ಸಂದೀಪ್ ಶೆಟ್ಟಿ ಜೊತೆ ಸಪ್ತಪದಿ ತುಳಿದ ಕುಡ್ಲದ ಬೆಡಗಿ ಯಜ್ಞಾ ಶೆಟ್ಟಿ
ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು ಸ್ಯಾಂಡಲ್ ವುಡ್ ನಟಿಯ ಅದ್ದೂರಿ ವಿವಾಹ
Team Udayavani, Oct 30, 2019, 6:41 PM IST
ಮಂಗಳೂರು: ಕರಾವಳಿ ಬೆಡಗಿ, ಸ್ಯಾಂಡಲ್ ವುಡ್ ನಟಿಯಾದ ಯಜ್ಞಾ ಶೆಟ್ಟಿಯವರ ವಿವಾಹವು ಮಂಗಳೂರಿನ ಅಡ್ಯಾರ್ ಗಾರ್ಡನ್ ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಬುಧವಾರದಂದು ನಡೆಯಿತು. ಯಜ್ಞಾ ಶೆಟ್ಟಿಯವರು ಕರಾವಳಿ ಮೂಲದ ಸಂದೀಪ್ ಶೆಟ್ಟಿಯವರನ್ನು ವರಿಸಿದ್ದು, ಈ ವಿವಾಹ ಸಮಾರಂಭದಲ್ಲಿ ನಟರಾದ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಟ ಹಾಗೂ ನಿರ್ದೇಶಕ ವೃಷಬ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿ ವಧು-ವರನನ್ನು ಹರಿಸಿದರು.
ಯಜ್ಜಾ ಶೆಟ್ಟಿಯವರು ರಾಜಶೇಖರ್ ರಾವ್ ನಿರ್ದೇಶನದ ಒಂದು ಪ್ರೀತಿಯ ಕಥೆ, ನಟ ಜಗ್ಗೇಶ್ ಅಭಿನಯನದ ಎದ್ದೇಳು ಮಂಜುನಾಥ, ದುನಿಯಾ ವಿಜಯ್ ಅಭಿನಯದ ಕರಿಚಿರತೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯನದ ಸುಗ್ರೀವ, ರಮೇಶ್ ಅರವಿಂದ ನಟನೆಯ ಕಳ್ಳ ಮಳ್ಳ ಸುಳ್ಳ, ನಟ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ, ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ, ಲವ್ ಗುರು, ಪಂಚಾಮೃತ ಮೊದಲಾದ ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ.
‘ಉಳಿದವರರು ಕಂಡಂತೆ’ ಸಿನೇಮಾದಲ್ಲಿ ಮೀನುಮಾರಾಟದ ಹುಡುಗಿಯಾಗಿ ತನ್ನ ಹೋಮ್ಲೀ ಲುಕ್ ನಿಂದ ಚಿತ್ರರಸಿಕರ ಮನವನ್ನು ಗೆದ್ದಿದ್ದರು. ಇನ್ನು ‘ಎದ್ದೇಳು ಮಂಜುನಾಥ’ ಚಿತ್ರದಲ್ಲಿ ತನ್ನ ಬೇಜವಾಬ್ದಾರಿ ಗಂಡನನ್ನು ನಿಭಾಯಿಸುತ್ತಾ ಮನೆವಾರ್ತೆಯನ್ನೂ ನೋಡಿಕೊಳ್ಳುವ ಟಿಪಿಕಲ್ ಮಧ್ಯಮವರ್ಗದ ಗೃಹಿಣಿಯಾಗಿ ಮನೋಜ್ಞ ಅಭಿನಯವನ್ನು ನೀಡಿದ್ದರು. ಇನ್ನು ‘ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ತನ್ನ ಸ್ವರುದ್ರೂಪಿ ಶ್ರೀಮಂತ ಗಂಡನನ್ನು ಸದಾ ಅನುಮಾನಿಸುವ ಪೊಸೆಸಿವ್ ಹೆಂಡತಿಯಾಗಿ ಯಜ್ಞಾ ಅವರ ಅಭಿನಯ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ