ಮಂಗಳೂರು-ಪುಣೆ ಕೆಎಸ್ಸಾರ್ಟಿಸಿ ಅಂಬಾರಿ ಬಸ್
ಮಂಗಳೂರು-ಕಾಸರಗೋಡು ವೋಲ್ವೋಗೆ ಚಾಲನೆ
Team Udayavani, Aug 4, 2019, 9:56 AM IST
ಮಂಗಳೂರು: ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗ ದಿಂದ ಮಂಗಳೂರು – ಪುಣೆ ನಡುವೆ ಸಂಚರಿಸಲಿರುವ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಲಿ ಆ್ಯಕ್ಸೆಲ್ ಎ.ಸಿ. ಸ್ಲೀಪರ್ ಮತ್ತು ಮಂಗಳೂರಿನಿಂದ ಕಾಸರ ಗೋಡಿಗೆ ಸಂಚರಿಸುವ ವೋಲ್ವೋ ಬಸ್ಗಳಿಗೆ ಶನಿವಾರ ಶಾಸಕ ವೇದ ವ್ಯಾಸ ಕಾಮತ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜನರ ಬೇಡಿಕೆಗೆ ಅನುಗುಣವಾಗಿ ಕೆಎಸ್ಸಾರ್ಟಿಸಿ ಮಹತ್ವದ ಹೆಜ್ಜೆ ಇರಿಸಿದೆ. ಕಾಸರಗೋಡು ಮಂಗಳೂರಿನ ಗಡಿ ಪ್ರದೇಶವಾದ ಕಾರಣ ಅಲ್ಲಿನ ವ್ಯಾಪಾರ, ವಹಿವಾಟುಗಳಿಗೆ ಇದರಿಂದ ಉಪಯೋಗ ವಾಗಲಿದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ದಿಂದ ಮಂಜೇಶ್ವರ, ಗೋವಾಕ್ಕೆ ಬಸ್ಗಳ ಬೇಡಿಕೆ ಇದ್ದು, ಅಧಿಕಾರಿಗಳು ಗಮನಹರಿಸಬೇಕು ಎಂದರು.
ಮಂಗಳೂರು ವಿಭಾಗದಿಂದ ಇದೇ ಮೊದಲ ಬಾರಿಗೆ 14.2 ಮೀ. ಉದ್ದದ ವೋಲ್ವೋ ಸ್ಲೀಪರ್ ಬಸ್ ಪುಣೆಗೆ ಪ್ರಯಾಣ ಬೆಳೆಸಲಿದ್ದು, ಅಂಬಾರಿ ಡ್ರೀಮ್ ಬಸ್ ಹಲವಾರು ವೈಶಿಷ್ಟಗಳನ್ನು ಹೊಂದಿದೆ.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಕೆ.ಎಂ. ಅಶ್ರಫ್ ಮಾತನಾಡಿ, ಮಂಗಳೂರಿನಿಂದ ಪುಣೆಗೆ ತೆರಳುವ ಬಸ್ ಉಡುಪಿ, ಭಟ್ಕಳ, ಹೊನ್ನಾವರ, ಅಂಕೋಲ ಮಾರ್ಗವಾಗಿ ಸಂಚರಿಸುತ್ತದೆ. 1,350 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಪ್ರತೀ ದಿನ ಸಂಜೆ 4 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6.45ಕ್ಕೆ ಪುಣೆ ತಲುಪಲಿದೆ. ಅಲ್ಲಿಂದ ಸಂಜೆ 6.30ಕ್ಕೆ ಹೊರಟು ಮರು ಬೆಳಗ್ಗೆ 9.15ಕ್ಕೆ ಮಂಗಳೂರು ತಲುಪಲಿದೆ ಎಂದರು.
ಮಂಗಳೂರಿನಿಂದ ಕಾಸರಗೋಡಿಗೆ ಮೊದಲ ಹಂತದಲ್ಲಿ 2 ಎ.ಸಿ. ವೋಲ್ವೋ
ಬಸ್ ಸಂಚರಿಸಲಿವೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಕೆ.ಎಂ. ಅಶ್ರಫ್, ವಿಭಾಗ ನಿಯಂತ್ರಣಾಧಿಕಾರಿ ಜಯಶಾಂತ್, ಅಧಿಕಾರಿಗಳು ಇದ್ದರು.
ಮಂಗಳೂರು-ಕಾಸರಗೋಡು ಪಾಸ್ ಸೌಲಭ್ಯ
ಮಂಗಳೂರಿನಿಂದ ಕಾಸರಗೋಡಿಗೆ ಕೇವಲ ಆರು ನಿಲುಗಡೆಯೊಂದಿಗೆ ಎರಡೂ ವಿಭಾಗದಿಂದ ಪ್ರತೀ ದಿನ 14 ಟ್ರಿಪ್ ಎ.ಸಿ. ವೋಲ್ವೋ ಬಸ್ ಸಂಚರಿಸಲಿದ್ದು, ಪ್ರಯಾಣಿಕರೊಬ್ಬರಿಗೆ 75 ರೂ. ದರ ನಿಗದಿಪಡಿಸಲಾಗಿದೆ. ದಿನದ ಪಾಸಿಗೆ 130 ರೂ. ದರ ನಿಗದಿಪಡಿಸಲಾಗಿದ್ದು, ದಿನದಲ್ಲಿ ಎರಡು ಬಾರಿ ಪ್ರಯಾಣ ಮಾಡಬಹುದಾಗಿದೆ.
ವೋಲ್ವೋ ವೇಳಾಪಟ್ಟಿ
ಮಂಗಳೂರಿನಿಂದ ಬೆಳಗ್ಗೆ 7.00, 7.30, 7.45, 8.00, 10.00, 10.30, 10.45, 11.15, 2, 2.30, 2.45, 3.15, 6.00, 6.30
ಕಾಸರಗೋಡಿನಿಂದ ಬೆಳಗ್ಗೆ 5.30, 5.55, 8.30, 9.00, 9.15, 9.45, 12.00, 12.30, 1.00, 1.30, 4.15, 4.45, 5.15, 5.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ