ಮಂಗಳೂರು: 10 ಲಕ್ಷ ರೂ. ವಂಚನೆ ಪ್ರಕರಣ: ಕೇಸು ದಾಖಲು
Team Udayavani, Sep 30, 2022, 11:35 PM IST
ಮಂಗಳೂರು: ಜಾಗ ಸಮತಟ್ಟು ಮಾಡುವ ಕೆಲಸ ಮಾಡುತ್ತಿದ್ದ ಕೆಎಂ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕರಿಗೆ ಹೊಸ ಹಿಟಾಚಿ ಯಂತ್ರ ನೀಡುವುದಾಗಿ 10 ಲಕ್ಷ ರೂ. ಹಣ ಪಡೆದು ವಂಚನೆ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಸಂಸ್ಥೆಯ ಮಾಲಕ ಎಂ. ಕುಮಾರೇಶ್ ವಂಚನೆಗೊಳಗಾದವರು. ಅವರು ಹಿಟಾಚಿ ಯಂತ್ರವನ್ನು ಖರೀದಿ ಮಾಡಲು ತನ್ನ ಕೆಲಸಗಾರ ಕಿಶೋರ್ ಕುಮಾರ್ ಮುಖಾಂತರ ಮಹಾರಾಷ್ಟ್ರದ ಅಮರಾವತಿಯಲ್ಲಿನ ಅಮೋಲ್ ಸರ್ಜೆàರಾವ್ ಉರ್ಕುಡೆ ಅವರ ಬಳಿ ಇದ್ದ ಹಿಟಾಚಿ ಯಂತ್ರವನ್ನು ಮಾರಾಟ ಮಾಡುವ ವಿಚಾರ ತಿಳಿದರು.
ಕಿಶೋರ್ ಅವರನ್ನು ಯಂತ್ರ ಖರೀದಿಗಾಗಿ ಅಲ್ಲಿಗೆ ಕಳುಹಿಸಿ ಯಂತ್ರ ನೋಡಿದ ಬಳಿಕ 13 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದರು. ಮುಂಗಡ 10 ಲ.ರೂ. ಮೊತ್ತವನ್ನು ಅಮೋಲ್ಗೆ ವರ್ಗಾಯಿಸಿದ್ದಾರೆ.
ಅದೇ ದಿನ ಕಿಶೋರ್ ಅಮರಾವತಿಗೆ ಹೋಗಿ ಅಮೋಲ್ನನ್ನು ಸಂಪರ್ಕಿ ಸಲು ಯತ್ನಿಸಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಮಂಗಳೂರು ಉತ್ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.