“ತೆರಿಗೆ ವಿಧಿಸಲೆಂದೇ ಅಧಿಕಾರಕ್ಕೇರಿದ ಮೋದಿ ಸರಕಾರ’
Team Udayavani, Jul 7, 2017, 3:45 AM IST
ಮಹಾನಗರ : ಬಣ್ಣ ಬಣ್ಣದ ಘೋಷಣೆ ಹೊರಡಿಸಿ ದೇಶದ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಪ್ರತಿ ಕ್ಷಣಕ್ಕೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಜನರ ಬದುಕಿಗೆ ಮಾರಕ ಹೊಡೆತ ನೀಡಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದರು.
ಮಂಗಳೂರು ನಗರ ಕೇಂದ್ರ ವಿಭಾಗ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರಚಾರಾಂದೋಲನದ ಭಾಗವಾಗಿ ನಗರದಾದ್ಯಂತ ಜರಗಿದ ವಾಹನ ಪ್ರಚಾರ ಜಾಥಾವನ್ನು ಸೆಂಟ್ರಲ್ ಮಾರ್ಕೆಟ್ ಬಳಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ಬಂದ 100 ದಿನದೊಳಗೆ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ ನರೇಂದ್ರ ಮೋದಿ, ಒಂದು ಸಾವಿರ ದಿನಗಳು ಕಳೆದರೂ ಆ ಬಗ್ಗೆ ಚಕಾರವೆತ್ತುತ್ತಿಲ್ಲ. ಜನಧನ್ ಯೋಜನೆಯ ಮೂಲಕ ಜನರನ್ನು ಹಾಡಹಗಲಲ್ಲೇ ವಂಚಿಸಲಾಗಿದೆ. ಸ್ವತ್ಛ ಭಾರತ್ ಎಂಬ ಭಾವನಾತ್ಮಕ ವಿಚಾರವನ್ನು ಜನರಲ್ಲಿ ಮೂಡಿಸಿ ಎಲ್ಲರ ಕೈಯಲ್ಲೂ ಪೊರಕೆ ಹಿಡಿಸಿ ಪ್ರತಿಯೊಬ್ಬರ ತಲೆಗೆ ಸ್ವತ್ಛ ಭಾರತ್ ತೆರಿಗೆ ವಿಧಿಸಿದ್ದು, ಬಳಿಕ ರೈತರ ಹೆಸರಲ್ಲಿ ಕೃಷಿ ಕಲ್ಯಾಣ ತೆರಿಗೆಯನ್ನು ಕೂಡ ವಿಧಿಸಲಾಯಿತು. ಈಗ ಜಿಎಸ್ಟಿ ಹೆಸರಿನಲ್ಲಿ ಮತ್ತೆ ಜನತೆಯನ್ನು ಸುಲಿಗೆ ಮಾಡಲು ಸರಕಾರ ತುದಿಗಾಲಲ್ಲಿ ನಿಂತಿದೆ. ಹೀಗೆ ನಿರಂತರವಾಗಿ ತೆರಿಗೆ ವಿಧಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ ಕೇಂದ್ರ ಸರಕಾರವು ನಿಜಕ್ಕೂ ತೆರಿಗೆ ಸರಕಾರವಾಗಿದೆ ಎಂದರು.
ಜಾಥಾವು ಕೃಷ್ಣಭವನ, ಬಲ್ಮಠ, ಕಂಕನಾಡಿ, ಜಪ್ಪು, ಬೋಳಾರ, ಕುದ್ರೋಳಿ, ಬಂದರು, ಕಾರ್ಸ್ಟ್ರೀಟ್ ಸಹಿತ 15 ಕಡೆಗಳಲ್ಲಿ ಕಾರ್ಯಕ್ರಮವನ್ನು ನೀಡಿ ಕೊನೆಗೆ ನಗರದ ಸರ್ವಿಸ್ ಬಸ್ ನಿಲ್ದಾ ಣ ಬಳಿಯಲ್ಲಿ ಸಮಾರೋಪಗೊಂಡಿತು.
ಸಮಾರೋಪ ಭಾಷಣವನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾಡಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ಸಿಪಿಐ(ಎಂ) ಮಂಗಳೂರು ಮುಖಂಡರಾದ ಭಾರತಿ ಬೋಳಾರ್, ನಾಗೇಶ್ ಕೋಟ್ಯಾನ್, ಸಂತೋಷ್ ಆರ್.ಎಸ್., ಪವನ್, ಗಣೇಶ್ ಮುಂತಾದವರು ಜಾಥಾದ ನೇತೃತ್ವವನ್ನು ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು