ಮಂಗಳೂರು-ಮುಂಬಯಿ ಕೆಎಸ್‌ಆರ್‌ಟಿಸಿ ಬಸ್‌ ಸ್ಥಗಿತ!


Team Udayavani, Aug 13, 2018, 11:45 AM IST

krstc.jpg

ಮಂಗಳೂರು: ವಾಣಿಜ್ಯ ನಗರಿ ಮುಂಬಯಿಗೆ ಸಂಪರ್ಕ ಕಲ್ಪಿಸುತ್ತಿದ್ದ ಏರ್‌ ಇಂಡಿಯಾ ವಿಮಾನ ಸೇವೆ ಆಗಲೇ ಸ್ಥಗಿತ ಗೊಂಡಿದೆ. ಮಂಗಳೂರು – ಮುಂಬಯಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವೂ ಒಂದು ತಿಂಗಳ ಹಿಂದೆಯೇ ಸ್ಥಗಿತಗೊಂಡು ಪ್ರಯಾ ಣಿಕರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಮಳೆ ಹಾಗೂ ಆರ್ಥಿಕ ನಷ್ಟದ ನೆಪ ಮುಂದಿಟ್ಟುಕೊಂಡು ಮಂಗಳೂರು- ಮುಂಬಯಿ ಬಸ್‌ ಸ್ಥಗಿತಗೊಳಿಸಿರುವ ಕೆಎಸ್‌ಆರ್‌ಟಿಸಿ, ಸೆ. 1ರಿಂದ ಅದನ್ನು ಪುನಾರಂಭಗೊಳಿಸುವುದಾಗಿ ತಿಳಿಸಿದ್ದರೂ ನೆಚ್ಚಿಕೊಳ್ಳುವಂತಿಲ್ಲ. ಹಬ್ಬದ ಸೀಜನ್‌ ಆರಂಭವಾಗುತ್ತಿದ್ದು, ರೈಲುಗಳಲ್ಲಿ ಮುಂಗಡ ಬುಕ್ಕಿಂಗ್‌ ಕೂಡ ಸಿಗುವುದು ಕಷ್ಟವಾಗಿರುವಾಗ ಪ್ರಯಾಣಕ್ಕೆ ಖಾಸಗಿ ಬಸ್‌ಗಳನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ಮಂಗಳೂರು-ಮುಂಬಯಿ ಮಧ್ಯೆ ಸಾವಿರಾರು ಜನ ಸಂಚರಿಸುತ್ತಾರೆ. ಆದರೆ, ಈ ಮಾರ್ಗವಾಗಿ ಸಾರಿಗೆ ಸಂಸ್ಥೆಯ ಒಂದೇ ಒಂದು ಸುಖಾಸೀನ ಬಸ್‌ ಇಲ್ಲ! ಮುಂಬಯಿ ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗಕ್ಕೆ ತೆರಳುತ್ತಿದ್ದ ಸುಖಾಸೀನ ಬಸ್‌ಗಳಿಗೂ ಸಂಸ್ಥೆ ಕತ್ತರಿ ಹಾಕಿದೆ.

ವರ್ಷದ ಹಿಂದೆ ಮಂಗಳೂರು-ಮುಂಬಯಿ ಮಧ್ಯೆ ಸಾರಿಗೆ ಸಂಸ್ಥೆಯ ಐದು ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ಒಂದೊಂದಾಗಿ ಕಡಿತಗೊಂಡು ಇತ್ತೀಚೆಗೆ ಎರಡು ಬಸ್‌ಗಳಿಗೆ ಸೀಮಿತವಾಗಿತ್ತು. ಇದರಲ್ಲಿ ಒಂದು “ಪರ್ಮನೆಂಟ್‌’ ಹಾಗೂ ಇನ್ನೊಂದು “ಸೀಸನಲ್‌’ ಎಂದು ಕಾರ್ಯನಿರ್ವಹಣೆಗೆ ನಿರ್ಧರಿಸಲಾಗಿತ್ತು. ಆಮೇಲೆ ಒಂದೇ ಬಸ್‌ ಸಂಚರಿಸಲು ಶುರು ಮಾಡಿತು. ಕೊನೆಗೆ ಬುಕ್ಕಿಂಗ್‌ ಇದ್ದರೆ ಮಾತ್ರ ಸಂಚಾರ ಎನ್ನಲಾಯಿತು. ಈಗ ಬುಕ್ಕಿಂಗ್‌ ಕಡಿಮೆ ಎಂಬ ಕಾರಣವೊಡ್ಡಿ ಸಂಚಾರ ಸ್ಥಗಿತಗೊಳಿಸಿದೆ. ಹೀಗಾಗಿ, ರೈಲು ಹಾಗೂ ಸುಮಾರು 25ರಷ್ಟಿರುವ ಖಾಸಗಿ ಬಸ್‌ಗಳೇ ಪ್ರಯಾಣಿಕರಿಗೆ ಆಸರೆ.

ಬೇಡಿಕೆ ಸಮಯದಲ್ಲಿ ಪ್ರಯಾಣದರವನ್ನು ಏಕಾಏಕಿ ಏರಿಸುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣ. ಖಾಸಗಿ ಬಸ್‌ಗಳಲ್ಲಿ 1,300 ರೂ. ಇದ್ದಾಗಲೂ ಕೆಎಸ್‌ಆರ್‌ಟಿಸಿ 1,500ರಿಂದ 2000 ರೂ. ತನಕ ದರ ವಿಧಿಸುತ್ತಿತ್ತು ಎಂಬ ಆರೋಪವಿದೆ. ಸೀಜನ್‌ನಲ್ಲಿ 20ರಿಂದ 25 ಸೀಟ್‌ಗಳ ಬುಕ್ಕಿಂಗ್‌ ಇರುತ್ತಿತ್ತು. ಉಳಿದ ಅವಧಿಯಲ್ಲೂ 10-15 ಜನ ಟಿಕೆಟ್‌ ಕಾದಿರಿಸುತ್ತಿದ್ದರು. ಸಾರಿಗೆ ಸಂಸ್ಥೆ ಲೆಕ್ಕಾಚಾರದ ಪ್ರಕಾರ 350 ಕಿ.ಮೀ.ಗೆ ಕನಿಷ್ಠ 700ರಿಂದ 800 ರೂ. ಟಿಕೆಟ್‌ ಇದೆ. ಮುಂಬೈಗೆ 1,000 ಕಿ.ಮೀ. ಇದ್ದು, ಕನಿಷ್ಠ 2,000 ರೂ. ನಿಗದಿ ಮಾಡಬೇಕು. ಅದಕ್ಕಿಂತ ಕಡಿಮೆ ದರವಿದ್ದರೂ ಜನ ಬರುತ್ತಿಲ್ಲ ಎಂಬುದು ಸಂಸ್ಥೆಯ ವಾದ.
ಈ ಮಧ್ಯೆ, ಸೆ. 1ರಿಂದ ಕೆಎಸ್‌ಆರ್‌ಟಿಸಿವೋಲ್ವೋ ಮುಂಬಯಿ ಸಂಚಾರ ಇದೆ ಎಂದು ಆನ್‌ಲೈನ್‌ನಲ್ಲಿ ತಿಳಿಸಲಾಗಿದೆ. ಬುಕ್ಕಿಂಗ್‌ ಆಗದಿ ದ್ದರೆ ಮತ್ತೆ ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದೂ ಮೂಲಗಳು  ತಿಳಿಸಿವೆ. ಮುಂಬಯಿ ಟಿಕೆಟ್‌ ಆನ್‌ಲೈನ್‌ ಮೂಲಕ ಆಗುತ್ತಿದ್ದದ್ದು ಕಡಿಮೆ. ಏಜೆಂಟರ ಮೂಲಕವೇ ನಡೆಯುತ್ತಿತ್ತು. ಆದರೆ, ಸಂಸ್ಥೆಯ ಕೇಂದ್ರ ಕಚೇರಿಯ ಸೂಚನೆ ಮೇರೆಗೆ ಏಜೆಂಟರಿಂದ ಬುಕ್ಕಿಂಗ್‌ ಕೈಬಿಟ್ಟು, ಆನ್‌ಲೈನ್‌ ಮೂಲಕ ನಡೆಯಲು ಶುರುವಾಯಿತು. ಏಜೆಂಟರು ಖಾಸಗಿ ಬಸ್‌ಗಳಿಗೆ ಆದ್ಯತೆ ನೀಡಿದ್ದರಿಂದ ಪ್ರಯಾಣಿಕರ ಕೊರತೆ ಕಾಡುವಂತಾಯಿತು.

20ಕ್ಕೂ ಅಧಿಕ ಬಸ್‌ ಸೇವೆ ಕಡಿತ!
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದಿಂದ ನಿರ್ವಹಿಸುವ 20ರಷ್ಟು ಬಸ್‌ಗಳು ಮಳೆ ಹಾಗೂ ನಷ್ಟದ ಕಾರಣ ಸಂಚಾರ ನಿಲ್ಲಿಸಿವೆ. ಹುಬ್ಬಳ್ಳಿ-ಬೆಳಗಾವಿ ಮಧ್ಯೆ ನಿತ್ಯ ಸಂಚರಿಸುತ್ತಿದ್ದ ಏಕೈಕ ವೋಲ್ವೋ ಬಸ್‌ ಕೂಡ ರದ್ದು ಗೊಂಡಿದೆ. ಬೆಂಗಳೂರಿಗೂ ಬುಕ್ಕಿಂಗ್‌ ಆಧಾರದಲ್ಲಿ ವೋಲ್ವೋ ಬಸ್‌ಗಳನ್ನು ಓಡಿಸಲಾಗುತ್ತಿದೆ. ಕಲಬುರಗಿ, ಬಳ್ಳಾರಿ ಭಾಗದ ವೋಲ್ವೋ ಸಂಚಾರದಲ್ಲಿ ಕಡಿತ ಮಾಡಲಾಗಿದೆ. ಧಾರವಾಡಕ್ಕೆ ನಾನ್‌ ಎಸಿ ಸ್ಲಿàಪರ್‌ ಒಂದು ಬಸ್‌ ಮಾತ್ರ ಸಂಚರಿಸುತ್ತಿದೆ. ಈ ಬಾಗಗಳಿಗೆ 20ಕ್ಕೂ ಅಧಿಕ ವೇಗದೂತ ಬಸ್‌ಗಳು ಓಡಾಡುತ್ತಿವೆ. ತಡೆಹಿಡಿದ ಬಸ್‌ಗಳ ಸಂಚಾರ ಯಾವಾಗ ಶುರುವಾಗುತ್ತದೆ ಎಂದು ಪ್ರಶ್ನಿಸಿದರೆ, ಉತ್ತರ ಸಿಕ್ಕಿಲ್ಲ. 

ಏರ್‌ ಇಂಡಿಯಾ ಸೇವೆಯೂ ಇಲ್ಲ !
ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಜು. 12ರಿಂದ ಸೆ. 30ರ ವರೆಗೆ 81 ದಿನಗಳ ಮಂಗಳೂರು- ಮುಂಬಯಿ ನಡುವಣ ವಿಮಾನ ಸೇವೆ ರದ್ದುಗೊಳಿಸಿದೆ. ಈ ವಿಮಾನದಲ್ಲಿ ಕಡಿಮೆ ದರದಲ್ಲಿ ಪ್ರಯಾಣ ಸಾಧ್ಯವಿತ್ತು.

*ದಿನೇಶ್‌ ಇರಾ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.