ಪ್ರಧಾನಿ ಮೋದಿ ಹೆಸರಲ್ಲಿ ಸರಪಾಡಿ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ !
Team Udayavani, Dec 26, 2019, 6:57 PM IST
ಬಂಟ್ವಾಳ: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಎಲ್ಲಡೆ ಗ್ರಹಣ ದೋಷದ ಪರಿಹಾರಾರ್ಥವಾಗಿ ಗುರುವಾರ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಬೇರೆ ಬೇರೆ ರೀತಿಯ ಪೂಜಾ ವಿಧಿ ವಿಧಾನಗಳು ನಡೆದಿದ್ದು, ಸರಪಾಡಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅಭಿಮಾನಿ ಭಕ್ತರು ಹೋಮ ಮಾಡಿಸಿದ್ದಾರೆ.
ತಾಲೂಕಿನ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲೂ ಗ್ರಹಣದ ಹಿನ್ನೆಲೆಯಲ್ಲಿ ಗ್ರಹಣ ಶಾಂತಿ ಹೋಮ ಆಯೋಜಿಸಲಾಗಿತ್ತು. ಈ ವೇಳೆ ಮೋದಿ ಅಭಿಮಾನಿ ಭಕ್ತರು ಪ್ರಧಾನಿಯ ಹೆಸರಿನಲ್ಲಿ ಹೋಮದ ನಿಗದಿತ ಮೊತ್ತವನ್ನು ಪಾವತಿಸಿ ರಶೀದಿ ಮಾಡಿಕೊಂಡು ಪೂಜೆ ಮಾಡಿಸಿದ್ದಾರೆ. ಮೋದಿಯವರ ಪೂರ್ಣ ಹೆಸರಿನೊಂದಿಗೆ ರಾಶಿ, ನಕ್ಷತ್ರವನ್ನೂ ತಿಳಿದುಕೊಂಡು ಈ ರೀತಿ ಹೋಮದ ಸೇವೆ ನೀಡಿದ್ದಾರೆ.
ಗ್ರಹಣದ ಸಮಯದಲ್ಲಿ ದೇಶದ ಯಾವುದೋ ಒಂದು ಕಡೆ ಪ್ರಧಾನಿಯವರ ಹೆಸರಿನಲ್ಲಿ ಭಕ್ತರು ಪೂಜೆ ಮಾಡಿಸಿರುವುದನ್ನು ಫೇಸ್ಬುಕ್ ಮೂಲಕ ತಿಳಿದುಕೊಂಡು ತಾವೂ ಹೋಮ ಮಾಡಿಸಿದ್ದಾರೆ. ಪ್ರಧಾನಿಯವರಿಗೆ ದೇಶವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವ ಶಕ್ತಿ ಸಿಗಲಿ ಎಂದು ಹೋಮ ಮಾಡಿಸಿದ್ದೇವೆ ಎಂದು ಅಭಿಮಾನಿ ಭಕ್ತರೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು