ಸಕಲೇಶಪುರಕ್ಕೆಂದವರು ಮಂಗಳೂರಿನಲ್ಲಿ ಕಾಣೆಯಾದರು !
Team Udayavani, Jul 31, 2019, 5:28 AM IST
ಮಂಗಳೂರು: ಸಿದ್ಧಾರ್ಥ್ ನೇತ್ರಾವತಿ ಸೇತುವೆ ಬಳಿ ಸೋಮವಾರ ರಾತ್ರಿ ನಾಪತ್ತೆಯಾಗಿ ರುವ ಪ್ರಕರಣದ ಕುರಿತು ಪೊಲೀಸರಿಂದ ಹಲವು ಆಯಾಮಗಳ ತನಿಖೆ ನಡೆಯುತ್ತಿದೆ.
ಸಿದ್ಧಾರ್ಥ್ ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆ ಬಳಿಯಿಂದ ದಿಢೀರನೇ ನಾಪತ್ತೆ ಯಾಗಿರುವುದಕ್ಕೆ ಪ್ರಮುಖ ಸಾಕ್ಷಿ ಅವರ ಕಾರು ಚಾಲಕ ಬಸವರಾಜ ಪಾಟೀಲ್. ಯಾದಗಿರಿ ಜಿಲ್ಲೆಯ ಪಾಟೀಲ್ ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಸೋಮ ವಾರ ಮಧ್ಯರಾತ್ರಿಯೇ ದೂರು ಸಲ್ಲಿಸಿದ್ದಾರೆ. ಸಾಕಷ್ಟು ಕುತೂಹಲಕ್ಕೆ ಕಾರಣವಾದ ಈ ಪ್ರಕರಣವನ್ನು ಬೇಧಿಸಲು ಬಸವರಾಜ ಅವರ ಹೇಳಿಕೆ ಮತ್ತು ದೂರು ಪ್ರಮುಖ ಸುಳಿವು ಒದಗಿಸುವ ಸಾಧ್ಯತೆಯಿದೆ. ಸಿದ್ಧಾರ್ಥ್ ಅವರನ್ನು ಮಂಗಳೂರಿಗೆ ಕರೆ ತಂದಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕ ಬಸವರಾಜ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ದೂರಿನಲ್ಲಿ ಏನಿದೆ?
“ನಾನು ಸಿದ್ಧಾರ್ಥ್ ಬಳಿ 3 ವರ್ಷಗಳಿಂದ ಕಾರು ಚಾಲಕನಾಗಿ ದ್ದೇನೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ಮನೆಗೆ ತೆರಳಿದ್ದೆ. ಅಲ್ಲಿಂದ ಅವರನ್ನು ಇನ್ನೋವಾ ಕಾರಿನಲ್ಲಿ ವಿಠಲ ಮಲ್ಯ ರಸ್ತೆಯಲ್ಲಿರುವ ಕಚೇರಿಗೆ ಕರೆದೊಯ್ದೆ. ಸುಮಾರು 11 ಗಂಟೆಯವರೆಗೆ ಅವರು ಅಲ್ಲಿದ್ದರು. 11.30ಕ್ಕೆ ಮರಳಿ ಸದಾಶಿವ ನಗರದ ಮನೆಗೆ ವಾಪಸ್ ಬಂದೆವು. ಅನಂತರ ನನ್ನಲ್ಲಿ ಅವರು “ಊರಿಗೆ ಹೋಗಬೇಕಾಗಿದ್ದು, ನೀನು ಮನೆಗೆ ಹೋಗಿ ಲಗೇಜ್ ತೆಗೆದುಕೊಂಡು ಬಾ’ ಎಂದರು. ಅದರಂತೆ ನಾನು ಲಗೇಜ್ನೊಂದಿಗೆ ವಾಪಸಾದೆ’.
“ಮಧ್ಯಾಹ್ನ ಸುಮಾರು 12.30ಕ್ಕೆ ಸಕಲೇಶಪುರಕ್ಕೆ ಹೊರಡುವಂತೆ ಸೂಚಿಸಿದರು. ಅದರಂತೆ ಕಾರು ಚಲಾಯಿಸಿ ಹೊರಟೆ. ಸಕಲೇಶಪುರ ತಲುಪುತ್ತಿದ್ದಂತೆ ಮಂಗಳೂರು ಕಡೆ ಸಾಗೋಣ ಎಂದರು. ಆ ಪ್ರಕಾರ ಮಂಗಳೂರು ನಗರ ಪ್ರವೇಶಿಸುವ ಸರ್ಕಲ್ಗೆ ಬಂದಾಗ ಎಡಕ್ಕೆ ತೆಗೆದುಕೋ; ಸೈಟ್ಗೆ ಹೋಗಬೇಕು ಎಂದರು. ಅದರಂತೆ ಎಡಕ್ಕೆ ತೆಗೆದು ಕೊಂಡು ಕೇರಳ ಹೈವೇ ರಸ್ತೆಯಲ್ಲಿ 3-4 ಕಿ.ಮೀ. ಸಾಗಿದಾಗ ನದಿಗೆ ಅಡ್ಡಲಾಗಿ ಕಟ್ಟಿದ ದೊಡ್ಡ ಸೇತುವೆ ಎದುರಾಯಿತು. ನನ್ನಲ್ಲಿ ಕಾರು ನಿಲ್ಲಿಸು ಎಂದು ಹೇಳಿದರು. ಅವರು ಕೆಳಗಿಳಿದು, ನೀನು ಸೇತುವೆಯ ಆ ತುದಿಗೆ ಗಾಡಿಯನ್ನು ನಿಲ್ಲಿಸು; ನಾನು ನಡೆದು ಬರುತ್ತೇನೆ ಎಂದರು’.
“ನಾನು ಅವರು ತಿಳಿಸಿದಂತೆ ಮಾಡಿದ್ದು, ಮತ್ತೆ ಬಂದ ಅವರು, ನೀನು ಕಾರಿನಲ್ಲೇ ಕುಳಿತಿರು ಅಂತ ಹೇಳಿ ಜೋಡಿ ರಸ್ತೆಯ ಬಲಭಾಗದ ಕಡೆಗೆ ವಾಪಸ್ ಬ್ರಿಡ್ಜ್ ಅನ್ನು ದಾಟಿ ಮಂಗಳೂರು ಕಡೆಗೆ ಬ್ರಿಡ್ಜ್ನಲ್ಲಿ ನಡೆದುಕೊಂಡು ಹೊರಟರು. ರಾತ್ರಿ ಸುಮಾರು 8 ಗಂಟೆಯಾದರೂ ವಾಪಸ್ ಬರಲಿಲ್ಲ. ಅವರ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಕೂಡಲೇ ಅವರ ಮಗ ಅಮಾರ್ತ್ಯ ಹೆಗ್ಡೆಗೆ ಕರೆ ಮಾಡಿ ವಿಷಯ ತಿಳಿಸಿದೆ. ಅನಂತರ ಮಂಗಳೂರಿನಲ್ಲಿದ್ದ ನಮ್ಮ ಕಂಪೆನಿಗೆ ಸಂಬಂಧಿಸಿದ ಪ್ರದೀಪ್ ಶೆಟ್ಟಿ ಅವರು ಬಂದರು. ಅವರಲ್ಲಿ ಎಲ್ಲವನ್ನೂ ತಿಳಿಸಿದೆ. ಬಳಿಕ ನಮ್ಮ ಮಾಲಕ ಸಿದ್ಧಾರ್ಥ್ ಬಗ್ಗೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ’ ಎಂದು ತಿಳಿಸಿದ್ದಾರೆ ಬಸವರಾಜ.
ರಾ. ಹೆ.: ದೀಪವಿಲ್ಲ-ಸಿಸಿ ಕೆಮರಾವೂ ಇಲ್ಲ !
ಮಂಗಳೂರು, ಜು. 30: ಕಾಸರಗೋಡು-ಕೊಣಾಜೆ ಭಾಗವನ್ನು ಮಂಗಳೂರಿಗೆ ಸಂಪರ್ಕಿಸುವ ನಗರದ ಮುಖ್ಯ ರಸ್ತೆ ಪಂಪ್ವೆಲ್-ತೊಕ್ಕೊಟ್ಟು ಹೆದ್ದಾರಿ ಕೆಲವು ವರ್ಷದ ಹಿಂದೆ ಚತುಷ್ಪಥ ಆಗಿದ್ದರೂ ಈ ರಸ್ತೆಯಲ್ಲಿ ಮೂಲ ಸಮಸ್ಯೆಗಳು ಇತ್ಯರ್ಥವಾಗಿಲ್ಲ.
ನೇತ್ರಾವತಿ ಸೇತುವೆ ಸೇರಿದಂತೆ ರಸ್ತೆಯ ಉದ್ದಕ್ಕೂ ಕೆಲವೆಡೆ ಬೀದಿದೀಪ ಇದ್ದರೂ ಉರಿಯುತ್ತಿಲ್ಲ. ಜತೆಗೆ ಈ ರಸ್ತೆ ವ್ಯಾಪ್ತಿಯಲ್ಲಿ ಎಲ್ಲಿಯೂ ಸಿಸಿ ಕೆಮರಾ ವ್ಯವಸ್ಥೆಯೂ ಇಲ್ಲ. ಹೀಗಾಗಿ ಪ್ರಕರಣವನ್ನು ಭೇದಿಸುವಲ್ಲಿ ಜಿಲ್ಲಾಡಳಿತ- ಪೊಲೀಸ್ ಇಲಾಖೆಗೆ ಕೊಂಚ ಸಮಸ್ಯೆಯಾಗಿದೆ.
ಸಿಸಿ ಕೆಮರಾ ಇರುತ್ತಿದ್ದರೆ ಸಿದ್ದಾರ್ಥ್ ಕಣ್ಮರೆಯ ಬಗ್ಗೆ ಸಾಕ್ಷ್ಯ ದೊರೆಯುತ್ತಿತ್ತು. ಆದರೆ ಸಿಸಿ ಕೆಮರಾ ಇಲ್ಲದೆ ಇದಕ್ಕೆ ಅವಕಾಶವಿಲ್ಲ. ಜತೆಗೆ ಸೋಮವಾರ ರಾತ್ರಿ ಸಿದ್ದಾರ್ಥ್ ಕಣ್ಮರೆ ಆದ ಸಂದರ್ಭ ಸೇತುವೆ ವಿದ್ಯುತ್ ದೀಪ ಉರಿಯುತ್ತಿರಲಿಲ್ಲ. ಹೀಗಾಗಿ ಬೇರೆ ವಾಹನದವರಿಗೂ ಇಲ್ಲಿ ನಡೆದ ಯಾವ ಘಟನೆಯೂ ಕಾಣಿಸಲಿಲ್ಲ ಎನ್ನಲಾಗುತ್ತಿದೆ.
ಆದರೆ ಸನಿಹದಲ್ಲೇ ಇರುವ ರೈಲ್ವೇ ಸೇತುವೆಯಲ್ಲಿ ಸಿಸಿ ಕೆಮರಾಗಳಿವೆ. ರಸ್ತೆ ಸೇತುವೆಯಲ್ಲಿ ಬೀದಿದೀಪ, ಸಿಸಿ ಕೆಮರಾ ಇಲ್ಲದಿರುವ ಬಗ್ಗೆ ಪೊಲೀಸ್ ಫೋನ್ನಲ್ಲಿಯೂ ಅನೇಕ ಬಾರಿ ಉಲ್ಲೇಖವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ