ಮಂಗಳೂರು: ಜಾರ್ಜ್ ಫರ್ನಾಂಡೀಸ್ ಚಿತಾಭಸ್ಮ ಸ್ಮಾರಕ ಅನಾವರಣ
Team Udayavani, Feb 23, 2020, 3:28 PM IST
ಮಂಗಳೂರು: ಮಾಜಿ ಕೇಂದ್ರ ಸಚಿವ, ಪದ್ಮವಿಭೂಷಣ ಪುರಸ್ಕೃತ ದಿವಂಗತ ಜಾರ್ಜ್ ಫರ್ನಾಂಡೀಸ್ ಅವರ ಸ್ಮಾರಕವನ್ನು ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ದಾನ ಅವರು ಭಾನುವಾರದಂದು ಅನಾವರಣಗೊಳಿಸಿದರು.
ಮಂಗಳೂರಿನ ಬಿಜೈ ಚರ್ಚ್ ನಲ್ಲಿ ನಿರ್ಮಿಸಲಾದ ಈ ಚಿತಾಭಸ್ಮ ಸ್ಮಾರಕ ಅನಾವರಣಗೊಳಿಸಿ ಮಾತನಾಡಿದ ಬಿಷಪ್ ಅವರು ಜಾರ್ಜ್ ಫರ್ನಾಂಡೀಸ್ ಅವರ ಕಾರ್ಯ ಶ್ಲಾಘಿಸಿದರು.
ದೆಹಲಿಯಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಅಂತ್ಯಕ್ರಿಯೆ ನಡೆದಿದ್ದು ದೆಹಲಿಯಿಂದ ಚಿತಾಭಸ್ಮ ಮಂಗಳೂರಿಗೆ ತರಲಾಗಿತ್ತು. ಇದೀಗ ಬಿಜೈ ಚರ್ಚ್ ನಲ್ಲಿ ಚಿತಾಭಸ್ಮಕ್ಕೆ ಸ್ಮಾರಕ ಮಾಡಲಾಗಿದೆ. ಚಿತಾಭಸ್ಮ ಸ್ಮಾರಕ ಅನಾವರಣ ಸಂದರ್ಭದಲ್ಲಿ ಮಾಜಿ ಶಾಸಕ ಜೆ ಆರ್ ಲೋಬೋ, ವಿಧಾನಪರಿಷತ್ ಸದಸ್ಯ ಐವನ್ ಡಿ`ಸೋಜಾ, ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ