ರಸ್ತೆ ಸಮಸ್ಯೆ ಶಾಸಕರ ಕರೆಗೆ ಕೂಡಲೇ ಸ್ಪಂದಿಸಿದ ಪುರಸಭೆ
Team Udayavani, Jul 19, 2017, 2:20 AM IST
ಮೂಡಬಿದಿರೆ: ಸ್ವರಾಜ್ಯ ಮೈದಾನವನ್ನು ಆವರಿಸಿಕೊಂಡ ರಸ್ತೆ ಹೊಂಡ ಗುಂಡಿಗಳಿಂದ ತುಂಬಿರುವುದನ್ನು ಶಾಸಕರ ಸಮ್ಮುಖವೇ ಪುರಸಭಾ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ತಿಂಗಳುಗಳೇ ಸರಿದರೂ ಪ್ರಯೋಜನವಾಗಿರಲಿಲ್ಲ. ಆದರೆ, ಈಗ ಶಾಸಕರ ಸೂಚನೆ ಮೇರೆಗೆ ಕೇವಲ ಒಂದು ಗಂಟೆಯ ಒಳಗೆ ದಿಢೀರ್ ಆಗಿ ಈ ರಸ್ತೆಯ ಹೊಂಡ ಗುಂಡಿಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ.
ಪದೇ ಪದೇ ಪುರಸಭೆಯವರಲ್ಲಿ ಪತ್ರಕರ್ತರು ಈ ರಸ್ತೆಯ ಬಗ್ಗೆ ಪ್ರಶ್ನಿಸಿ ಸುಸ್ತಾಗಿದ್ದರು. ಶಾಸಕರು ಒಂದು ಕೋಟಿ ರೂ. ಮಂಜೂರು ಮಾಡಿದ್ದರೂ ಮಳೆಗಾಲವಾದ ಕಾರಣ ಕೆಲಸ ಆರಂಭಿಸಿಲ್ಲ ಎಂಬ ಮಾತು ತೇಲಿ ಬಂದಿದ್ದವು.
ಮಂಗಳವಾರ ಶಾಸಕ ಅಭಯಚಂದ್ರ ಅವರಲ್ಲಿ “ಉದಯವಾಣಿ’ ಪ್ರತಿನಿಧಿ ಈ ಬಗ್ಗೆ ಗಮನ ಸೆಳೆದು, ಕೋಟಿ ರೂ. ಕಾಮಗಾರಿ ನಡೆಯುವ ಮುನ್ನ ಜನರು ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ಹೊಂಡ ಮುಚ್ಚಿಸಲು ವಿನಂತಿಸಿದರು.
ತತ್ಕ್ಷಣ ಶಾಸಕರು ಪುರಸಭಾ ಎಂಜಿನಿಯರ್ ದಿನೇಶ್ ಅವರಿಗೆ ಕರೆ ಮಾಡಿದರು. ಗಂಟೆ ಕಳೆದು ನೋಡುವಾಗ ಹೊಂಡ ಗುಂಡಿಗಳನ್ನೆಲ್ಲ ತಕ್ಕಮಟ್ಟಿಗೆ ಮುಚ್ಚಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್