ಗುಣಮಟ್ಟದ ಬದುಕಿಗೆ ಮಂಗಳೂರೇ ಉತ್ತಮ


Team Udayavani, Mar 27, 2017, 11:54 AM IST

mangalore.jpg

ಮಂಗಳೂರು: ಯುಗಾದಿ ಸಮೀಪಿಸುತ್ತಿರುವಾಗಲೇ ಮಂಗಳೂರಿಗರಿಗೆ ಬೆಲ್ಲದಷ್ಟೇ ಸಿಹಿಯಾದ ಸುದ್ದಿಯಿದು. ಬುದ್ಧಿವಂತರ ನಾಡು ಎಂದು ಕರೆಸಿಕೊಳ್ಳುತ್ತಿದ್ದ ಮಂಗಳೂರಿನ ಕಿರೀಟಕ್ಕೆ ಇದೀಗ ಮತ್ತೂಂದು ಹೊಸ ಗರಿ. ಇಡೀ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಜೀವನ ಹೊಂದಿರುವ ನಗರಗಳ ಪೈಕಿ ಮಂಗಳೂರು 41ನೇ ಸ್ಥಾನ ಪಡೆದುಕೊಂಡಿದೆ.

ಸ್ವತಂತ್ರ ಬಳಕೆದಾರರ ಜಾಗತಿಕ ಡೇಟಾಬೇಸ್‌ ಆಗಿರುವ ನಂಬಿಯೋ ತನ್ನ ವೆಬ್‌ಸೈಟ್‌ನಲ್ಲಿ ಈ ರ್‍ಯಾಂಕಿಂಗ್‌ ಅನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮಂಗಳೂರು ಸ್ಯಾನ್‌ಫ್ರಾನ್ಸಿಸ್ಕೋ(42)ವನ್ನು ಹಿಂದಿಕ್ಕಿ 41ನೇ ಸ್ಥಾನ ಪಡೆದಿದೆ.

ಕ್ಯಾನ್‌ಬೆರಾ ಮತ್ತು ಆಸ್ಟ್ರೇಲಿಯಾವು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ. ಇದೇ ವೇಳೆ, ಮಂಗಳೂರು ಏಷ್ಯಾದಲ್ಲಿ 2ನೇ ಅತ್ಯುತ್ತಮ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು 108, ಪುಣೆ 77, ಹೈದರಾಬಾದ್‌ 96ನೇ ಸ್ಥಾನಗಳನ್ನು ಪಡೆದಿವೆ. ಅತ್ಯಂತ ಕಳಪೆ ಜೀವನಮಟ್ಟ ಹೊಂದುವ ಮೂಲಕ ವೆನೆಜುವೆಲಾ ಕೊನೆಯ ಅಂದರೆ 143ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಆರೋಗ್ಯಸೇವೆಯಲ್ಲೂ ಮುಂದು
ಇಷ್ಟೇ ಅಲ್ಲ, ಆರೋಗ್ಯ ಸೇವೆಯಲ್ಲಿ ಆಸ್ಟ್ರೇಲಿಯಾ, ಯುಕೆ ಮತ್ತು ಜಪಾನ್‌ ನಗರಗಳನ್ನು ಹಿಮ್ಮೆಟ್ಟಿಸಿರುವ ಮಂಗಳೂರು ವಿಶ್ವದಲ್ಲೇ 12ನೇ ಅತ್ಯುತ್ತಮ ನಗರವೆಂಬ ಶ್ಲಾಘನೆಗಳಿಸಿದೆ. 143 ನಗರಗಳ ಪೈಕಿ ದುಬಾೖ 9 ಮತ್ತು ಅಬುಧಾಬಿ 5ನೇ ಸ್ಥಾನ ಪಡೆದಿವೆ. ಇದರಲ್ಲಿ ಬೆಂಗಳೂರು 68 ಮತ್ತು ಚೆನ್ನೈ 35ನೇ ಸ್ಥಾನ ಗಳಿಸಿವೆ. ಇನ್ನು ಮಾಲಿನ್ಯ ಮಟ್ಟದ ವಿಚಾರದಲ್ಲೂ ಮಂಗಳೂರು ಉತ್ತಮ ಸಾಧನೆ ತೋರಿದೆ. ಭಾರತದ 39 ನಗರಗಳ ಪೈಕಿ ಫ‌ರೀದಾಬಾದ್‌ ಅತಿ ಹೆಚ್ಚು ಮಾಲಿನ್ಯಯುಕ್ತ ನಗರವೆಂಬ ಕುಖ್ಯಾತಿಗೆ ಪಾತ್ರವಾದರೆ, ಬೆಂಗಳೂರು 34ನೇ ಸ್ಥಾನದಲ್ಲಿದೆ.

ದುಬಾರಿಯಲ್ಲ ಬೆಂಗಳೂರು!
ವಿಶ್ವದ ಅತಿ ದುಬಾರಿ ನಗರ ಯಾವುದು ಗೊತ್ತಾ? ಸಿಂಗಾಪುರ. ಹಾಗಾದರೆ ಬೆಂಗಳೂರು, ದಿಲ್ಲಿ, ಮುಂಬಯಿಯೆಲ್ಲ ದುಬಾರಿಯಲ್ಲವೇ ಎಂದು ಕೇಳುತ್ತಿದ್ದೀರಾ? ಊಹೂಂ. ದಿ ಎಕನಾಮಿಸ್ಟ್‌ ಗ್ರೂಪ್‌ ಅಧ್ಯಯನಕ್ಕೆ ಬಳಸಿಕೊಂಡ 133 ನಗರಗಳ ಪೈಕಿ ಬೆಂಗಳೂರು 131ನೇ ಸ್ಥಾನ ಪಡೆದುಕೊಂಡಿದೆ. ಅಂದರೆ, ಉದ್ಯಾನನಗರಿಯು ಬದುಕಲು ಅತ್ಯಂತ ಅಗ್ಗದ ಜಾಗ. ರಾಷ್ಟ್ರ ರಾಜಧಾನಿ  ದಿಲ್ಲಿ 124 ಮತ್ತು ವಾಣಿಜ್ಯ ನಗರಿ ಮುಂಬಯಿ 127ನೇ ಸ್ಥಾನ ಗಳಿಸಿವೆ. ಸುಮಾರು 160 ವಿವಿಧ ಸರಕುಗಳ ದರಗಳ ಆಧಾರದಲ್ಲಿ ಹೋಲಿಕೆ ಮಾಡಿ ಯಾವ ನಗರವು ವೆಚ್ಚದಾಯಕ ಮತ್ತು ಯಾವುದು ಅಗ್ಗ ಎಂದು ನಿರ್ಧರಿಸಲಾಗಿದೆ. ಅದರಂತೆ, ದುಬಾರಿ ನಗರಗಳ ಪೈಕಿ ಸಿಂಗಾಪುರ ಮೊದಲ ಸ್ಥಾನ ಪಡೆದರೆ, 2ನೇ ಸ್ಥಾನವನ್ನು ಹಾಂಕಾಂಗ್‌ ಗಿಟ್ಟಿಸಿಕೊಂಡಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.