ಮರಡೋನ ಚಿನ್ನದ ಮೂರ್ತಿ ಇಂದು ಮಂಗಳೂರಿಗೆ
Team Udayavani, Dec 1, 2022, 6:35 AM IST
ಮಂಗಳೂರು: ಫುಟ್ಬಾಲ್ ದಂತಕತೆ ಡೀಗೊ ಮರಡೋನ ಅವರ “ಹ್ಯಾಂಡ್ ಆಫ್ ಗಾಡ್’ ಚಿನ್ನದ ಮೂರ್ತಿಯನ್ನು ಬೋಚೆ (ಡಾ| ಬೋಬಿ ಚೆಮನ್ನೂರ್) ಅವರ ನೇತೃತ್ವದಲ್ಲಿ ಕತಾರ್ಗೆ ಕೊಂಡೊಯ್ಯಲಾಗುತ್ತಿದೆ.
ತಿರುವನಂತಪುರದಲ್ಲಿ ಕೇರಳ ಲೋಕೋಪ ಯೋಗಿ ಹಾಗೂ ಪ್ರವಾಸ ಇಲಾಖೆಯ ಸಚಿವರಾದ ಪಿ.ಎ. ಮಹಮ್ಮದ್ ಇಲ್ಯಾಸ್ ಅವರು ಯಾತ್ರೆಗೆ ಚಾಲನೆ ನೀಡಿದ್ದಾರೆ.
ಚಿನ್ನದ ಮೂರ್ತಿ ಡಿ. ಒಂದರ ಸಂಜೆ 6 ಗಂಟೆಗೆ ಮಂಗಳೂರು ನೆಹರೂ ಮೈದಾನಕ್ಕೆ ಆಗಮಿಸಲಿದೆ. ಡಿ. 2ರಂದು ಸಂತ ಅಲೋಶಿಯಸ್ ಕಾಲೇಜಿಗೆ ಯಾತ್ರೆ ಆಗಮಿಸಲಿದ್ದು, ಬಳಿಕ ಮಣಿಪಾಲ, ಭಟ್ಕಳ ಮೂಲಕ ಗೋವಾಕ್ಕೆ ತೆರಳಲಿದೆ.
ಜಾಗೃತಿಗಾಗಿ ಯಾತ್ರೆ
ಮಾದಕದ್ರವ್ಯ ವಿರುದ್ಧ ನಡೆಸುವ ಹೋರಾಟ ಕ್ಕಾಗಿ ಬೋಚೆಯವರು ಚಿನ್ನದ ಮೂರ್ತಿಯ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಎಲ್ಲ ಶಾಲೆ ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ನಡೆಸುವ ಕಾರ್ಯಕ್ರಮ ಇದಾಗಿದೆ.ಹೀಗಾಗಿ ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಡಿ. 1ರಂದು ನೆಹರೂ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಭಾಗ ವಹಿಸಿದವರು ಲಕ್ಕಿ ಡ್ರಾ ಮೂಲಕ ಕತಾರ್ಗೆ ಪ್ರಯಾಣ ಮಾಡುವ ವಿಮಾನದ ಟಿಕೆಟ್ ಮತ್ತು ವಿಶ್ವಕಪ್ ಪಂದ್ಯ ವೀಕ್ಷಿಸಲು ಪಾಸ್ ಪಡೆಯುವ ಅವಕಾಶ ಇದೆ ಎಂದು ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಅಸ್ಲಾಂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್