ಮೆಸ್ಕಾಂನ ಮೀಟರ್‌ ಸುರಕ್ಷಾ ಸಾಧನವೇ ಅಪಾಯಕಾರಿ!

ಗುಣಮಟ್ಟದಲ್ಲಿ ಲೋಪ, ಸಿಬಂದಿ ಅನುಭದ ಕೊರತೆಯಿಂದ ಗ್ರಾಹಕರಿಗೆ ಕಷ್ಟ

Team Udayavani, Mar 25, 2019, 9:58 AM IST

25-March-1

ಸಂಪರ್ಕ ಸರಿಯಾಗದೆ ಅಡ್ಕಾರ್‌ ಬಳಿ ಮನೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದೆ.

ಸುಬ್ರಹ್ಮಣ್ಯ : ವಿದ್ಯುತ್‌ ದುರ್ಬ ಳಕೆ ತಡೆಯಲು ಮೆಸ್ಕಾಂ ಡಿಜಿಟಲ್‌ ಮೀಟರ್‌ ಅಳವಡಿಸುತ್ತಿದೆ. ಹಳೆಯ ಮೀಟರ್‌ಗಳನ್ನು ಬದಲಿಸುತ್ತಿದೆ. ಮೀಟರ್‌ಗಳ ಸುರಕ್ಷತೆಗೆ ಬಳಸುವ ಸುರಕ್ಷಾ ಬಾಕ್ಸ್‌ ಕಳಪೆಯಾಗಿದ್ದು, ಅಪಾಯಕಾರಿಯಾಗಿದೆ. ಗುಣಮಟ್ಟದ ನಿರ್ವಹಣೆ ತೋರದ ಕಾರಣ ಶಾರ್ಟ್‌ ಸರ್ಕ್ಯೂಟ್‌ನಂತಹ ಅವಘಡಗಳಿಗೆ ಅವಕಾಶ ಮಾಡಿಕೊಡುತ್ತಿವೆ.

ಸುಳ್ಯ ನಗರ ವ್ಯಾಪ್ತಿಯಲ್ಲಿ ಏಜೆನ್ಸಿ ಮೂಲಕ ವಿದ್ಯುತ್‌ ಸಂಪರ್ಕ ಹೊಂದಿರುವ ಮನೆಗಳಿಗೆ ಡಿಜಿಟಲ್‌ ಸ್ಟಾಟಿಕ್‌ ಮೀಟರ್‌ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಜತೆಗೆ ಹಳೆಯ ಸಂಪರ್ಕದ ಫೈಬರ್‌, ಕಬ್ಬಿಣ ಮಾದರಿಯ ಮೀಟರ್‌ಗಳನ್ನು ತೆಗೆದು ಬದಲಾಯಿಸುವ ಕಾರ್ಯವೂ ನಡೆಯುತ್ತಿದೆ. ಮೆಸ್ಕಾಂಗೆ ಮೀಟರ್‌ ರೀಡಿಂಗ್‌ ಪಡೆಯಲು ಇನ್ನಿತರ ಅನುಕೂಲತೆಗೆ, ಮನೆಯ ಒಳಗಡೆ ಇರುವ ಮೀಟರ್‌ ಅನ್ನು ಮನೆಯ ಹೊರ ಬದಿಯಲ್ಲಿ ಸೂಕ್ತ ಸ್ಥಳದಲ್ಲಿ ಅಳವಡಿಸಲಾಗುತ್ತಿದೆ. ನಗರದಲ್ಲಿ ಈಗ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ. ಇದು ಗ್ರಾಮಾಂತರಕ್ಕೂ ವಿಸ್ತರಿಸಲಿದೆ.

ಬಾಕ್ಸ್‌ ಜೋಡಣೆ
ಡಿಜಿಟಲ್‌ ಮಾದರಿಯ ಮೀಟರ್‌ ಅಳವಡಿಕೆ ಮೊದಲು ಮಳೆ ಇನ್ನಿತರ ಸಂರಕ್ಷಣೆಯ ಕಾರಣಕ್ಕಾಗಿ ಸುರಕ್ಷಾ ಬಾಕ್ಸ್‌ ಜೋಡಿಸಲಾಗುತ್ತಿದೆ. ಅದರ ಅಳವಡಿಕೆ ಜವಾಬ್ದಾರಿಯನ್ನು ಏಜೆನ್ಸಿಗೆ ವಹಿಸಲಾಗಿದೆ. ಏಜೆನ್ಸಿಯ ಸಿಬಂದಿ ಜೋಡಿಸಿದ ಹೋದ ಬಳಿಕ ಮೀಟರ್‌ ಗೆ ಸಂಪರ್ಕ ನೀಡುವ ವೇಳೆ ಅಲ್ಲಲ್ಲಿ ಶಾರ್ಟ್‌ ಸರ್ಕ್ಯೂಟ್‌ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ. ಗುಣಮಟ್ಟವಿಲ್ಲ.

ಹೊಸ ಮೀಟರ್‌ ಬೋರ್ಡ್‌ ಅಳವಡಿಸುವ ಹೊರಕವಚದ ಪೆಟ್ಟಿಗೆ ಅಷ್ಟು ಗುಣಮಟ್ಟ ಹೊಂದಿಲ್ಲ ಎನ್ನುವ ಅಪಾದನೆಗಳೂ ಇವೆ. ಅವುಗಳು ತೆಳ್ಳಗಿದ್ದು, ಬಾಗುತ್ತಿವೆ. ನೀರು ಅವುಗಳ ಒಳಕ್ಕೆ ಪ್ರವೇಶಿಸಲು ಅನುಕೂಲಕರವಾಗಿದೆ. ಮಳೆಗಾಲದ ಅವಧಿಯಲ್ಲಿ ಗಾಳಿ ಮಳೆಯಿಂದ ರಕ್ಷಣೆ ಅಸಾಧ್ಯ ಎನ್ನುತ್ತಾರೆ ಬಳಕೆದಾರರು.

ಏಜೆನ್ಸಿಯಿಂದ ನೇಮಕವಾದ ಸಿಬಂದಿ ವೃತ್ತಿ ಕೌಶಲ ಹೊಂದಿಲ್ಲ. ಅವರಲ್ಲಿ ಅನುಭವದ ಕೊರತೆ ಕಂಡುಬರುತ್ತಿದೆ. ಹೀಗಾಗಿ ಸುರಕ್ಷತೆ ಪೆಟ್ಟಿಗೆ ಆಳವಡಿಸುವ ವೇಳೆ ಎಚ್ಚರಿಕೆ ವಹಿಸುತ್ತಿಲ್ಲ. ಮೀಟರ್‌ ಅಳವಡಿಸುವಾಗ ಇದ್ದ ವೈರನ್ನೇ ಎಳೆದು ಬಳಸುತ್ತಿದ್ದಾರೆ. ಇದ್ದಿದ್ದನ್ನೆ ಅಲ್ಲಿಗೆ ಎಳೆದು ಸಂಪರ್ಕ ನೀಡುತ್ತಾರೆ. ಈ ವೇಳೆ ಅವುಗಳ ಮೇಲ್ಪದರ ಕಿತ್ತು ಹೋಗಿ ಹಾನಿಗೊಂಡು ದೋಷಗಳು ಕಾಣಿಸಿಕೊಳ್ಳುತ್ತಿವೆ.

ಶಾರ್ಟ್‌ ಸರ್ಕ್ಯೂಟ್‌
ಮೆಸ್ಕಾಂ ಇಲಾಖೆ ವಿದ್ಯುತ್‌ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಹೊಸ ಡಿಜಿಟಲ್‌ ವ್ಯವಸ್ಥೆಯನ್ನು ಇತ್ತೀಚೆಗೆ ಜಾರಿಗೆ ತಂದಿತ್ತು. ವಿದ್ಯುತ್‌ ಬಳಕೆದಾರರಿಗೆ ಹೊಸ ಡಿಜಿಟಲ್‌ ಮೀಟರ್‌ ಉಪಕರಣ ಉಚಿತವಾಗಿ ವಿತರಿಸಲಾಗುತ್ತಿದೆ. ಏಜೆನ್ಸಿ ಪಡೆದ ಸಂಸ್ಥೆಯ ಸಿಬಂದಿ ಇದನ್ನು ಮನೆಗೆ ಬಂದು ಅಳವಡಿಸಿ ತೆರಳುತ್ತಾರೆ. ಸುರಕ್ಷತೆ ಪೆಟ್ಟಿಗೆ ಅಳವಡಿಸಿ ಬಳಿಕ ಮೀಟರ್‌ಗೆ ಸಂಪರ್ಕ ಕಲ್ಪಿಸುವ ಹೊತ್ತಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಕಾಣಿಸಿಕೊಳುತ್ತಿದೆ. ಅಡ್ಕಾರ್‌ ಭಾಗದಲ್ಲಿ ಇಂತಹ ಘಟನೆಗಳು ನಡೆದಿವೆ. ಆ ಭಾಗದಲ್ಲಿ ಮನೆಯ ವೈರಿಂಗ್‌ ಇತ್ಯಾದಿಗಳಿಗೆ ಹಾನಿಯಾಗಿವೆ. ವೈರಿಂಗ್‌, ಗೃಹಬಳಕೆಯ ಉಪಕರಣಗಳು ಸುಟ್ಟಿವೆ. ಇನ್ನೂ ಹಲವು ಕಡೆಗಳಲ್ಲಿ ಈ ರೀತಿ ಘಟನೆಗಳು ನಡೆದಿರುವ ಕುರಿತು ದೂರುಗಳು ಬಂದಿವೆ.

ಕೇಂದ್ರ ಸರಕಾರದ ಐಪಿಡಿಎಸ್‌ ಹಾಗೂ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಂತೆ ಡಿಜಿ ಟಲ್‌ ರೀಡಿಂಗ್‌ ಹೊಂದಿರುವ ಮೀಟರ್‌ ರೀಡಿಂಗ್‌ ಮೆಷಿನ್‌ ಅಳವಡಿಸಲಾಗುತ್ತಿದೆ. ಜತೆಗೆ ಇತರ ಯೋಜನೆಗಳಲ್ಲಿ ಸಂಪರ್ಕದ ಮೀಟರ್‌ ಅಳವಡಿಕೆ, ಬದಲಾವಣೆ ನಡೆಯುತ್ತಿವೆ. ರಾಜಸ್ಥಾನದ ವ್ಯಕ್ತಿಗಳು ಮೀಟರ್‌ ಮತ್ತು ಸುರಕ್ಷೆ ಪೆಟ್ಟಿಗೆ ಅಳವಡಿಸುವ ಗುತ್ತಿಗೆ ವಹಿಸಿಕೊಂಡಿದ್ದು, ಅವರಿಂದ ಕುಂದಾಪುರದ ಏಜೆನ್ಸಿಯವರು ತುಂಡು ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಮನೆಗೆ ಬಂದ ವ್ಯಕ್ತಿಗಳ ಪರಿಚಯವೂ ಸ್ಥಳೀಯರಿಗೆ ಇರುವುದಿಲ್ಲ.

ದೂರು ಬಂದಲ್ಲಿ ಪರಿಶೀಲನೆ
ಮೆಸ್ಕಾಂ ಡಿಜಿಟಲ್‌ ಮೀಟರ್‌ ಮತ್ತು ಸುರಕ್ಷತೆ ಪೆಟ್ಟಿಗೆ ಅಳವಡಿಸಲು ಗುತ್ತಿಗೆ ನೀಡಿದೆ. ಅಳವಡಿಕೆ ವೇಳೆ ನಿಯಮಗಳನ್ನು ಪಾಲಿಸಬೇಕಿದೆ. ಇದನ್ನು ಉಲ್ಲಂಘಿಸಿರುವುದು ಕಂಡುಬಂದರೆ ಕ್ರಮ ಜರಗಿಸಬೇಕಾಗುತ್ತದೆ. ಶಾರ್ಟ್‌ ಸರ್ಕ್ಯೂಟ್‌ ಪ್ರಕರಣ ನಡೆದ ಕುರಿತು ದೂರುಗಳು ಬಂದಲ್ಲಿ ಪರಿಶೀಲಿಸುತ್ತೇವೆ.
– ನರಸಿಂಹ
ಇಇ, ಮೆಸ್ಕಾಂ ಪುತ್ತೂರು ವಿಭಾಗ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.