ಮೂಡುಬಿದಿರೆ: ಸಿಡಿಲಾಘಾತದಿಂದ ಇಬ್ಬರು ಸ್ಥಳದಲ್ಲೇ ಸಾವು; ಮೂವರು ಆಸ್ಪತ್ರೆಗೆ
Team Udayavani, Nov 1, 2021, 7:14 PM IST
ಮೂಡುಬಿದಿರೆ: ಸೋಮವಾರ ಸಂಜೆ ಪುತ್ತಿಗೆ ಪಂ. ವ್ಯಾಪ್ತಿಯ ಕಂಚಿಬೈಲು ಅರ್ಬಿ ಪ್ರದೇಶದಲ್ಲಿ ಸಿಡಿಲಾಘಾತದಿಂದ ಸ್ಥಳೀಯರೇ ಆದ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಜತೆಗಿದ್ದ ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ 25-26ರ ಆಸುಪಾಸಿನ ವಯೋಮಾನದವರು.ಯಶವಂತ, ಮಣಿಪ್ರಸಾದ ಘಟನೆಯಲ್ಲಿ ಮೃತಪಟ್ಟವರು.
ಗಣೇಶ, ಸಂದೀಪ ಮತ್ತು ಪ್ರವೀಣ ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ನೋ ಕ್ವಾರಂಟೈನ್: ಕೋವಾಕ್ಸಿನ್ ಲಸಿಕೆಯನ್ನು ಅಂಗೀಕರಿಸಿದ ಆಸ್ಟ್ರೇಲಿಯಾ
ಸೋಮವಾರ ಅಪರಾಹ್ನ ಗಂ.3.30ರಿಂದ ಸುಮಾರು ಒಂದೂವರೆ ತಾಸು ಮೂಡುಬಿದಿರೆ ಪರಿಸರದಲ್ಲಿ ಗಾಳಿ, ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ.