ಮಂಗಳೂರು-ಬೆಂಗಳೂರು ರೈಲು ಯಾನ ವಿಳಂಬ
ಎಡಕುಮೇರಿ: ಖಾಸಗಿ ಸಂಸ್ಥೆ ಮೂಲಕ ಹಳಿ ದುರಸ್ತಿ
Team Udayavani, Aug 17, 2019, 5:36 AM IST
ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ರೈಲು ಓಡಾಟ ಇನ್ನೂ ಹತ್ತು ದಿನ ವಿಳಂಬವಾಗಲಿದೆ. ಎಡಕುಮೇರಿಯಿಂದ ಮುಂದಕ್ಕೆ ಗುಡ್ಡ ಜರಿದು ಹಳಿಗೆ ಹಾನಿಯಾಗಿದ್ದು, ಹಳಿ ಜೋಡಿಸುವ ಕೆಲಸ ಭರದಿಂದ ನಡೆಯುತ್ತಿದೆ.
ಸುಬ್ರಹ್ಮಣ್ಯ ಕ್ರಾಸ್ ರೋಡ್-ಹಾಸನ ನಡುವಿನ ಎಡಕುಮೇರಿಯಿಂದ ಮುಂದಕ್ಕೆ 50 ಮೀ. ದೂರದಲ್ಲಿ ಗುಡ್ಡವು ಹಳಿಯ ಸಹಿತವೇ ಅ.8ರಂದು ಕುಸಿದಿತ್ತು. ಹಳಿ ಅಡಿಭಾಗದ ಸ್ಲಿàಪರ್ಗಳಿಗೆ ಭಾರೀ ಹಾನಿಯಾಗಿದೆ. ಹಳಿಗಳನ್ನು ಸಂಪೂರ್ಣ ಜೋಡಿಸುವ ಕೆಲಸ ನಡೆಯುತ್ತಿದೆ. ಹಳಿಗಳು ಆಳಕ್ಕೆ ಜಾರಿರುವುದರಿಂದ ಕೆಳಗಿನಿಂದಲೇ ತಡೆಗೋಡೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಕಾಮಗಾರಿಯನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ, ದುರಸ್ತಿಗೆ ಬೇಕಿರುವ ಸ್ಲಿàಪರ್ ಮತ್ತಿತರ ಸಾಮಗ್ರಿಗಳನ್ನು ದಾಸ್ತಾನು ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿ ವಲಯದ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪ್ರ ಕಾಮಗಾರಿ ಹಲವು ಸಮಸ್ಯೆಗಳು ಎದುರಾದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಹಳಿ ಅಳವಡಿಸಿದ ಪಕ್ಕದಲ್ಲಿ ನೀರಿನ ಒರತೆಯಿದ್ದು, ಮಣ್ಣು ಆಳಕ್ಕೆ ಸರಿದಿದೆ. ಹೀಗಾಗಿ ತಡೆಗೋಡೆ ನಿರ್ಮಾಣ ಕಷ್ಟವಾಗುತ್ತಿದೆ. ತಡೆಗೋಡೆ ನಿರ್ಮಾಣವಾದ ಬಳಿಕ ಸ್ಲಿàಪರ್ ಜೋಡಣೆ ಆರಂಭವಾಗಬೇಕಿದೆ. ಕಾಮಗಾರಿ ಪೂರ್ಣಗೊಳ್ಳಲು ಹಲವು ದಿನ ಹಿಡಿಯಬಹುದೆಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toll Gate: ಎ.1ರಿಂದ ಟೋಲ್ ದರದಲ್ಲಿ ಹೆಚ್ಚಳ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು