ಮೂಡಬಿದಿರೆ ಕಂಬಳ: ಫಲಿತಾಂಶ


Team Udayavani, Nov 13, 2017, 12:15 PM IST

Kambala.jpg

ಮೂಡಬಿದಿರೆ: ಶಾಸಕ ಕೆ. ಅಭಯಚಂದ್ರ ನೇತೃತ್ವದಲ್ಲಿ ಮೂಡಬಿದಿರೆ ಕಡಲಕೆರೆ ನಿಸರ್ಗಧಾಮದ ಬಳಿ ಶನಿವಾರ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ ವಿವರ ಇಂತಿದೆ:

ವಿಜೇತ ಕೋಣಗಳ ಯಜಮಾನರು – (ಆವರಣದಲ್ಲಿ ಓಡಿಸಿದವರು) ಕನೆಹಲಗೆಯಲ್ಲಿ (2 ಜೊತೆ) ನಿಶಾನೆಯತ್ತ ಗರಿಷ್ಠ ಎತ್ತರಕ್ಕೆ ನೀರು ಹಾಯಿಸಿದುದನ್ನು ಗಮನಿಸಿ- ಪ್ರ.: ಬಾರಕೂರು ಶಾಂತಾರಾಮ ಶೆಟ್ಟಿ (ಮಂದಾರ್ತಿ ಶಿರೂರು ಗೋಪಾಲ ನಾೖಕ), ದ್ವಿ.: ವಾಮಂಜೂರು ತಿರುವೈಲು ನವೀನ್‌ಚಂದ್ರ ಆಳ್ವ (ನಾರಾವಿ ಯುವರಾಜ ಜೈನ್‌)

ಹಗ್ಗ ಹಿರಿಯ (15 ಜೊತೆೆ)-ಪ್ರ.: ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (ಪಣಪೀಲು ಪ್ರವೀಣ್‌ ಕೋಟ್ಯಾನ್‌), ದ್ವಿ.: ಕಾರ್ಕಳ ಜೀವನ್‌ದಾಸ್‌ ಅಡ್ಯಂತಾಯ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ)
ಹಗ್ಗ ಕಿರಿಯ (20 ಜೊತೆ)- ಪ್ರ.: ನಿಟ್ಟೆ ಪರಪ್ಪಾಡಿ ಸುರೇಶ್‌ ಕೋಟ್ಯಾನ್‌ (ನಕ್ರೆ ಮಂಜುನಾಥ ಭಂಡಾರಿ), ದ್ವಿ.: ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (ಪಣಪೀಲು ಪ್ರವೀಣ್‌ ಕೋಟ್ಯಾನ್‌).
ನೇಗಿಲು ಹಿರಿಯ (33 ಜೊತೆ)- ಪ್ರ.: ಬಂಟ್ವಾಳ ಮಹಾ ಕಾಳಿಬೆಟ್ಟು ಸೀತಾರಾಮ ಶೆಟ್ಟಿ “ಎ’ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ), ದ್ವಿ.: ಬೋಳದಗುತ್ತು ಸತೀಶ್‌ ಶೆಟ್ಟಿ “ಎ’ (ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ. ಶೆಟ್ಟಿ.)

ನೇಗಿಲು ಕಿರಿಯ (60 ಜೊತೆ)- ಪ್ರ.: ಅಳಿಯೂರು ಮಿತ್ತೋಟ್ಟು ಸೀತಾರಾಮ ಆನಂದ ಶೆಟ್ಟಿ “ಎ’ (ಮರೋಡಿ ಶ್ರೀಧರ್‌), ದ್ವಿ.: ಮಿಜಾರು ಪ್ರಸಾದ್‌ನಿಲಯ ಶಕ್ತಿಪ್ರಸಾದ್‌ ಶೆಟ್ಟಿ “ಬಿ’ (ಅಳದಂಗಡಿ ರವಿ ಕುಮಾರ್‌).
ಅಡ್ಡ ಹಲಗೆ (07 ಜೊತೆ)-ಪ್ರ.: ಹಂಕರಜಾಲು ರಾಮಚಂದ್ರ ಬಿರ್ಮಣ್ಣ ಶೆಟ್ಟಿ “ಬಿ’ (ನಾರಾವಿ ಯುವರಾಜ ಜೈನ್‌), ದ್ವಿ.: ಗುರುಪುರ ಕೆದುಬರಿ ಯಶೋಧರ ಗುರುವಪ್ಪ ಪೂಜಾರಿ (ಸಾವ್ಯ ಗಂಗಯ್ಯ ಪೂಜಾರಿ).

137 ಜೊತೆ ಕೋಣ
ಒಟ್ಟು 137 ಜೊತೆ ಕೋಣಗಳು ಕಣದಲ್ಲಿದ್ದವು. ಕನೆಹಲಗೆಯಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ, ಹಗ್ಗ, ನೇಗಿಲು ಹಿರಿಯ ವಿಭಾಗದ ಕೋಣಗಳಿಗೆ ಕ್ರಮವಾಗಿ ಪ್ರಥಮ 2 ಪವನ್‌, ದ್ವಿತೀಯ 1 ಪವನ್‌ ಚಿನ್ನ, ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್‌, ದ್ವಿತೀಯ ಅರ್ಧ ಪವನ್‌ ಬಹುಮಾನ ನೀಡಿ ಗೌರವಿಸಲಾಯಿತು. (ವಿಶೇಷವಾಗಿ, ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್‌ ಚಿನ್ನ ಹಾಗೂ ಸಹಾಯಕ ತಂಡದವರಿಗೆ 1,000 ರೂ. ನಗದು ಬಹುಮಾನ ನೀಡಿ ಗೌರವಿಸುವ ಕ್ರಮ ಕೋಟಿ ಚೆನ್ನಯ ಕಂಬಳದಲ್ಲಿ ಮಾತ್ರ ರೂಢಿಯಲ್ಲಿದೆ).

ಕಂಬಳ ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಗುಣಪಾಲ ಕಡಂಬ ಅವರು ಪ್ರಧಾನ ತೀರ್ಪುಗಾರರಾಗಿದ್ದು ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ರವೀಂದ್ರ ಕುಮಾರ್‌, ಕುಕ್ಕುಂದೂರು, ರಾಜೀವ್‌ ಶೆಟ್ಟಿ ಎಡೂ¤ರು, ನವೀನ್‌ಚಂದ್ರ ಅಂಬೂರಿ, ಸುಧಾಕರ ಶೆಟ್ಟಿ, ವಿಜಯ ಕುಮಾರ್‌ ಕಂಗಿನ ಮನೆ, ವಿದ್ಯಾಧರ ಜೈನ್‌ ರೆಂಜಾಳ, ವಿನೋದ್‌ ಶೆಟ್ಟಿ ಕಾಪು ಮೊದಲಾದವರು ಸಹಕರಿಸಿದ್ದರು.

ಸಚಿವ ಬಿ. ರಮಾನಾಥ ರೈ, ಶಾಸಕ ವಿನಯ ಕುಮಾರ ಸೊರಕೆ, ರಾಜ್ಯ ಕಾಂಗ್ರೆಸ್‌ ಮಹಿಳಾ ವಿಭಾಗದ ಅಧ್ಯಕ್ಷೆ ಲಕ್ಷ್ಮೀ ನಿಂಬಾಳ್ಕರ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ , ಗೌರವಾಧ್ಯಕ್ಷ, ಮೂಡಬಿದಿರೆ ಕಂಬಳ ಸಮಿತಿ ಕೋಶಾಧಿಕಾರಿ ಭಾಸ್ಕರ ಎಸ್‌. ಕೋಟ್ಯಾನ್‌, ಪ್ರ. ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕಾರ್ಯದರ್ಶಿ ರತ್ನಾಕರ ಸಿ. ಮೊಲಿ, “ಮುಡಾ’ ಅಧ್ಯಕ್ಷ ಸುರೇಶ್‌ ಪ್ರಭು, ಪುರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಕೊರಗಪ್ಪ ಮೊದಲಾದವರು ಉಪಸ್ಥಿತರಿದ್ದರು.

ದಾಖಲೆ ನಿರ್ಮಿಸಿದ ಕಂಬಳ
ಶನಿವಾರ ಬೆಳಗ್ಗೆ 8.30ಕ್ಕೆ ಆರಂಭಿಕ ವಿಧಿಗಳ ಬಳಿಕ 10 ಗಂಟೆಗೆ ಕಂಬಳದ ಸ್ಪರ್ಧೆಗಳು ಪ್ರಾರಂಭ
ವಾಗಿ 23 ಗಂಟೆ 49 ನಿಮಿಷಗಳಲ್ಲಿ ಅಂದರೆ ರವಿವಾರ ಮುಂಜಾನೆ 8.49ಕ್ಕೆ ಬಹುಮಾನ ವಿತರಣೆಯೂ ಒಳಗೊಂಡಂತೆ ಮುಕ್ತಾಯವಾ
ಯಿತು  

10,000ಕ್ಕೂ ಅಧಿಕ ಅಭಿಮಾನಿಗಳಿಗೆ ಗಂಜಿಯೊಂದಿಗೆ ಪಾಯಸದೂಟ ಇತ್ತು. ಸುಮಾರು 75,000 ಮಂದಿ ಕಂಬಳಕ್ಕೆ ಸಾಕ್ಷಿಯಾಗಿದ್ದಾರೆ. 

ಲೇಸರ್‌ ಬೀಮ್‌ ನೀಡಿದ ಕರಾರುವಕ್ಕಾದ ಫಲಿತಾಂಶದಿಂದಾಗಿ ಯಾವುದೇ ಗೊಂದಲ
ಗಳಿಗೆ ಅವಕಾಶವೇ ಇರಲಿಲ್ಲ. 

ಸಂಪೂರ್ಣ ಕಂಬಳ ಬೆತ್ತದ ಪ್ರಯೋಗವೇ ಇಲ್ಲದೆಯೇ ಅಹಿಂಸಾತ್ಮಕ ಕಂಬಳ ನಡೆಸಲು ಸಾಧ್ಯವಿದೆ ಎಂದು ಈ ಕಂಬಳ ಸಾರಿ ಹೇಳಿದೆ.
 

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.