲಿದೆ. ಗ್ರಹಣ ಕಾಲದಲ್ಲಿ ದುರ್ಗೆಗೆ ಅಭಿಷೇಕ ನಡೆಯಲಿದೆ.
ಕುಂದಾಪುರ: ಕೊಲ್ಲೂರು, ಆನೆಗುಡ್ಡೆ, ಮಾರಣಕಟ್ಟೆ ದೇವಸ್ಥಾನಗಳಲ್ಲಿ ಜು. ಬೆಳಗ್ಗೆ, ಮಧ್ಯಾಹ್ನದವರೆಗೆ ಯಥಾ ಪ್ರಕಾರ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿಯ ಪೂಜೆಯಲ್ಲಿ ವ್ಯತ್ಯಾಸ ಮಾಡಲಾಗಿದೆ.
ಕೊಲ್ಲೂರಿನಲ್ಲಿ ಪೂಜೆ ಎಂದಿನಂತೆ ಇರುತ್ತದೆ. ರಾತ್ರಿಯ ಅನ್ನಸಂತರ್ಪಣೆ ಇರುವುದಿಲ್ಲ. ಗ್ರಹಣ ಬಿಡುವಿನ ಬಳಿಕ ದೇವಿಗೆ ವಿಶೇಷ ಪೂಜೆ ನಡೆಯಲಿದೆ. ಆನೆಗುಡ್ಡೆ ದೇವಸ್ಥಾನದಲ್ಲಿ ಮಧ್ಯಾಹ್ನ 12.30ರ ಮಹಾಪೂಜೆ 11.30ಕ್ಕೆ, 2.30ರ ವರೆಗಿನ ಅನ್ನ ಪ್ರಸಾದ ಸೇವೆ 1 ಗಂಟೆಯ ವರೆಗೆ ಮಾತ್ರ ನಡೆಯಲಿದೆ. ದರ್ಶನವಿದ್ದರೂ, ಯಾವುದೇ ಸೇವೆ ಇರುವುದಿಲ್ಲ. ರಾತ್ರಿಯ ಪೂಜೆ ಸಂಜೆ 6ಕ್ಕೆ ನೆರವೇರಲಿದೆ.
ಕಮಲಶಿಲೆಯಲ್ಲಿ ಎಂದಿನಂತೆ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ. ಗ್ರಹಣ ಬಿಡುವಿನ ಬಳಿಕ ವಿಶೇಷ ಪೂಜೆ ಇರಲಿದೆ. ಮಾರಣಕಟ್ಟೆಯಲ್ಲಿ ಮಧ್ಯಾಹ್ನವರೆಗೆ ನಿತ್ಯ ಪೂಜಾ ವಿಧಿ ಅನ್ನಸಂತರ್ಪಣೆ ನಡೆಯಲಿದೆ. 1.30ರ ಅನಂತರ ದೇವರ ದರ್ಶನವಿದ್ದು, ಪೂಜೆ, ಸೇವೆ ಇರುವುದಿಲ್ಲ. ಹಟ್ಟಿಯಂಗಡಿಯಲ್ಲಿ ಎಂದಿನಂತೆ ಪೂಜಾ ಕೈಂಕರ್ಯ, ಅನ್ನದಾನ ಸೇವೆ ನೆರವೇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ