ಪ್ರಧಾನಿ ಮೋದಿಗೆ ಆರ್ಎಸ್ಎಸ್ ರಿಮೋಟ್: ಸಿದ್ದು ಲೇವಡಿ
Team Udayavani, Mar 7, 2019, 12:30 AM IST
ಮಂಗಳೂರು: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರಿಮೋಟ್ ಕಂಟ್ರೋಲ್ ಎಂಬ ರೀತಿಯ ಹೇಳಿಕೆ ನೀಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಬಜಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, “ಹಾಗಾದರೆ ಮೋದಿಗೆ ಯಾರು ರಿಮೋಟ್ ಕಂಟ್ರೋಲ್ ಇದ್ದಾರೆ ಪ್ರಜಾಪ್ರಭುತ್ವದಲ್ಲಿ ರಿಮೋಟ್ ಅನ್ನೋದು ಒಂದು ಇರುತ್ತಾ? ರಾಜಕೀಯ ಮಾತನಾಡಲಿ, ಆದರೆ ಮೋದಿ ಅಸಂಬದ್ಧವಾಗಿ ಮಾತನಾಡಬಾರದು. ಅವರು ಈ ದೇಶದ ಪ್ರಧಾನ ಮಂತ್ರಿ. ಮೋದಿ ರಿಮೋಟ್ ಕಂಟ್ರೋಲ… ಯಾರು ಅಂತಾ ಹೇಳಬೇಕೇ? ಆರೆಸ್ಸೆಸ್ನವರು ಎಂದು ಉತ್ತರಿಸಿದರು.
ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಕೊಟ್ಟಿ¨ªಾರೆ. ಅದಕ್ಕೆ ಇನ್ನೂ ಸ್ಪೀಕರ್ ಅನುಮೋದನೆ ನೀಡಿಲ್ಲ. ನಾವು ಜಾಧವ್ ಸೇರಿ ನಾಲ್ಕು ಜನರ ಮೇಲೆ ದೂರು ನೀಡಿದ್ದೆವು. ಅದರ ವಿಚಾರಣೆ ನಡೆಯುತ್ತಿದೆ. ಈಗಲೇ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಅಪರಾಧವಾಗುತ್ತದೆ. ರಾಜೀನಾಮೆ ಅಂಗೀಕಾರವಾಗದೆ ಬಿಜೆಪಿ ಸಮಾವೇಶದಲ್ಲಿ ಹೇಗೆ ಭಾಗವಹಿಸುತ್ತಾರೆ? ಹೀಗಾಗಿ ಅಗತ್ಯವಿದ್ದರೆ ಜಾಧವ್ ಮೇಲೆ ಮತ್ತೆ ಕೇಸ್ ಬಗ್ಗೆ ಚಿಂತಿಸಲಾಗುವುದು ಎಂದರು.
ತಿಲಕದ ವಿಶ್ಲೇಷಣೆ!
ಸಿದ್ದರಾಮಯ್ಯ ಮಾತನಾಡಿ, “ತಿಲಕ ಅಂದ್ರೆ ಸಣ್ಣದಾಗಿ ಇಡಬೇಕು. ದೊಡ್ಡ ನಾಮ ನೋಡಿದರೆ ನನಗೆ ಭಯ ಆಗುತ್ತದೆ. ನಾನು ತಿಲಕ ಇಡಲ್ಲ, ಹಾಗಾದರೆ ನಾನು ಹಿಂದೂ ಅಲ್ವಾ ? ಉದ್ದ ನಾಮ ಹಾಕುವವರು ಬಿಜೆಪಿಯವರು. ತಿಲಕ ಅಂದರೆ ಸಣ್ಣದಾಗಿ ಹಾಕಬೇಕು’ ಎಂದು ನಾಮದ ಬಗ್ಗೆ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ