ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ
Team Udayavani, Jan 25, 2018, 1:41 PM IST
ಸುರತ್ಕಲ್ : ಕನ್ನಡ ಮನಸ್ಸುಗಳನ್ನು ಜಾಗೃತಗೊಳಿಸುವ ಕಾರ್ಯ ನಡೆಯಬೇಕಾಗಿದ್ದು, ಸಮ್ಮೇಳನಗಳು ಅಂತಃರ್ಗತವಾದ ಕನ್ನಡ ಪ್ರೇಮಕ್ಕೆ ಮೂರ್ತ ರೂಪವನ್ನು ತರುತ್ತವೆ ಎಂದು ಹಿರಿಯ ಸಾಹಿತಿ ವಾಮನ ಇಡ್ಯಾ ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಘಟಕ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಆಯೋಜಿಸಿದ್ದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.
ಪದವಿ ಕಾಲೇಜುಗಳಲ್ಲಿ ಕನ್ನಡ ವಿಷಯ ಅಧ್ಯಯನ ಅವಕಾಶ ಸರ್ವರಿಗೂ ಸಿಗುವಲ್ಲಿ ಸರಕಾರ ವಿಶೇಷ ಬೆಂಬಲ ನೀಡಬೇಕಾಗಿದೆ. ಕನ್ನಡದ ಕುರಿತಂತೆ ವಿದ್ಯಾರ್ಥಿಗಳಲ್ಲಿರುವ ಆಸಕ್ತಿಯನ್ನು ಪ್ರೋತ್ಸಾಹಿಸುವಲ್ಲಿ ಸಾಹಿತ್ಯಾಸಕ್ತರು ಚಿಂತಿಸ ಬೇಕಾಗಿದೆ ಎಂದರು.
ಪರೀಕ್ಷಾ ಗುರಿ ಮಾತ್ರ ಶಿಕ್ಷಣ
ಶಾಲೆಗಳಲ್ಲಿ ಶೈಕ್ಷಣಿಕ ಬೋಧನ ವಿಷಯಗಳಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳ ಮನ ಗೆಲ್ಲಲು ಇತ್ತೀಚಿನ ದಿನಗಳಲ್ಲಿ ಕಷ್ಟವಾಗುತ್ತಿದೆ ಮಾತ್ರವಲ್ಲ ಟಿಪ್ಪಣಿ ಓದಿ ಅರ್ಥ ಬರೆಯಿರಿ ಎನ್ನುವ ಮಟ್ಟಕ್ಕೆ ಬೋಧನೆ ತಲುಪಿದೆ. ಪರೀಕ್ಷಾ ಗುರಿ ಮಾತ್ರ ಶಿಕ್ಷಣ ಎಂಬಂತಾಗಿದೆ ಎಂದು ಹೇಳಿದರು.
ಸಾಧಕರ ನಡೆ ಆದರ್ಶ
ಹಿರಿಯ ಸಾಧಕರನ್ನು ಸಮ್ಮಾನಿಸಿದ ಜೋತಿಷಿ ಕೆ.ಸಿ. ನಾಗೇಂದ್ರ ಭಾರದ್ವಾಜ್ ಅವರು ಹಿರಿಯ ಸಾಧಕರ ನಡೆ
ನಮ್ಮೆಲ್ಲರಿಗೂ ಆದರ್ಶ ಮಾದರಿಯಾಗಿದ್ದು, ಅವರು ನಿರ್ಮಿಸಿದ ಸುಪಥದಲ್ಲಿ ಮುನ್ನಡೆಯ ಬೇಕಾಗಿದೆ ಎಂದರು.
ಯಾಜಿ ಡಾ| ನಿರಂಜನ್ ಭಟ್, ಎಚ್.ಯು. ಅನಂತಯ್ಯ, ಪ್ರೊ| ಗಿರಿಧರ ಹತ್ವಾರ್, ಟಿ.ಕೆ. ಹುಸೇನ್, ಜಾನ್ ಕೆನಡಿ,
ಶಂಕರ್ ಶೆಟ್ಟಿ, ಸುವಾಸಿನಿ ಬಬ್ಬುಕಟ್ಟೆ, ಜೆನ್ನಿ ಬಾಯಿ ಬೆಂಗರೆ, ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನಿತರ ಪರವಾಗಿ ಮಾತನಾಡಿದ ಪ್ರೊ| ಗಿರಿಧರ ಹತ್ವಾರ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಮಾನವೀಯ ಸಮಾಜ ರೂಪುಗೊಳ್ಳುತ್ತದೆಂದು ಕೃತಜ್ಞತೆ ಸಲ್ಲಿಸಿದರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಡಾ| ಬಿ. ಮುರಳೀಧರ ರಾವ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕನ್ನಡ ಸಾಹಿತ್ಯಾಭಿರುಚಿಯ ವರ್ಧನೆಗೆ ಶ್ರಮಿಸುತ್ತವೆಂದರು.
ಸಮಾನ ಶಿಕ್ಷಣ ದೊರಯಲಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಸರ್ವ ವಿದ್ಯಾರ್ಥಿಗಳಿಗೂ ಸಮಾನವಾಗಿ ಉತ್ತಮ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಬೇಕಾಗಿದೆ ಎಂದರು. ಮಂಗಳೂರು ತಾಲೂಕು ಕಸಾಪ ಗೌರವ ಕೋಶಾಧಿ ಕಾರಿ ಪ್ರೊ| ಪಿ. ಕೃಷ್ಣಮೂರ್ತಿ ಸ್ವಾಗತಿಸಿದರು. ಕಸಾಪ ಸುರತ್ಕಲ್ ಹೋಬಳಿ ಅಧ್ಯಕ್ಷ ವಿನಯ ಆಚಾರ್ ವಂದಿಸಿದರು. ಕಸಾಪ ತಾಲೂಕು ಕಾರ್ಯದರ್ಶಿ ಡಾ| ಪದ್ಮನಾಭ ಭಟ್ ಎಕ್ಕಾರು ಅವರು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಕಾರ್ಯದರ್ಶಿ ದೇವಕಿ ಅಚ್ಯುತ ಮೊದಲಾದವರು ಉಪಸ್ಥಿತರಿದ್ದರು.
ಸಾಮರಸ್ಯದ ನಾಡು ಕಟ್ಟಬೇಕು
ಸಮ್ಮೇಳನಾಧ್ಯಕ್ಷ ಪ್ರೊ| ಎಚ್. ರಮೇಶ ಕೆದಿಲಾಯ ಅವರು ಮಾತನಾಡಿ, ಮಾನವೀಯ ಸ್ಪಂದನ ಸಾಹಿತ್ಯಾಧ್ಯಯನದಿಂದ ದೊರೆಯುತ್ತಿದ್ದು, ಸೌಹಾರ್ದ ಸಾಮರಸ್ಯದ ನಾಡು ಕಟ್ಟಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರೊ| ಎಚ್. ರಮೇಶ ಕೆದಿಲಾಯರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ