ಮಳಲಿ ದರೋಡೆ: ಮೂವರ ಬಂಧನ
Team Udayavani, Jul 19, 2019, 11:04 AM IST
ಬಜಪೆ: ಮೊಗರು ಗ್ರಾಮದ ಮಳಲಿ ಸೈಟ್ ಬಳಿ ಜು.14ರಂದು ಬೆೈಕಿನಲ್ಲಿ ಹೋಗುತ್ತಿದ್ದ ಸೆಂಥಿಲ್ ಕುಮಾರ್ ಅವರನ್ನು ಎರಡು ಬೆೈಕ್ನಲ್ಲಿ ಬಂದ ಯುವಕರು ಅಡ್ಡಗಟ್ಟಿ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರೂ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಬಜಪೆ ಪೊಲೀಸರು ಮೂವರನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ನ ಅಬ್ದುಲ್ ಅಜೀಜ್ ನೌಷಾದ್ ಯಾನೆ ಅಕಲ್ (19) ಮತ್ತು ಬಡಗುಳಿ ಪಾಡಿ ಗ್ರಾಮದ ನಾರ್ಲಪದವಿನ ಮಹಮ್ಮದ್ ಮುಸ್ತಫಾ ಯಾನೆ ಮುಸ್ತಾಫ (23) ಅವರನ್ನು ಕುಕ್ಕುದ ಕಟ್ಟೆಯಿಂದ ಹಾಗೂ ಉಳಾಯಿಬೆಟ್ಟು ಪಟ್ರಕೋಡಿ ಹೌಸ್ನ ಆಶ್ಲೇಷ್ ಎ. ಕೋಟ್ಯಾನ್ ಯಾನೆ ಅಣ್ಣು(20)ನನ್ನು ಉಳಾಯಿಬೆಟ್ಟು ಬಳಿ ಬಂಧಿಸಲಾಗಿದೆ.
ಅವರಿಂದ 21,800 ರೂ., ದರೋಡೆಗೆ ಬಳಸಿದ್ದ ಬಜಾಜ್ ಡಿಸ್ಕವರ್ ಬೈಕ್, ಮೂರು ಮೊಬೈಲ್, ತಲವಾರು, ಚೂರಿ ಮುಂತಾದವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ
ಸೆಂಥಿಲ್ ಕುಮಾರ್ ಸಣ್ಣ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು, ಪರಿಚಯದವರಿಗೆ ಸಾಲ ನೀಡುತ್ತಿದ್ದರು. ಪ್ರತಿ ರವಿವಾರ ಕಲೆಕ್ಷನ್ಗೆ ಹೋಗುತ್ತಿದ್ದರು. ಜು.14ರಂದು ಬೆಳಗ್ಗೆ ಮನೆಯಿಂದ ಬೈಕಿನಲ್ಲಿ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಪೊಳಲಿ ಅಡೂರಿನಿಂದ ಮರಳು ಯಾರ್ಡ್ ನಿಂದ ಮಳಲಿ ಸೈಟಿಗೆ ಹೋಗಿ ಮಧ್ಯಾಹ್ನ ಮೊಗರು ಗ್ರಾಮದ ಮಳಲಿ ಸೈಟ್ ಸಮೀಪ ದರೋಡೆ ಮಾಡಲಾಗಿತ್ತು. ಅವರ ಬೆೈಕಿನ ಬಾಕ್ಸನ್ನು ಒಡೆದು ಅದರಲ್ಲಿದ್ದ 2,05,000 ರೂ.ಯನ್ನು ದರೋಡೆ ಮಾಡಲಾಗಿದ್ದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದು ಮೂರು ದಿನದೊಳಗೆ ಮೂವರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಬಲೆ ಬೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!