ಕಾಂಗ್ರೆಸ್ ಸ್ಥಿತಿ ಊರಿಗೆ ಮನುಷ್ಯ ಅಲ್ಲ, ಮಸಣಕ್ಕೆ ಹೆಣ ಅಲ್ಲ: ಆರ್.ಅಶೋಕ್
ಡಿಕೆಶಿ ಹಿಜಾಬ್ ಪರ ಇಲ್ಲ, ಸಿದ್ದರಾಮಯ್ಯ ಕೇಸರಿ ಪರ ಇಲ್ಲ
Team Udayavani, Feb 19, 2022, 12:15 PM IST
ಮಂಗಳೂರು : ಊರಿಗೆ ಮನುಷ್ಯ ಅಲ್ಲ,ಮಸಣಕ್ಕೆ ಹೆಣ ಅಲ್ಲ ಎನ್ನುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಕಡತ ವಿಲೇವಾರಿ ಅಭಿಯಾನವನ್ನು ಉದ್ಘಾಟಿಸಿ ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸುವ ಬದಲು ಧರಣಿ ನಡೆಸುತ್ತಿದ್ದಾರೆ. ಡಿಕೆಶಿ ಹಿಜಾಬ್ ಪರ ಇಲ್ಲ. ಸಿದ್ದರಾಮಯ್ಯ ಕೇಸರಿ ಪರ ಇಲ್ಲ. ಅವರಿಬ್ಬರ ತಿಕ್ಕಾಟದಲ್ಲಿ ಧರಣಿ ನಡೆಯುತ್ತಿದೆ ಎಂದರು.
ಈಶ್ವರಪ್ಪ ಹೇಳಿಕೆ ಅವರಿಗೆ ಕೇವಲ ನೆಪ. ಕಾಂಗ್ರೆಸ್ ಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇಲ್ಲ. ಹಿಜಾಬ್ ವಿರುದ್ದ ಮಾತಾಡಿದರೆ ವೋಟ್ ಹೋಗುತ್ತದೆ ಎನ್ನುವ ಭಯ. ಅಧಿವೇಶನ ಕ್ಕೆ ಕೋಟ್ಯಂತರ ರೂ. ಖರ್ಚು ಇದೆ. ಅದು ಜನತೆಯ ತೆರಿಗೆ ಹಣ. ಕಾಂಗ್ರೆಸ್ ನವರು ಇಲ್ಲಿ ನಿದ್ದೆ ಮಾಡುವ ಮೂಲಕ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಿಜಾಬ್ ಬಗ್ಗೆ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟ ಪಡಿಸಲಿ ಎಂದು ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಕಡತ ವಿಲೇವಾರಿ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು