ಗಾಂಜಾ: ಮತ್ತೋರ್ವನ ಸೆರೆ
Team Udayavani, Mar 10, 2017, 7:07 AM IST
ವಿಟ್ಲ: ವಿಟ್ಲ- ಪುತ್ತೂರು ರಸ್ತೆಯ ಉರಿ ಮಜಲುವಿನಲ್ಲಿ, ಗಾಂಜಾ ಸರಬರಾಜು ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿ ಗಾಂಜಾ ಮಾರಾಟ ಮಾಡುತ್ತಿದ್ದಾಗಲೇ, 300 ಗ್ರಾಂ ಗಾಂಜಾ ಸಹಿತ ವಿಟ್ಲ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ವಿಟ್ಲಮುಟ್ನೂರು ಕಂಬಳಬೆಟ್ಟು ದರ್ಗಾದ ಬಳಿ ನಿವಾಸಿ ಮಹಮ್ಮದ್ ಹಾರೀಸ್ ಯಾನೆ ಆಹುಲ್ ಹಾರೀಸ್(34) ಬಂಧಿತ ಆರೋಪಿ. ಈತ ಉರಿ ಮಜಲು ಸಮೀಪದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀ ಸರು, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ.ಆರ್. ಅವರ ಮಾರ್ಗ ದರ್ಶನದಲ್ಲಿ ವಿಟ್ಲ ಠಾಣಾಧಿ ಕಾರಿ ನಾಗರಾಜ್ ಹಾಗೂ ಸಿಬಂದಿ ತಂಡ ದಾಳಿ ನಡೆಸಿ, ಬಂಧಿಸು ವಲ್ಲಿ ಯಶಸ್ವಿಯಾಗಿದ್ದು, ಆತನಿಂದ 300 ಗ್ರಾಂ ಗಾಂಜಾ ವಶಪಡಿಸಿ ಕೊಂಡಿದ್ದಾರೆ.
ಕೆಲವು ತಿಂಗಳ ಹಿಂದೆ ಕನ್ಯಾನದಲ್ಲಿ ಇಬ್ಬರು ಆರೋಪಿಗಳು ಹಾಗೂ 13 ಕೆ.ಜಿ. ಗಾಂಜಾವನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡಿ ದ್ದರು. ಈ ಪ್ರಕರಣದಲ್ಲಿ ಹಾರೀಸ್ ತಲೆಮರೆಸಿಕೊಂಡಿದ್ದ. ಅದಲ್ಲದೇ ಈತನ ಮೇಲೆ ಪುತ್ತೂರು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ