ಮಳಲಿ ದರೋಡೆ: ಪ್ರಮುಖ ರೂವಾರಿ ಬಂಧನ
Team Udayavani, Jul 23, 2019, 9:18 AM IST
ಬಜಪೆ: ಮಳಲಿಯಲ್ಲಿ ಜು. 14ರಂದು ನಡೆದಿದ್ದ ದರೋಡೆ ಪ್ರಕರಣದ ಪ್ರಮುಖ ರೂವಾರಿ, ಕುಖ್ಯಾತ ಆರೋಪಿ ರೌಡಿ ಶೀಟರ್ ಉಳಾಯಿಬೆಟ್ಟಿನ ಮಹಮ್ಮದ್ ಖಾಲಿದ್ ಯಾನೆ ಕೋಯ(32)ನನ್ನು ಬಜಪೆ ಪೊಲೀಸರು ಸೋಮವಾರ ಬೆಳಗ್ಗೆ ಉಳಾಯಿಬೆಟ್ಟಿನಿಂದ ಬಂಧಿಸಿದ್ದಾರೆ. ಈತನಿಂದ 50 ಸಾ. ರೂ., ಎರಡು ಮೊಬೈಲ್, ತಲವಾರು ಹಾಗೂ ಚೂರಿಯನ್ನು ವಶಕ್ಕೆ ಪಡೆಯಲಾಗಿದೆ.
ಮಹಮ್ಮದ್ ಖಾಲಿದ್ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ 4 ಕೊಲೆ ಯತ್ನ ಸಹಿತ ಒಟ್ಟು 9 ಪ್ರಕರಣ, ಬಜಪೆ ಠಾಣೆಯಲ್ಲಿ ಒಂದು ಕೊಲೆ ಸಹಿತ ಒಟ್ಟು 4 ಪ್ರಕರಣ ದಾಖಲಾಗಿವೆ. ಈತನನ್ನು ಗಡೀಪಾರು ಮಾಡಲಾಗಿದ್ದರೂ ತಲೆಮರೆಸಿಕೊಂಡು ಇತರರೊಂದಿಗೆ ಸೇರಿ ಫೈನಾನ್ಸರ್ ಸೆಂಥಿಲ್ ಕುಮಾರ್ ಅವರನ್ನು ಹಾಡಹಗಲೇ ಮಳಲಿಯಲ್ಲಿ ಹಗಲೇ ದರೋಡೆ ಮಾಡಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಮೂಳೂರು ಗ್ರಾಮದ ಮಠದಗುಡ್ಡೆ ಸೈಟಿನ ಅಬ್ದುಲ್ ಅಜೀಜ್ ನೌಷಾದ್ ಯಾನೆ ಅಕಲ್ (19), ಬಡಗುಳಿಪಾಡಿ ಗ್ರಾಮದ ನಾರ್ಲಪದವಿನ ಮಹಮ್ಮದ್ ಮುಸ್ತಫಾ ಯಾನೆ ಮುಸ್ತಫಾ (23), ಉಳಾಯಿಬೆಟ್ಟು ಗ್ರಾಮ ಪಟ್ರಕೋಡಿ ಹೌಸ್ನ ಆಶ್ಲೇಷ್ ಎ. ಕೋಟ್ಯಾನ್ ಯಾನೆ ಅಣ್ಣು (20), ಮಂಗಳೂರು ಬೋಳಾರದ ಮಹಮ್ಮದ್ ಆಶಿಕ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ