ಮಂಗಳೂರು-ಮೂಡಬಿದಿರೆ-ಕಾರ್ಕಳ ಕೆಎಸ್ಆರ್ಟಿಸಿ ಬೇಡಿಕೆ ಈಡೇರಿತೇ?
Team Udayavani, Oct 31, 2017, 10:04 AM IST
ಮಂಗಳೂರು: ಬಹುಕಾಲದ ಬೇಡಿಕೆಯಾಗಿರುವ ಮಂಗಳೂರು- ಮೂಡಬಿದಿರೆ- ಕಾರ್ಕಳ ರಸ್ತೆಯ ಕೆಎಸ್ಆರ್ಟಿಸಿ ಬಸ್ಗಳ ಓಡಾಟ ಮರೀಚಿಕೆಯಾಗಿಯೇ ಉಳಿದಿದ್ದು, ಅ. 31ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಾದರೂ ಮಂಜೂರಾದೀತೇ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.
ಕೆಎಸ್ಆರ್ಟಿಸಿಯ ಆಡಳಿತ ನಿರ್ದೇಶಕರು ಮಂಗಳೂರು ಕೆಎಸ್ಆರ್ಟಿ ಬಸ್ ನಿಲ್ದಾಣ ಹಾಗೂ ಸ್ಟೇಟ್ಬ್ಯಾಂಕ್ನಿಂದ ಬಸ್ಗಳ ಓಡಾಟಕ್ಕೆ ಪರವಾನಿಗೆ ನೀಡುವಂತೆ ಕಳೆದ ಹಲವು ವರ್ಷಗಳಿಂದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಹಲವು ಕಾರಣಗಳಿಂದ ಈ ಬೇಡಿಕೆ ಇನ್ನೂ ಈಡೇರಿಲ್ಲ. ಈ ಕುರಿತು ಸಾರ್ವಜನಿಕರು ಕೂಡ ಸಂಬಂಧಪಟ್ಟವರನ್ನು ಆಗ್ರಹಿಸು ತ್ತಲೇ ಬಂದಿದ್ದಾರೆ. ಆರಂಭದಲ್ಲಿ ಕೆಎಸ್ಆರ್ಟಿಸಿಯು ಮಂಗಳೂರು ನಿಲ್ದಾಣದಿಂದ ಕಾರ್ಕಳಕ್ಕೆ ಬಸ್ ಓಡಿಸಲು ಪರವಾನಿಗೆ ನೀಡುವಂತೆ 2014ರ ಎ. 4ರಂದು ಅರ್ಜಿ ಸಲ್ಲಿಸಿತ್ತು. ಮೇ 9ರಂದು ನಡೆದ ಸಭೆಯಲ್ಲಿ ವಿಷಯ ವನ್ನು ಮುಂದೂಡಲಾಗಿತ್ತು. ಪ್ರಸ್ತುತ ಅ. 31ರಂದು ನಡೆಯುವ ಸಭೆಯಲ್ಲಿ ಪುನರ್ ಪರಿಶೀಲನೆಗೊಳ್ಳುವ ನಿರೀಕ್ಷೆ ಇದೆ. ಕೆಎಸ್ಆರ್ಟಿಸಿಯು ಮಂಗಳೂರು ನಿಲ್ದಾಣದಿಂದ 8 ಹಾಗೂ ಸ್ಟೇಟ್ಬ್ಯಾಂಕ್ನಿಂದ 12 ಬಸ್ಗಳನ್ನು ಕಾರ್ಕಳಕ್ಕೆ ಓಡಿಸಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದೆ. ಸಭೆಯಲ್ಲಿ 20 ಬಸ್ಗಳ ಪರವಾನಿಗೆ ವಿಚಾರವೂ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಇತರ ರಸ್ತೆಗಳ ಪರವಾನಿಗೆ ಕೆಎಸ್ಆರ್ಟಿಸಿ ಮಂಗಳೂರು ನಿಲ್ದಾಣ ದಿಂದ ಪಂಪ್ವೆಲ್- ದೇರಳಕಟ್ಟೆ- ನಾಟೆಕಲ್ ಮಾರ್ಗವಾಗಿ ರೆಹಮತ್ ನಗರಕ್ಕೆ, ಬಸ್ ನಿಲ್ದಾಣದಿಂದ ಪಂಪ್ವೆಲ್- ದೇರಳಕಟ್ಟೆ- ಮುಡಿಪು-ಬೋಳಿಯಾರ್ ಮಾರ್ಗವಾಗಿ ಅಮ್ಮೆಂಬಳ ದರ್ಗಾಕ್ಕೆ, ಬಸ್ ನಿಲ್ದಾಣದಿಂದ ಪಂಪುವೆಲ್-ದೇರಳಕಟ್ಟೆ ಮಾರ್ಗವಾಗಿ ಮುಡಿಪುಗೆ ಬಸ್ ಓಡಿಸಲು ಪರವಾನಿಗೆಗೆ ಸಲ್ಲಿಸಿರುವ ಅರ್ಜಿಯು ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ.
ಚರ್ಚೆಯ ಬಳಿಕ ನಿರ್ಣಯ
ಕೆಎಸ್ಆರ್ಟಿಸಿಯು ವಿವಿಧ ರೂಟ್ಗಳಲ್ಲಿ ಬಸ್ ಓಡಿಸುವ ಕುರಿತು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ. ಪ್ರಾಧಿಕಾರದ ಸಭೆಯಲ್ಲಿ ಚರ್ಚೆಯಾದ ಬಳಿಕವೇ ಪರವಾನಿಗೆಯ ಕುರಿತು ಚಿಂತಿಸಲಾಗುತ್ತದೆ. ಮೂಡಬಿದಿರೆ, ಕಾರ್ಕಳ ಸೇರಿದಂತೆ ರೆಹಮತ್ನಗರ, ಅಮ್ಮೆಂಬಳ ದರ್ಗಾ, ಮುಡಿಪು ರಸ್ತೆಗಳಲ್ಲೂ ಬಸ್ ಓಡಾಟಕ್ಕೆ ಪರವಾನಿಗೆಗೆ ಕೆಎಸ್ಆರ್ಟಿಸಿ ಅರ್ಜಿ ಸಲ್ಲಿಸಿದೆ.
– ಜಿ.ಎಸ್. ಹೆಗಡೆ, ಕಾರ್ಯದರ್ಶಿ, ಆರ್ಟಿಒ.
ಬಸ್ಸು ಓಡಿಸಲು ಕೆಎಸ್ಆರ್ಟಿಸಿ ಸಿದ್ಧ
ಮಂಗಳೂರಿನಿಂದ ಮೂಡಬಿದಿರೆ-ಕಾರ್ಕಳಕ್ಕೆ ಬಸ್ ಓಡಾಟದ ಪರವಾನಿಗೆ ಕುರಿತು ಹಲವು ವರ್ಷಗಳಿಂದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಿದೆ. ಪ್ರಸ್ತುತ 20 ಬಸ್ಗಳ ಓಡಾಟಕ್ಕೆ ಅನುಮತಿ ಸಿಕ್ಕಿದರೆ ಬಸ್ಗಳನ್ನು ಓಡಿಸಲು ಕೆಎಸ್ಆರ್ಟಿಸಿ ಸಿದ್ಧವಿದೆ.
ದೀಪಕ್ಕುಮಾರ್, ವಿಭಾಗೀಯ ನಿಯಂತ್ರಕರು, ಕೆಎಸ್ಆರ್ಟಿಸಿ ಮಂಗಳೂರು ವಿಭಾಗ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ
Captain Brijesh Chowta ಚುನಾವಣ ವೆಚ್ಚಕ್ಕೆ ಪಿಂಚಣಿ ದುಡ್ಡು ದೇಣಿಗೆ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ