ಕದ್ರಿ ಪಾರ್ಕ್ನಲ್ಲೀಗ ಹಣ್ಣುಗಳ ರಾಜ ಮಾವಿನ ಸಾಮ್ರಾಜ್ಯ
ವೈವಿಧ್ಯಮಯ ತಳಿಯ ಮಾವುಗಳ ಪ್ರದರ್ಶನ, ಮಾರಾಟ
Team Udayavani, May 26, 2019, 6:00 AM IST
ಮಹಾನಗರ: ಮಲ್ಗೋವಾ, ದಶಹರಿ, ಸಕ್ಕರೆಗುತ್ತಿ, ಪೈರಿ, ಮುಂಡಾ, ಬೇಗನ್ಪಲ್ಲಿ, ಸಿಂಧೂರ, ಶುಗರ್ ಬೇಬಿ, ಕೇಸರ್, ಆಪೂಸ್, ಹಿಮಾ ಯತ್, ಮಲ್ಲಿಕಾ, ರಸಪೂರಿ, ಬಾದಾಮಿ, ಸೇಂದೂರು, ಸೋತಾಪುರಿ, ಸುವರ್ಣ ರೇಖ ಸೇರಿದಂತೆ 10ರಿಂದ 15ಕ್ಕೂ ಅಧಿಕ ವೈವಿಧ್ಯಮಯ ತಳಿಯ ಮಾವುಗಳು ಕದ್ರಿ ಪಾರ್ಕ್ನಲ್ಲಿ ಕಣ್ಮಣ ಸೆಳೆಯುತ್ತಿದೆ.
ದ.ಕ. ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಸಹಯೋಗದಲ್ಲಿ ಬೆಳೆಗಾರರಿಂದ ಬಳಕೆದಾರರಿಗೆ ನೇರ ಮಾವು ಮಾರಾಟ ಮೇ 24ರಿಂದ 26ರ ತನಕ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ.
ಮಾರುಕಟ್ಟೆಯಲ್ಲಿ ವಿವಿಧ ತಳಿಯ ಮಾವುಗಳು ಸಿಗುತ್ತವೆ. ಖರೀದಿಸಲು ಹೋದರೆ ಎಲ್ಲವೂ ರಾಸಾಯನಿಕ ಮುಕ್ತವೇ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಕದ್ರಿ ಪಾರ್ಕ್ನಲ್ಲಿ ಆಯೋಜಿಸಲಾಗಿರುವ ಮಾವು ಮಾರಾಟದಲ್ಲಿ ಕೇವಲ ನೈಸರ್ಗಿಕವಾಗಿ ಮಾಗಿಸಿದ ಮಾವುಗಳು 18 ಸ್ಟಾಲ್ಗಳಲ್ಲಿ ಕಾಣಸಿಗುತ್ತವೆ. ರಾಜ್ಯದಲ್ಲಿ ಬೆಳೆಯುವ ಸುಮಾರು 15ಕ್ಕೂ ಹೆಚ್ಚು ಪ್ರಮುಖ ಮಾವಿನ ತಳಿಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ. ರಾಮನಗರ, ಶ್ರೀನಿವಾಸಪುರ, ಕೋಲಾರ, ಕನಕಪುರ ಮೊದಲಾದ ಕಡೆಯಿಂದ ಮಾವು ಬೆಳೆಗಾರರು ಆಗಮಿಸಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ಮಧ್ಯವರ್ತಿ ಹಾವಳಿ ತಪ್ಪಿಸಲು ಮೇಳ
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ನೀಡುವ ಉದ್ದೇಶದಿಂದ, ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಕಾರಣದಿಂದ ಹಾಗೂ ನೈಸಗಿಕವಾಗಿ ಮಾಗಿಸಿದ ಮಾವುಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಾವು ಮೇಳ ಗಳನ್ನು ಆಯೋಜಿಸಲಾಗುತ್ತಿದೆ.
ಮೇಳಗಳಲ್ಲಿ ನೈಸರ್ಗಿಕವಾಗಿ ಮಾಗಿಸಿದ ಮಾವು ಮಾರಾಟ ಮಾಡುತ್ತಿದ್ದೇವೆ. ಈ ಹಣ್ಣುಗಳು ಎಂಟು ದಿನಗಳ ಕಾಲ ಇಟ್ಟರೂ ಕೆಡುವುದಿಲ್ಲ. ಎರಡು ಎಕರೆಯಲ್ಲಿ 80 ಗಿಡಗಳನ್ನು ನೆಟ್ಟಿದ್ದೇವೆ. ವರ್ಷಕ್ಕೆ 10 ಟನ್ ಮಾವಿನ ಹಣ್ಣು ದೊರೆಯುತ್ತದೆ ಎಂದು ರಾಮನಗರ ಜಿಲ್ಲೆಯ ಕಾನ್ಪುರ ತಾಲೂಕಿನ ಬಿ.ಎಸ್.ದೊಡ್ಡಿ ಗ್ರಾಮದ ಚೆನ್ನಗಿರಿಗೌಡ ಹೇಳುತ್ತಾರೆ.
ಮಾವಿನ ಬೆಲೆ
ಆಲೊ#àನ್ಸ್ (100 ರೂ.), ಮಲ್ಲಿಕಾ (90 ರೂ.), ರಸಪೂರಿ (70 ರೂ.), ಮಲ್ಗೊàವಾ (120 ರೂ.), ದಸೇರಿ (120 ರೂ.), ಸೆಂದೂರ (50 ರೂ.), ತೋತಾಪುರಿ (30- 40 ರೂ.), ಬೇಗನ್ಪಲ್ಲಿ (70 ರೂ.), ಶುಗರ್ ಬೇಬಿ (120 ರೂ.) ಸೇರಿದಂತೆ ಹಿಮಾಯತ್ (120).
ಪ್ರಚಾರದ ಕೊರತೆಯಿಂದ ಜನ ಕಡಿಮೆ
ನೀತಿ ಸಂಹಿತೆ ಹಾಗೂ ಚುನಾವಣೆ ಕೆಲಸಗಳಲ್ಲಿ ಅಧಿಕಾರಿಗಳು ಹೆಚ್ಚು ಸಕೀÅಯರಾಗಿದ್ದರಿಂದ ಮಾವಿನ ಮೇಳದ ಉದ್ಘಾಟನೆ ಸಮಾರಂಭ ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಈ ಬಗ್ಗೆ ಯಾವುದೇ ಪ್ರಚಾರ ನೀಡದೆ ಇದ್ದುದರಿಂದ ಜನರಿಗೆ ಮಾವು ಮೇಳದ ಬಗ್ಗೆ ಮಾಹಿತಿ ಇರಲಿಲ್ಲ. ಈ ಕಾರಣದಿಂದ ಮೊದಲ ದಿನ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.
ಮಾವು ಮಾರಾಟಗಾರರಿಗೆ
ವಾಸ್ತವ್ಯ ಸಮಸ್ಯೆ
ರಾಮನಗರದಿಂದ ಮಾವು ಮಾರಾಟಕ್ಕಾಗಿ ನಗರಕ್ಕೆ ಆಗಮಿಸಿದ ಮಾರಾಟಗಾರರಿಗೆ ವಾಸ್ಯವ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ತೋಟಗಾರಿಕಾ ಇಲಾಖೆ ನಿರಾಸಕ್ತಿ ವಹಿಸಿದೆ. ಆ ಹಿನ್ನೆಲೆಯಲ್ಲಿ ಮಾವು ಮಾರಾಟಗಾರರು ಕದ್ರಿ ಪಾರ್ಕ್ನ ಮಾವು ಮಾರಾಟ ಮಾಡುವ ಸ್ಥಳದಲ್ಲೇ ಮಲಗಿದ್ದಾರೆ. ಶುಕ್ರವಾರ ರಾತ್ರಿ ಸುರಿದ ಮಳೆಗೂ ಮಾರಾಟಗಾರರು ಇಲ್ಲೇ ಮಲಗಿದ್ದರು.ಇವರೊಂದಿಗೆ ಆರು ಮಂದಿ ಮಹಿಳೆಯರು ಇದ್ದೂ ಸಮಸ್ಯೆ ಎದುರಿಸುವಂತಾಗಿದೆ.ಚುನಾವಣೆ ಹಿನ್ನೆಲೆಯಲ್ಲಿ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾವು ಮಾರಾಟಗಾರರಿಗೆ ತಿಳಿಸಿದ್ದಾರೆ.
ಗ್ರಾಹಕರಿಂದ ಉತ್ತಮ ಸ್ಪಂದನೆ
ಪ್ರಚಾರದ ಕೊರತೆಯಿಂದ ಮೊದಲ ದಿನ ಗ್ರಾಹಕರ ಸಂಖ್ಯೆ ಕಡಿಮೆ ಇದ್ದರೂ ಎರಡನೇ ದಿನ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಲಾಲ್ಬಾಗ್, ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಮಾವು ಮೇಳ ನಡೆದಿದೆ. ಅಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಳೆದ ಬಾರಿ ಮಂಗಳೂರಿನಲ್ಲೂ ಆಯೋಜಿಸಿದ್ದೇವು.
- ಮಂಜು,
ರಾಮನಗರ ಮಾವು ಬೆಳೆಗಾರರ ಸಂಘದ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ