ಮೂಡುಬಿದಿರೆ: ಬಿಜೆಪಿ ಕಾರ್ಯಕರ್ತರ ಸಂಭ್ರಮ


Team Udayavani, Jun 2, 2019, 11:53 AM IST

3105MOOD2

ಮೂಡುಬಿದಿರೆ: ಪುರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದು ವಿಜೇತ ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಒಂದೊಂದು ಪಕ್ಷಗಳ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷ ಕೇಳಲಾರಂಭಿಸಿತು.

ಒಮ್ಮೆ ಕಾಂಗ್ರೆಸ್‌, ಇನ್ನೊಮ್ಮೆ ಬಿಜೆಪಿ ಹೀಗೆ ಎರಡೂ ಪಕ್ಷಗಳ ಬಲಾಬಲ ವ್ಯತ್ಯಾಸವಾಗುತ್ತ ಬಂದು ತೂಗುತಕ್ಕಡಿಯಲ್ಲಿ ಕೊನೆಗೂ 12 ಸ್ಥಾನ ಬಿಜೆಪಿಗೆ, 11 ಸ್ಥಾನ ಕಾಂಗ್ರೆಸ್‌ಗೆ ಎಂದು ಅಧಿಕೃತವಾಗಿ ಘೋಷಣೆಯಾದಾಗ ಬಿಜೆಪಿಗರ ಸಂಭ್ರಮ ಮುಗಿಲು ಮುಟ್ಟಿತು.

ಕಳೆದ 44 ವರ್ಷಗಳ ಪುರಸಭಾ ಇತಿಹಾಸದಲ್ಲಿ ಒಮ್ಮೆ ಜನತಾ ಪರಿವಾರ, ಇನ್ನೊಮ್ಮೆ ಜೆಡಿಎಸ್‌ ಮತ್ತು ಬಿಜೆಪಿ ಜತೆಯಾಗಿ ಆಡಳಿತ ನಡೆಸಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್‌ ಆಡಳಿತಾವಧಿಯೇ ಇದ್ದು ಈಗ ಮೊದಲ ಬಾರಿಗೆ ಬಿಜೆಪಿ ಬಹುಮತ ಸಾಧಿಸಿ ಬೀಗಿದೆ.

ಶ್ರೀ ಮಹಾವೀರ ಕಾಲೇಜಿನಿಂದ ಶಾಸಕ ಉಮಾನಾಥ ಕೋಟ್ಯಾನ್‌, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮೇಘನಾಥ್‌ ಶೆಟ್ಟಿ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾಕ ವಿಭಾಗ ಅಧ್ಯಕ್ಷ ಜೋಯ್ಲಸ್‌ ಡಿ’ಸೋಜಾ, ನಿಕಟಪೂರ್ವ ಸದಸ್ಯ, ಪಕ್ಷದ ಹಿರಿಯ ಮುಖಂಡ ಎಂ. ಬಾಹುಬಲಿ ಪ್ರಸಾದ್‌, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ ಸಹಿತ ಪಕ್ಷ ಪ್ರಮುಖರು ಗೆದ್ದವರಿಗೆ ಹಾರ ತೊಡಿಸಿ ಅಭಿನಂದಿಸಿದರು.

ಪಕ್ಷದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸಿದ ನಿ.ಪೂ. ಅಧ್ಯಕ್ಷ ನಾಗರಾಜ ಪೂಜಾರಿ ಅವರನ್ನು ಕಾರ್ಯಕರ್ತರು ಎತ್ತಿ, ಜೈಕಾರ ಹಾಕಿ ಸಂಭ್ರಮಿಸಿದರು. ಅಲ್ಲಿಂದ ಹೊರಟ ವಾಹನಗಳ ಮೆರವಣಿಗೆ ಮೂಡುಬಿದಿರೆಯ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದು ಜನ ಮನ ಸೆಳೆಯಿತು.

ಜೆಡಿಎಸ್‌ ಕಳಾಹೀನ
ಈ ಹಿಂದೆ 3 ಮಂದಿ ಪುರಸಭಾ ಸದಸ್ಯರನ್ನು ಹೊಂದಿದ್ದ ಜೆಡಿಎಸ್‌ ಈ ಬಾರಿ 8 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ಅನುಭವಿ ಸದಸ್ಯೆ ಪ್ರೇಮಾ ಸಾಲ್ಯಾನ್‌ ಸೇರಿದಂತೆ ಒಂದೂ ಸ್ಥಾನ ಪಡೆಯಲಾಗಲಿಲ್ಲ.

ನೋಟಾ ಮತಗಳು
25,062 ಮಂದಿ ಮತದಾರರಿದ್ದು, ಇವರಲ್ಲಿ 12,038 ಮಂದಿ ಪುರುಷರು, 13,024 ಮಂದಿ ಮಹಿಳೆಯರು. ಚುನಾವಣೆಯಲ್ಲಿ 16,967 ಮಂದಿ ಮತ ಚಲಾಯಿಸಿ (ಶೇ. 67.70)ದ್ದು ಒಟ್ಟು 68 ನೋಟಾ ಮತ ಆಗಿವೆ.

ಸುಭಾಸ್‌ನಗರ (ವಾರ್ಡ್‌ 2) ಶೇ. 77.15 ಅತೀ ಹೆಚ್ಚು ಮತದಾನ (963ರಲ್ಲಿ 743) ದಾಖಲಿಸಿದೆ. ವಿಜಯನಗರ (ವಾರ್ಡ್‌ 8)ದಲ್ಲಿ ಶೇ 58.20 ಕನಿಷ್ಠ ಮತದಾನ (1063ರಲ್ಲಿ 603)ವಾಗಿದೆ.

ಮೂಡುಬಿದಿರೆ ಪುರಸಭೆಯ ವಾರ್ಡ್‌ 11 (ಚಾಮುಂಡಿ ಬೆಟ್ಟ) ರಲ್ಲಿ ಬಿಜೆಪಿಯ ನವೀನ್‌ ಶೆಟ್ಟಿ ಅವರು ಜಯಗಳಿಸಿದ್ದು, ಕೇವಲ 1 ಮತದ ಅಂತರದಿಂದ.

ವಾರ್ಡ್‌ 17 (ಲಾಡಿ)ಯಲ್ಲಿ ಬಿಎಸ್‌ಪಿಯ ಎಸ್‌. ಸತೀಶ ಸಾಲ್ಯಾನ್‌ ಅವರಿಗೆ ದಕ್ಕಿದ್ದು 1 ಮತ; ವಾರ್ಡ್‌ 2 (ಸುಭಾಸ್‌ನಗರ)ದಲ್ಲಿ ಅವರಿಗೆ ಸಿಕ್ಕಿದ್ದು 7 ಮತ. ಕಳೆದ ದ.ಕ. ಲೋಕಸಭಾ ಚುನಾವಣೆಯಲ್ಲೂ ಬಿಎಸ್‌ಪಿ ಅಭ್ಯರ್ಥಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದರು.

1 ಮತದಿಂದ ಗೆದ್ದ ಬಿಜೆಪಿಯ ನವೀನ್‌ ಶೆಟ್ಟಿ

ಮೂಡುಬಿದಿರೆ ಪುರಸಭೆಯ ವಾರ್ಡ್‌ 11 (ಚಾಮುಂಡಿ ಬೆಟ್ಟ) ರಲ್ಲಿ ಬಿಜೆಪಿಯ ನವೀನ್‌ ಶೆಟ್ಟಿ ಅವರು ಜಯಗಳಿಸಿದ್ದು, ಕೇವಲ 1 ಮತದ ಅಂತರದಿಂದ. ವಾರ್ಡ್‌ 17 (ಲಾಡಿ)ಯಲ್ಲಿ ಬಿಎಸ್‌ಪಿಯ ಎಸ್‌. ಸತೀಶ ಸಾಲ್ಯಾನ್‌ ಅವರಿಗೆ ದಕ್ಕಿದ್ದು 1 ಮತ; ವಾರ್ಡ್‌ 2 (ಸುಭಾಸ್‌ನಗರ)ದಲ್ಲಿ ಅವರಿಗೆ ಸಿಕ್ಕಿದ್ದು 7 ಮತ. ಕಳೆದ ದ.ಕ. ಲೋಕಸಭಾ ಚುನಾವಣೆಯಲ್ಲೂ ಬಿಎಸ್‌ಪಿ ಅಭ್ಯರ್ಥಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.