ವರುಷಗಳು ಸರಿದವೆಷ್ಟು ಮಂಗಲಮೂರ್ತಿಯ ರೂಪಿಸಿ!


Team Udayavani, Jan 28, 2019, 12:50 AM IST

maha-majjana.jpg

ತಮಿಳುನಾಡಿನಿಂದ ಬಂದು ಕಾರ್ಕಳದಲ್ಲಿ ನೆಲೆ ನಿಂತ ಶಿಲ್ಪಿಗಳ ಕುಟುಂಬದ ಕಣ್ಣನ್‌ 20ನೇ ಶತಮಾನದ ಮಹಾಮೂರ್ತಿಯ ಕೆತ್ತನೆ ಕೆಲಸದಲ್ಲಿ ಭಾಗಿಯಾದುದೂ ಒಂದು ವಿಶೇಷ.

ಬೆಳ್ತಂಗಡಿ: ಅದೊಂದು ಅದ್ಭುತ ಅನುಭವ. ಭಗವಾನ್‌ ಶ್ರೀ ಬಾಹುಬಲಿ ಮೂರ್ತಿಯ ಕೆತ್ತನೆ ಜೀವಮಾನದ ಒಂದು ಅನುಭವ ವಿಶೇಷವೇ ಸರಿ. ಆ ಮಹಾನ್‌ಮೂರ್ತಿಯನ್ನು ಕೆತ್ತಿ ನಿಲ್ಲಿಸಿ ವರುಷಗಳು ಕಳೆದು ಹೋದವೆಷ್ಟು…! 
ಇದು ರೆಂಜಾಳ ಗೋಪಾಲ ಶೆಣೈ ಅವರ ನಿರ್ದೇಶನದಡಿ ಧರ್ಮಸ್ಥಳ ಬಾಹುಬಲಿ ಮೂರ್ತಿಯ ಕೆತ್ತನೆ ಕೆಲಸದಲ್ಲಿ ಭಾಗಿಯಾಗಿದ್ದ ಶಿಲ್ಪಿ ವಿ.ಆರ್‌. ಕಣ್ಣನ್‌ ಅವರ ಮನದಾಳದ ಮಾತುಗಳು.

ಧರ್ಮಸ್ಥಳ ಶ್ರೀ ಬಾಹುಬಲಿಯ ಕೆತ್ತನೆ ಆರಂಭವಾದಾಗ ಕಣ್ಣನ್‌ ಸುಮಾರು 22-23 ವರ್ಷ ವಯಸ್ಸಿನ ನವಯುವಕ. ಕಲ್ಲನ್ನೂ ಕರಗಿಸುವಂತಹ ಉತ್ಸಾಹಿ. ಅವರು ಮತ್ತು ಇನ್ನಿತರ ಶಿಲ್ಪಿಗಳು ಶೆಣೈ ಅವರ ಮಾರ್ಗದರ್ಶನದಲ್ಲಿ ಮಂಗಲಪಾದೆಯಲ್ಲಿ ಮಲಗಿದ್ದ ಕರಿಕಲ್ಲನ್ನು ಆರು ವರ್ಷಗಳ ಅವಧಿಯಲ್ಲಿ ಪ್ರತಿಮನ್ಮಥ ಮೂರ್ತಿಯಾಗಿ ಕಟೆದಿದ್ದರು. ಶಿಲ್ಪಗಳ ಕೆತ್ತನೆ ಕಾಯಕದಲ್ಲಿ ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಜತೆಗೆ ತನ್ನ ಒಡನಾಟ ಸುದೀರ್ಘ‌ 20 ವರ್ಷಗಳ ಅವಧಿಯದ್ದು ಎಂದು ಕಣ್ಣನ್‌ ನೆನಪಿಸಿಕೊಳ್ಳುತ್ತಾರೆ.

ಬಾಹುಬಲಿ ಕೆತ್ತನೆ ಕೆಲಸ ಬೆಳಗ್ಗೆ 8ಕ್ಕೆ ಆರಂಭಗೊಂಡರೆ ಸಂಜೆ 6ರ ವರೆಗೆ ಮುಂದುವರಿಯುತ್ತಿತ್ತು. ಮಧ್ಯಾಹ್ನ 12ರಿಂದ 1ರ ವರೆಗೆ ಊಟದ ವಿರಾಮ. ಪೂಜ್ಯ ಹೆಗ್ಗಡೆಯವರು ಶಿಲ್ಪಿಗಳ ಜತೆಗೆ ಸದಾ ಇರುತ್ತಿದ್ದರು. ಆಗ ಕೆಲಸ ಮಾಡುವ ಸ್ಥಳದಲ್ಲೇ ಹೆಗ್ಗಡೆಯವರಿಗೆ ಉಳಿದುಕೊಳ್ಳುವುದಕ್ಕೆ ತಾತ್ಕಾಲಿಕ ಮನೆ(ಬುಡಾರ)ಯ  ವ್ಯವಸ್ಥೆಯನ್ನೂ ಮಾಡಿದ್ದರು ಎಂದು ಕಣ್ಣನ್‌ ಸ್ಮರಿಸಿಕೊಳ್ಳುತ್ತಾರೆ.

ದೇವಕಾಯಕ ನಿರಂತರ
ಧರ್ಮಸ್ಥಳದ ವಿಗ್ರಹವನ್ನು ಕೆತ್ತಿದ ಬಳಿಕ ಕಣ್ಣನ್‌ ಅದಕ್ಕಿಂತ ಗಾತ್ರದಲ್ಲಿ ಕೊಂಚ ಕಿರಿದಾದ ಮತ್ತೂಂದು ಬಾಹುಬಲಿ ಮೂರ್ತಿ ಯನ್ನೂ ಕೆತ್ತಿದ್ದರಂತೆ. ಅದನ್ನು ಉತ್ತರ ಭಾರತದ ಆಗ್ರಾದತ್ತ ಸಾಗಿಸಲಾಗಿತ್ತು ಎಂದು ಕಣ್ಣನ್‌ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ 73ರ ಮಾಗಿದ ವಯಸ್ಸಿನಲ್ಲಿದ್ದರೂ ಕಣ್ಣನ್‌ ಕೇರಳದ ತಳಿಪರಂಬದ ದೇವಸ್ಥಾನವೊಂದರ ಶಿಲ್ಪ ಕೆತ್ತನೆಯ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.

ಶಿಲೆಯ ಆಯ್ಕೆಯ ಸವಾಲು ಮಹಾನ್‌ ಮೂರ್ತಿ 
ಕೆತ್ತನೆಯ ಹೊಣೆಯನ್ನು ವಹಿಸಿಕೊಂಡ ಶೆಣೈ ಅವರ ಎದುರಿದ್ದುದು ಶಿಲೆಯ ಆಯ್ಕೆಯ ಸವಾಲು. ರೂಪುಗೊಳ್ಳಬೇಕಾದ ಮೂರ್ತಿ ಅಂತಿಂಥದ್ದಲ್ಲ; ಅನಾದಿ ಕಾಲಕ್ಕೆ ಮಳೆ-ಬಿಸಿಲು-ಚಳಿಯನ್ನು ಎದುರಿಸಿ ತಲೆಯೆತ್ತಿ ನಿಂತಿರಬೇಕಾದ ವೈರಾಗ್ಯಮೂರ್ತಿಯದು. ಆಗ ಶೆಣೈ ಅವರಿಗೆ ಸೂಕ್ತವೆನಿಸಿದ್ದು ಕಾರ್ಕಳದ ಸಮೀಪ ಮಂಗಲಪಾದೆಯಲ್ಲಿದ್ದ ನೂರು ಅಡಿ ಎತ್ತರ ಹಾಗೂ ಐವತ್ತೆಂಟು ಅಡಿಗಳ ಬೃಹತ್‌ ಶಿಲೆ.
ಶಿಲ್ಪಶಾಸ್ತ್ರ ದಂತೆ 39 ಅಡಿಯ ಬೃಹತ್‌ ಮೂರ್ತಿಯಕೆತ್ತನೆಯ ಅಭೂತಪೂರ್ವ ಕಾರ್ಯಕ್ಕೆ 1967ರ ವಿಜಯ ದಶಮಿಯ ಶುಭದಿನದಂದು ಮೂಹೂರ್ತ ನಿಗದಿಯಾಯಿತು. 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.