ಯತಿಗಳ ಬದಲು ಗೃಹಸ್ಥರಿಂದ ಮುದ್ರಾಂಕನ
Team Udayavani, Jul 24, 2018, 12:39 PM IST
ಕಡಬ: ಪ್ರತಿ ವರ್ಷ ಪ್ರಥಮೈಕಾದಶೀ ದಿನದಂದು ನಡೆಯುವ ತಪ್ತ ಮುದ್ರಾಧಾರಣೆ ಸೋಮವಾರ ರಾಮಕುಂಜದ ಈರಕೀ ಮಠದಲ್ಲಿ ಜರಗಿತು. ವೇ|ಮೂ| ವೆಂಕಟರಮಣ ಉಪಾಧ್ಯಾಯರು ತಪ್ತ ಮುದ್ರಾಧಾರಣೆ ನೆರವೇರಿಸಿದರು. ನೂರಾರು ಮಂದಿ ಭಕ್ತರು ಮಠಕ್ಕೆ ಆಗಮಿಸಿ ಮುದ್ರಾಂಕನ ಮಾಡಿಸಿಕೊಂಡರು.
ಈರಕೀ ಮಠದ ವೈಶಿಷ್ಟ್ಯ
ತಪ್ತ ಮುದ್ರಾಧಾರಣೆ ಎನ್ನುವುದು ಎಲ್ಲೆಡೆ ನಡೆಯುತ್ತದೆ. ಆದರೆ, ಈರಕೀ ಮಠದ ಮುದ್ರಾಧಾರಣೆಗೆ ವೈಶಿಷ್ಟ್ಯವಿದೆ. ಬೇರೆಡೆಗಳಲ್ಲಿ ಯತಿಗಳು ಮಾತ್ರ ಮುದ್ರಾಧಾರಣೆ ನಡೆಸುವುದು ಸಂಪ್ರದಾಯ. ಆದರೆ ಈರಕೀ ಮಠದಲ್ಲಿ ಯತಿಗಳ ಬದಲು ಗೃಹಸ್ಥಾಶ್ರಮಿಗಳು ಮುದ್ರಾಂಕನ ಮಾಡುತ್ತಾರೆ.
ಗ್ರಾಮೀಣ ಪ್ರದೇಶವೆನ್ನುವ ಕಾರಣಕ್ಕಾಗಿ ಭಕ್ತರ ಅನುಕೂಲಕ್ಕೆ ಸುಮಾರು 800 ವರ್ಷಗಳ ಹಿಂದೆ ಶ್ರೀ ಮನ್ಮಧ್ವಾಚಾರ್ಯರು ತನ್ನ ಭಕ್ತನಿಗೆ ಮುದ್ರಾಂಕನ ಮಾಡುವ ವಿಶೇಷ ಅಧಿಕಾರ ನೀಡಿದ್ದರು. ನೂರಿತ್ತಾಯ ವಂಶಸ್ಥ ಬ್ರಹ್ಮಶ್ರೀ ವೆಂಕಟರಮಣ ಉಪಾಧ್ಯಾಯರು ಈ ಕಾರ್ಯವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಂಡು ಬರುತ್ತಿದ್ದಾರೆ.
ರೋಗ ನಿರೋಧಕ ಶಕ್ತಿ ವೃದ್ಧಿ
ಶಂಖ, ಚಕ್ರ ಇತ್ಯಾದಿ ರಚನೆಗಳುಳ್ಳ ಮುದ್ರೆಯನ್ನು ಹೋಮ ಕುಂಡದಲ್ಲಿ ಹಾಕಿ ಬಿಸಿ ಮಾಡಿ ತೋಳು, ಹೊಟ್ಟೆ ಮೊದಲಾದ ಭಾಗಗಳಿಗೆ ಮುದ್ರೆ ಹಾಕಿಸಿಕೊಳ್ಳುವುದೇ ತಪ್ತ ಮುದ್ರಾಧಾರಣೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎನ್ನುವುದು ನಂಬಿಕೆ. ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ರೋಗ ರುಜಿನಗಳು ಬರಬಾರದೆಂದು ಹೆಚ್ಚಿನ ಜನರು ಈ ರೀತಿ ಮುದ್ರೆ (ತುಳುವಿನಲ್ಲಿ ಸುಡಿ ಇಡುವುದು) ಹಾಕಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
ಅಷ್ಟಮಠಗಳಿಗೂ ಸಂಬಂಧ
ಶ್ರೀಮನ್ಮಧ್ವಾಚಾರ್ಯರು ಶ್ರೀಕೃಷ್ಣಾಮೃತ ಮಹಾರ್ಣವ ಎನ್ನುವ ದಿವ್ಯ ಗ್ರಂಥದ ಮಂಗಲ ಶ್ಲೋಕವನ್ನು ಇದೇ ಈರಕೀ ಮಠದಲ್ಲಿ ರಚಿಸಿದ್ದರು ಎನ್ನುವ ಉಲ್ಲೇಖವಿದೆ. ಉಡುಪಿಯ ಅಷ್ಟಮಠಗಳ ಯತಿಗಳು ಪರ್ಯಾಯಕ್ಕೆ ಮೊದಲು ಈರಕೀ ಮಠದಲ್ಲಿ ಶ್ರೀ ಕೇಶವ ದೇವರಿಗೆ ಅರ್ಚನೆ ಸಲ್ಲಿಸಲು ಆಗಮಿಸುವುದು ಸಂಪ್ರದಾಯ.
— ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ