ನದಿ ಉತ್ಸವದ ಬಳಿಕ ಜಲ ಕ್ರೀಡೆಯತ್ತ ಹಲವರ ಒಲವು

ಕೂಳೂರಿನಲ್ಲಿ ಈಗ ನಿತ್ಯವೂ ಬೋಟಿಂಗ್‌

Team Udayavani, May 19, 2019, 6:00 AM IST

1505PBE2

ಜಲಕ್ರೀಡೆಯಲ್ಲಿ ನಿರತವಾಗಿರುವ ಪ್ರವಾಸಿಗರು.

ವಿಶೇಷವರದಿ ಸುರತ್ಕಲ್‌: ಕರಾವಳಿ ಅಂದವನ್ನು ಹೆಚ್ಚಿಸುವ ನದಿಗಳಲ್ಲಿ ಇದೀಗ ಜಲ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಕೂಳೂರಿನ ಫ‌ಲ್ಗುಣಿ ನದಿ ಯಲ್ಲಿ ಜಿಲ್ಲಾಡಳಿತ ನದಿ ಉತ್ಸವ ಆಯೋ ಜಿಸಿದ ಬಳಿಕ ಅಲ್ಲಿ ಶನಿವಾರ, ರವಿವಾರ ಬೋಟಿಂಗ್‌ಗೆ ಹೆಚ್ಚಿನ ಜನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ನದಿಯಲ್ಲಿ ಬೋಟ್‌ ಮೂಲಕ ಸಂಚರಿಸುವುದು, ಜೆಟ್‌ ಸ್ಕೀ ಮೂಲಕ ಸಾಹಸ, ಕಯಾಕಿಂಗ್‌ ಸಹಿತ ವಿವಿಧ ಜಲ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿಣ್ಣರು ಹೆಚ್ಚಿನ ಸಂಖ್ಯೆಯಲ್ಲಿ ಕಯಾಕಿಂಗ್‌,
ಬೋಟಿಂಗ್‌ನತ್ತ ಆಕ ರ್ಷಿತರಾಗುತ್ತಿದ್ದಾರೆ. ಮಂಗಳೂರಿನಿಂದ ಬರುವ ಪ್ರವಾಸಿಗರಿಗೆ, ಸ್ಥಳೀಯರಿಗೆ ಅತ್ಯುತ್ತಮ ಸಂಪರ್ಕ ರಸ್ತೆಯೂ ಇರುವು ದರಿಂದ ಕೂಳೂರು ತಣ್ಣಿರುಬಾವಿ ಬಳಿಯ ತಾತ್ಕಾಲಿಕ ಜೆಟ್ಟಿ ಮೂಲಕ ಈ ಜಲಕ್ರೀಡೆ ನಡೆಯುವ ಸ್ಥಳಕ್ಕೆ ತಲುಪಬಹುದು.

ಮೂರು ನದಿಗಳಲ್ಲೂ ಜೆಟ್ಟಿ ನಿರ್ಮಾಣ
ನಿರ್ಲಕ್ಷÂಕ್ಕೆ ಒಳಗಾಗಿರುವ ನದಿ ತಾಣಗಳನ್ನು ಬಳಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಉತ್ಸುಕವಾಗಿರುವ ಜಿಲ್ಲಾಡಳಿತ, ಫಲ್ಗುಣಿ, ನೇತ್ರಾವತಿ, ಶಾಂಭವಿ ನದಿಗಳಲ್ಲಿ ಜೆಟ್ಟಿ ನಿರ್ಮಿಸಲು ಚಿಂತಿಸಿದೆ. ಫಲ್ಗುಣಿ ನದಿಯಿಂದ ನೇತ್ರಾವತಿ ನದಿ ತಟದವರೆಗೆ 12 ಕಡೆಗಳಲ್ಲಿ ಜೆಟ್ಟಿ ನಿರ್ಮಿಸಿ ಪ್ರವಾಸಿ ಬೋಟ್‌ಗಳಿಗೆ ಬಂದುಹೋಗಲು ಅವಕಾಶ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿದೆ.

ನದಿಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಇದು ನದಿಗಳ ಬಳಕೆ, ಮಹತ್ವ, ಅಭಿವೃದ್ಧಿಗೆ ಅನುಕೂಲವಾಗಲಿದೆ ಎನ್ನುವುದು ಜಿಲ್ಲಾಡಳಿತದ ವಿಶ್ವಾಸ.

ಯಾವ ಕ್ರೀಡೆಗಳಿಗೆ ಉತ್ತೇಜನ?
ಕರಾವಳಿ ತೀರವನ್ನು ಪ್ರವಾಸೋ ದ್ಯಮಕ್ಕೆ ಬಳಸಿಕೊಳ್ಳುವುದರಲ್ಲಿ ಕೇರಳಕ್ಕೆ ಮೊದಲ ಸ್ಥಾನ. ಇದಕ್ಕೆ ತೀವ್ರವಾಗಿ ಪೈಪೋಟಿ ನೀಡುತ್ತಿದೆ ಕರ್ನಾಟಕದ ಕರಾವಳಿ. ಕಡಲು, ನದಿ ತೀರಗಳಲ್ಲಿ ನಡೆದ ಕರಾವಳಿ ಉತ್ಸವ, ಬೀಚ್‌ ಫೆಸ್ಟಿವಲ್‌, ಸರ್ಫಿಂಗ್‌ ಫೆಸ್ಟಿವಲ್‌, ಯಾಂಗ್ಲಿಂಗ್‌ ಫೆಸ್ಟಿವಲ್‌ಗ‌ಳು ಜನರನ್ನು ಸಮುದ್ರ, ನದಿ ತೀರಕ್ಕೆ ಕರೆ ತರುತ್ತಿವೆ. ರೋಯಿಂಗ್‌, ಕಯಾಕ್‌, ಸ್ಟ್ಯಾಂಡ್‌ ಅಪ್‌ ಪೆಡಲಿಂಗ್‌, ವಿಂಡ್‌ ಸರ್ಫಿಂಗ್‌, ಜೆಟ್‌ ಸ್ಕೀ, ಸ್ಪೀಡ್‌ ಬೋಟ್‌ ಸಹಿತ ವಿವಿಧ ಜಲಕ್ರೀಡೆಯತ್ತ ಜನರ ಗಮನ ಸೆಳೆಯಲು ಹಲವು ಜಲಸಾಹಸ ಕ್ರೀಡಾ ಆಯೋಜನೆಯ ಸಂಸ್ಥೆಗಳು, ವೈಯುಕ್ತಿಕವಾಗಿ ಆಸಕ್ತಿ ವುಳ್ಳವರು ಮುಂದಾಗಿದ್ದಾರೆ.

ಸ್ಕೂಬಾ ಡೈವಿಂಗ್‌ಗೆ ಅವಕಾಶ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸಾಹಸ ಕ್ರೀಡೆ ವೀಕ್ಷಣೆ, ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ.

ಜಲಕ್ರೀಡೆಯ ಭಾಗವಾಗಿಸಲು ಚಿಂತನೆ
ಇತ್ತೀಚೆಗೆ ನದಿ ಉತ್ಸವದ ಮೂರು ದಿನಗಳಲ್ಲೂ ಜನರ ಪಾಲ್ಗೊಳ್ಳುವಿಕೆ ಹೆಚ್ಚಿದ್ದ ಕಾರಣ ಜಿಲ್ಲಾಡಳಿತ ಇದನ್ನೇ ಸ್ಫೂರ್ತಿಯಾಗಿ ಬಳಸಿಕೊಂಡು ಕೇವಲ ವಾಣಿಜ್ಯ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿಲ್ಲ.

ಬದಲಾಗಿ ಸಾಂಪ್ರದಾಯಿಕ ಪ್ರವಾಸೋದ್ಯಮದ ಜತೆ ಕೌಟುಂಬಿಕವಾಗಿ ಜನರು ಬಂದು ಹೋಗುವ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ.

ಬಂಗ್ರಕೂಳೂರಿನ ಸುಮಾರು 23 ಎಕ್ರೆ ಸರಕಾರಿ ಪ್ರದೇಶವನ್ನು ಜಲಕ್ರೀಡೆಯ ಭಾಗವಾಗಿ ಭವಿಷ್ಯದಲ್ಲಿ ಬಳಸಿಕೊಳ್ಳಲು ಜಿಲ್ಲಾಡಳಿತ ಚಿಂತಿಸಿದೆ.

ಸಣ್ಣ ಅನುದಾನದಲ್ಲಿ ಅಭಿವೃದ್ಧಿ
ಫ‌ಲ್ಗುಣಿ, ನೇತ್ರಾವತಿ ನದಿ ಕಿನಾರೆ, ಬೀಚ್‌ಗಳಾದ ತಣ್ಣೀರುಬಾವಿ, ಸಸಿಹಿತ್ಲು ಪ್ರದೇಶ ಸರ್ಫಿಂಗ್‌ ಕ್ರೀಡೆಗೆ ಉತ್ತಮ ಸ್ಥಳವೆಂದು ಜಿಲ್ಲಾಡಳಿತ ನಿರ್ಧರಿಸಿ, ಸಣ್ಣ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ. ದೊಡ್ಡ ಬಜೆಟ್‌ನ ಯೋಜನೆಗಳು ಬಹಳಷ್ಟು ವರ್ಷಗಳನ್ನು ತೆಗೆದುಕೊಳ್ಳು ವುದರಿಂದ ಈಗಿನ ಸೌಲಭ್ಯ ಮತ್ತಷ್ಟು ಉತ್ತಮ ಪಡಿಸಿ ಪ್ರವಾಸಿ ಸ್ಥಳಗಳನ್ನು ಗುರುತಿಸಿ, ಶೌಚಾಲಯ, ಬಟ್ಟೆ ಬದಲಿಸುವ ಕೋಣೆಗಳು, ಕುಳಿತುಕೊಳ್ಳಲು ಬೆಂಚುಗಳನ್ನು ಒದಗಿಸಲು ಯೋಚಿಸಲಾಗಿದೆ.

 ಪ್ರವಾಸೋದ್ಯಮ ಅಭಿವೃದ್ಧಿ
ಸ್ಥಳೀಯ ಮೀನುಗಾರರ ನೆರವಿನಲ್ಲಿ ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ಆಯೋಜಿಸಿ ಯಶಸ್ವಿ ಆಗಿದ್ದೇವೆ. ಜಲಕ್ರೀಡೆಗೆ ದ.ಕ.ದಷ್ಟು ನೈಸರ್ಗಿಕ ಪ್ರದೇಶ ಬೇರೆಲ್ಲೂ ಇರಲಾರದು. ಇದನ್ನೇ ಬಳಸಿಕೊಂಡು ಈಗಾಗಲೇ ಹಲವು ಜಲಸಾಹಸ ಕ್ರೀಡೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲು ದಿನ ನಿಗದಿಯಾಗಿತ್ತು. ಕಾರಣಾಂತರಗಳಿಂದ ಮುಂದೆ ಹೋಗಿವೆ. ಮತ್ತೆ ಇದನ್ನು ಮಾಡುತ್ತೇವೆ. ಕೂಳೂರು ನದಿ ಬಳಿ ಈಗಾಗಲೇ ಜಲಕ್ರೀಡೆ ನಡೆಸುವವರಿಗೆ ಪ್ರೋತ್ಸಾಹ ನೀಡಿದ್ದೇವೆ. ಪ್ರವಾಸೋದ್ಯಮವನ್ನು ಮೈಕ್ರೋ ವ್ಯವಸ್ಥೆಯಲ್ಲಿ ಬೆಳೆಸುತ್ತಾ ಹೋಗ ಬೇಕಿದೆ.
 - ಶಶಿಕಾಂತ್‌ ಸೆಂಥಿಲ್‌,
ದ.ಕ. ಜಿಲ್ಲಾಧಿಕಾರಿ

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.