ಮಳೆಹಾನಿ ಪ್ರದೇಶಗಳಿಗೆ ಸಂಸದ ನಳಿನ್, ಶಾಸಕ ವೇದವ್ಯಾಸ್ ಭೇಟಿ
Team Udayavani, May 31, 2018, 12:13 PM IST
ಮಹಾನಗರ : ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ. ವೇದವ್ಯಾಸ್ ಕಾಮತ್ ಮಳೆಯಿಂದ ಹಾನಿಗೀಡಾದ
ಬಿಜೈ ಆನೆಗುಂಡಿ ಪ್ರದೇಶಗಳಿಗೆ ಭೇಟಿ ನೀಡಿದರು.
ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಮಂಗಳವಾರ ಸುರಿದ ಮಳೆಯಿಂದ ಸುಮಾರು 32 ಮನೆಗಳಿಗೆ ಹಾನಿಯಾಗಿವೆ. ಕದ್ರಿ ಪ್ರದೇಶದಲ್ಲಿ 10 ಸ್ಥಳಗಳಲ್ಲಿ ಮನೆಗಳ ಹಾನಿ , ಶಕ್ತಿನಗರ , ಕುಂಟಲ್ಪಾಡಿ ಪ್ರದೇಶದಲ್ಲಿ 5 ಮನೆಗಳು ಹಾನಿಯಾಗಿವೆ, ಸರಿಪಳ್ಳ ಕೃತಕ ನೆರೆಯಿಂದ ಮನೆಗಳಿಗೆ ಹಾನಿಯಾಗಿದೆ ಎಂದರು. ಬುಧವಾರ ಶಾಸಕರು 38 ವಾರ್ಡ್ಗಳಿಗೆ ಭೇಟಿ ನೀಡಿ ಮಳೆ ಹಾನಿ ಸಂಬಂಧಿಸಿದ ಬಗ್ಗೆ ವರದಿ ಪಡೆದುಕೊಂಡರು.