ಮಂಗಳೂರು ವಿಮಾನ ಪ್ರಯಾಣಿಕರು ರಾತ್ರಿಯಿಡೀ ಕೊಚ್ಚಿ ನಿಲ್ದಾಣದಲ್ಲೇ ಬಾಕಿ!
Team Udayavani, Jul 10, 2022, 7:15 AM IST
ಮಂಗಳೂರು: ದುಬಾೖಯಿಂದ ಮಂಗಳೂರಿಗೆ ಜು. 8ರಂದು ರಾತ್ರಿ ಬಂದ ಸ್ಪೈಸ್ಜೆಟ್ ವಿಮಾನವು ತಾಂತ್ರಿಕ ಕಾರಣಗಳಿಂದ ಇಳಿಯದೆ ಕೊಚ್ಚಿಗೆ ತೆರಳಿದ್ದು 189 ಮಂದಿ ಪ್ರಯಾಣಿಕರು ರಾತ್ರಿಯಿಡೀ ನಿಲ್ದಾಣದಲ್ಲೇ ಇರುವಂತಾಯಿತು.
ಜು. 8ರ ಸಂಜೆ 5ಕ್ಕೆ ವಿಮಾನ ದುಬಾೖಯಿಂದ ಹೊರಟು ರಾತ್ರಿ 9.30ಕ್ಕೆ ಮಂಗಳೂರಿಗೆ ಆಗಮಿಸಿದೆ, ಲ್ಯಾಂಡ್ ಆಗುವುದಕ್ಕೆ ಮುಂದಾಗಿತ್ತು. ಭೂಸ್ಪರ್ಶ ಮಾಡುತ್ತದೆ ಎನ್ನುವಾಗಲೇ ಮತ್ತೆ ಪೈಲಟ್ ಮೇಲೇರಿಸಿದ್ದು ಕೊಯಮತ್ತೂರಿಗೆ ಹೋಗುವುದಾಗಿ, ಇಂಧನ ಭರ್ತಿ ಮಾಡುವುದಾಗಿ ತಿಳಿಸಲಾಯಿತು. ಬಳಿಕ ಕೊಚ್ಚಿಗೆ ಹೋಗುವುದಾಗಿ ತಿಳಿಸಲಾಯಿತು.
ರಾತ್ರಿ ಕೊಚ್ಚಿಯಲ್ಲಿ ಇಳಿಯಿತು. ಈ ಪೈಲಟ್ ಶಿಫ್ಟ್ ಮುಗಿದಿದ್ದು ಇನ್ನೊಬ್ಬರು ಬರುತ್ತಾರೆ ಅಲ್ಲಿವರೆಗೆ ವಿಶ್ರಾಂತಿ ಮಾಡಿ ಎಂದು ಪ್ರಯಾಣಿಕರಿಗೆ ತಿಳಿಸಲಾಯಿತು. ಬಳಿಕ ಜು. 9ರ ಮುಂಜಾನೆ 3ಕ್ಕೆ ವಿಮಾನ ಹೊರಡುವುದಾಗಿ ತಿಳಿಸಿದರೂ ಬೆಳಗ್ಗಿನ ವರೆಗೂ ಹೊರಡಲಿಲ್ಲ.
ಕೊನೆಗೆ ಬೆಳಗ್ಗೆ 8.30ಕ್ಕೆ ವಿಮಾನ ಹೊರಡುವುದಾಗಿ ಪ್ರಯಾಣಿಕರನ್ನೆಲ್ಲ ವಿಮಾನವೇರುವಂತೆ ಸೂಚಿಸಿದರು. ವಿಮಾನ 10ರ ವರೆಗೆ ಹೊರಡಲೇ ಇಲ್ಲ. ಮಂಗಳೂರು ವಿಮಾನ ನಿಲ್ದಾಣದಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ತಿಳಿಸಿದರು. ಕೊನೆಗೆ ವಿಮಾನ 10ಕ್ಕೆ ಹೊರಟಿದ್ದು 10.50ಕ್ಕೆ ಮಂಗಳೂರಿನಲ್ಲಿ ಬಂದಿಳಿದಿದೆ.
ಊಟ, ವಿಶ್ರಾಂತಿ ಇಲ್ಲ
ಹವಾಮಾನದ ನೆಪವೊಡ್ಡಲಾಗಿದೆ. ಆದರೆ ಯಾವುದೋ ಬೇರೆ ತಾಂತ್ರಿಕ ಕಾರಣಗಳಿಂದ ಕೊಚ್ಚಿಯಲ್ಲಿ ಇಳಿಸಿದ್ದಾರೆ. ಅಲ್ಲೂ ಯಾವುದೇ ಸೌಲಭ್ಯ ಕೊಡಲಿಲ್ಲ, ರೂಂ ಒದಗಿಸಿಲ್ಲ, ಬದಲು ನಾವು ಏರ್ಪೋರ್ಟ್ ನಲ್ಲೇ ಕಾಯುವಂತಾಯಿತು, ನಮ್ಮ ಖರ್ಚಲ್ಲೇ ಊಟ, ತಿಂಡಿ ಮಾಡಿಕೊಳ್ಳುವ ಹಾಗೆ ಆಗಿದೆ, ಸ್ಪೈಸ್ಜೆಟ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಯಾಣಿಕ ಅಬ್ದುಲ್ ರಹಿಮಾನ್ ಜೋಕಟ್ಟೆ ಉದಯವಾಣಿಗೆ ತಿಳಿಸಿದರು.
ಇಷ್ಟೇ ಅಲ್ಲ, ಕೊಚ್ಚಿಯಲ್ಲಿ ವಿಮಾನ ಇಳಿದಾಗ ಕೆಲವು ಕೇರಳದ ಪ್ರಯಾಣಿಕರು ಅಲ್ಲೇ ಇಳಿದು ಹೋಗಿದ್ದಾರೆ, ಅವರ ಲಗೇಜ್ ಜತೆಗೆ ಕೆಲವು ಮಂಗಳೂರಿನವರ ಲಗೇಜ್ ಕೂಡ ಹೋಗಿದೆ. ಇನ್ನು ಅವರು ಅದಕ್ಕಾಗಿ ಕಾಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ