ದುರವಸ್ಥೆ! ಕುಡುಕನಿಗೆ ಆಶ್ರಯತಾಣವಾದ ಎಟಿಎಂ
Team Udayavani, Nov 7, 2019, 3:11 PM IST
ಸುರತ್ಕಲ್: ಜನರು ತ್ವರಿತವಾಗಿ ಹಣ ಪಡೆಯಲು ಎಟಿಎಂ ಹುಡುಕಿಕೊಂಡು ಹೋಗುವುದು ಮಾಮೂಲಿ. ಆದರೆ ನೀವು ಮಂಗಳೂರಿನ ಸುರತ್ಕಲ್ ಭಾಗದವರಾಗಿದ್ದು, ತುರ್ತಾಗಿ ಹಣ ಬೇಕೆಂದು ಕಾನಾ ಬಳಿಯ ಎಟಿಎಂ ಹೋದರೆ ನಿಮಗೆ ಅಕ್ಷರಃ ದುರ್ನಾತದ ಮೋರಿಗೆ ಇಳಿಗೆ ಅನುಭವ. ಹಾಗಾದರೆ ಏನಾಗಿದೆ ಅಲ್ಲಿ? ಮುಂದೆ ಓದಿ.
ಕಾನಾದ ಎಂಆರ್ ಪಿಎಲ್ ಕಾರ್ಗೋ ಗೇಟ್ ನ ಬಳಿಯ ಎಟಿಎಂ ಕೋಣೆ ಇಂತಹ ದುರ್ನಾತ ಬೀರುವ ಸ್ಥಳ. ಇದಕ್ಕೆ ಕಾರಣ ಸಾರ್ವಜನಿಕರ ಉಪಯೋಗಕ್ಕೆ ಇರುವ ಎಟಿಎಂನ್ನು ಮಾನಸಿಕ ಅಸ್ವಸ್ಥನಂತಿರುವ ಕುಡುಕನೋರ್ವ ತನ್ನ ವಾಸಸ್ಥಳವಾಗಿ ಮಾರ್ಪಟ್ಟಿರುವುದು.
ಸ್ಥಳೀಯರ ಪ್ರಕಾರ ಈತ ಕಳೆದ ಕೆಲವು ದಿನಗಳಿಂದ ಇಲ್ಲಿಯೇ ವಾಸವಾಗಿದ್ದು, ಅಲ್ಲೇ ಮೂತ್ರ ಮಾಡಿ ಅಲ್ಲೇ ಮಲಗಿರುತ್ತಾನೆ. ಯಾರ ಮಾತನ್ನೂ ಕೇಳದ ಈತ ಸದಾ ಕುಡಿದಿರುತ್ತಾನೆ ಎನ್ನುತ್ತಾರೆ ಸ್ಥಳೀಯರು.
ಈತನ ಕಾರಣದಿಂದ ಎಟಿಎಂ ಕೇಂದ್ರ ಗಬ್ಬು ನಾರುತ್ತಿದ್ದು, ಕಳೆದೆರಡು ದಿನಗಳಿಂದ ಯಾರಿಗೂ ಉಪಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಇಲ್ಲಿ ಯಾವುದೇ ಗಾರ್ಡ್ ಕೂಡಾ ಇಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು, ಸಾರ್ವಜನಿಕರ ಮುಕ್ತ ಬಳಕೆಗೆ ಎಟಿಎಂ ಅನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ