ಹಣ ದೋಚುವ ನಕಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌: ಎಚ್ಚರ!

ಸಹಾಯ ಮಾಡುವ ಸೋಗು; ಬ್ಯಾಂಕ್‌ ಖಾತೆಗೆ ಕನ್ನ

Team Udayavani, Feb 23, 2022, 7:05 AM IST

ಹಣ ದೋಚುವ ನಕಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌: ಎಚ್ಚರ!

ಮಂಗಳೂರು: ಗೂಗಲ್‌ನಲ್ಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌ ನಂಬರ್‌ ಹುಡುಕಿ ಕರೆ ಮಾಡಿ ಸಹಾಯ ಪಡೆಯಲು ಮುಂದಾಗುವ ಮೊದಲು ಜಾಗರೂಕರಾಗಿರಿ. ಈಗ ಸೈಬರ್‌ ವಂಚಕರು ನಕಲಿ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌ಗಳನ್ನು ಸೃಷ್ಟಿಸಿ ಹಣ ದೋಚುತ್ತಿದ್ದಾರೆ!

ಆನ್‌ಲೈನ್‌ನಲ್ಲಿ ಖರೀದಿ, ಪಾವತಿಗೆ ಸಂಬಂಧಿಸಿ ಸಂದೇಹ, ಸಮಸ್ಯೆ ಎದುರಾದಾಗ, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಸೇರಿದಂತೆ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯಲು… ಹೀಗೆ ಹಲವಾರು ಸಂದರ್ಭಗಳಲ್ಲಿಹೆಲ್ಪ್ ಲೈನ್‌/ಕಸ್ಟಮರ್‌ ಕೇರ್‌ನ ಮೊರೆಹೊಗುತ್ತೇವೆ. ಅದನ್ನೇ ಕಾಯುತ್ತಿರುವ ಸೈಬರ್‌ ವಂಚಕರು, ಗೂಗಲ್‌ ಸರ್ಚ್‌ ಕೊಟ್ಟ ಕೂಡಲೇ ಅಸಲಿಯಂತೆಯೇ ಕಾಣುವ ನಕಲಿ ಹೆಲ್ಪ್ ಲೈನ್‌/ ಕಸ್ಟಮರ್‌ ಕೇರ್‌ ಸಂಖ್ಯೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತಾರೆ. ಅದಕ್ಕೆ ಕರೆ ಮಾಡಿ ಮಾಹಿತಿಗಳನ್ನು ನೀಡುತ್ತಾ ಹೋದರೆ ಖಾತೆಯಲ್ಲಿರುವ ಹಣ “ಹೆಲ್ಪ್ ಲೈನ್‌’ ಅಥವಾ “ಕಸ್ಟಮರ್‌ ಕೇರ್‌’ನವರಿಗೆ ವರ್ಗಾವಣೆಯಾಗುತ್ತಾ ಹೋಗುತ್ತದೆ.

1.92 ಲ.ರೂ. ದೋಚಿದ “ಕಸ್ಟಮರ್‌ ಕೇರ್‌’
2 ಕ್ರೆಡಿಟ್‌ ಕಾರ್ಡ್‌ ಹೊಂದಿದ್ದ ವ್ಯಕ್ತಿ ಯೊಬ್ಬರು ಒಂದನ್ನು ಬ್ಲಾಕ್‌ ಮಾಡುವ ಉದ್ದೇಶದಿಂದ ಗೂಗಲ್‌ನಲ್ಲಿ ಆ ಬ್ಯಾಂಕ್‌ನ ಕಸ್ಟಮರ್‌ ಕೇರ್‌ ನಂಬರನ್ನು ಹುಡುಕಿ ಕರೆ ಮಾಡಿದರು. ಕರೆ ಸ್ವೀಕರಿಸಿದಾತ “ಎನಿ ಡೆಸ್ಕ್’ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ತಿಳಿಸಿದ. ಬಳಿಕ ಕ್ರೆಡಿಟ್‌ಕಾರ್ಡ್‌ ನಂಬರ್‌, ಪಿನ್‌ ವಿವರ ಹಾಕುವಂತೆ ತಿಳಿಸಿದ. ವಿವರ ಹಾಕುವಷ್ಟರಲ್ಲೇ ಅವರ ಖಾತೆಯಿಂದ 1.92 ಲ.ರೂ. ಮಾಯವಾಗಿತ್ತು!

ಆ್ಯಪ್‌ ಡೌನ್‌ಲೋಡ್‌ ಮಾಡಿಸಿದರು
ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ವಸ್ತು ವೊಂದನ್ನು ಆರ್ಡರ್‌ ಮಾಡಿದ್ದು, ಹಲವು ದಿನ ಕಳೆದರೂ ಬಂದಿರಲಿಲ್ಲ. ಗೂಗಲ್‌ನಲ್ಲಿ ಹೆಲ್ಪ್ ಲೈನ್‌ ಹುಡುಕಿ ಕರೆ ಮಾಡಿದರು. ಹಣ ವಾಪಸ್‌ ನೀಡುತ್ತೇವೆ, “ಎನಿ ಡೆಸ್ಕ್’ ಆ್ಯಪ್‌ ಡೌನ್‌ಲೋಡ್‌ ಮಾಡಿ ಎಂದರು. ಮಾಹಿತಿ ಹಾಕುತ್ತಿದ್ದಂತೆಯೇ 48,354 ರೂ. “ಹೆಲ್ಪ್ ಲೈನ್‌’ ನವರ ಖಾತೆಗೆ ವರ್ಗಾವಣೆಗೊಂಡಿದೆ.

ಸೈಬರ್‌ ತಜ್ಞರ ಸಲಹೆಗಳು
– ಹೆಲ್ಪ್ ಲೈನ್‌ ಗೆ ಗೂಗಲ್‌ನಲ್ಲಿ ಹುಡುಕ ಬೇಡಿ. ಡೆಬಿಟ್‌ಕಾರ್ಡ್‌/ ಕ್ರೆಡಿಟ್‌ ಕಾರ್ಡ್‌ ಹಿಂಭಾಗದಲ್ಲೇ ನಂಬರ್‌ ಇದ್ದು, ಅಗತ್ಯ ಬಿದ್ದರೆ ಅದಕ್ಕೆ ಕರೆ ಮಾಡಿ
– ಹೆಲ್ಪ್ ಲೈನ್‌ ನಂಬರನ್ನು ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಂಡಿರಿ. ಕಾರ್ಡ್‌ ಕಳೆದು ಹೋದರೂ ಅಧಿಕೃತ ನಂಬರ್‌ ನಿಮ್ಮ ಮೊಬೈಲ್‌ನಲ್ಲೇ ಇರುತ್ತದೆ.
– ಬ್ಯಾಂಕ್‌ ಸಂಬಂಧಿ ಸಮಸ್ಯೆ ಉಂಟಾದರೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿಂದಲೇ ಅಧಿಕೃತವಾದ ಕಸ್ಟಮರ್‌ ಕೇರ್‌/ ಹೆಲ್ಪ್ ಲೈನ್‌ ನಂಬರ್‌ ಪಡೆಯಿರಿ.
– ಬ್ಯಾಂಕ್‌ನವರು ಯಾವುದೇ ಕಾರಣಕ್ಕೂ ಖಾತೆಯ ವಿವರ, ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ನ ಸಂಖ್ಯೆ, ಒಟಿಪಿ ಇತ್ಯಾದಿ ಕರೆ ಮಾಡಿ ಕೇಳುವುದಿಲ್ಲ.

ಸೈಬರ್‌ ವಲ್ಚರ್‌ಗಳು!
ಇದು ಸ್ವಲ್ಪ ಭಿನ್ನ ರೀತಿಯ ಸೈಬರ್‌ ವಂಚನೆಯ ವಿಧ. ಕಷ್ಟದಲ್ಲಿರುವವರ ಆತಂಕ, ಗೊಂದಲವನ್ನು ಖದೀಮರು ದುರುಪಯೋಗಪಡಿಸಿಕೊಳ್ಳುತ್ತಾರೆ. ಆನ್‌ಲೈನ್‌ ವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ತೊಂದರೆ ಎದುರಾದರೆ ಹೆಚ್ಚಿನವರು ಭಯಪಟ್ಟು ಗೂಗಲ್‌ನಲ್ಲಿ ಕೂಡಲೇ ಸಿಗುವ ಹೆಲ್ಪ್ ಲೈನ್‌, ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ಅವರು ಕೇಳಿದ ಎಲ್ಲ ವಿವರಗಳನ್ನು ನೀಡುತ್ತಾರೆ. ಇದನ್ನೇ ನಿರೀಕ್ಷಿಸುವ ಸೈಬರ್‌ ವಂಚಕರು ಹಣ ದೋಚುತ್ತಾರೆ. ಇವರನ್ನು ನಾವು “ಸೈಬರ್‌ ವಲ್ಚರ್‌’ಗಳೆಂದು ಕರೆಯುತ್ತೇವೆ. ಗೂಗಲ್‌ನಲ್ಲಿ ಸರ್ಚ್‌ ಆರಂಭಿಸಿದ ಕೂಡಲೇ ನಕಲಿ ಹೆಲ್ಪ್ ಲೈನ್‌ ಗಳು ಮೇಲ್ಗಡೆ ಕಾಣಿಸುವಂತೆಯೂ ಮಾಡುವ ವಂಚಕರಿದ್ದಾರೆ.
– ಡಾ| ಅನಂತಪ್ರಭು ಜಿ.,
ಸೈಬರ್‌ ಭದ್ರತಾ ತಜ್ಞ, ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.