ರಷ್ಯಾ ಪ್ರವಾಸ ಮೊಟಕುಗೊಳಿಸಿ ಊರಿನತ್ತ ಧಾವಿಸಿದ ನಳಿನ್
Team Udayavani, Jul 12, 2017, 4:35 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರ ಬಂಧನ ಯತ್ನ ಹಾಗೂ ಅಶಾಂತಿಯ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ರಷ್ಯಾ ಪ್ರವಾಸ ಮೊಟಕುಗೊಳಿಸಿ ಜು. 12ರಂದೇ ಮಂಗಳೂರಿಗೆ ಆಗಮಿಸಲಿದ್ದಾರೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ ಸಂಸದೀಯ ನಿಯೋಗದ ಜತೆ ಸಂಸದರು ರಷ್ಯಾಕ್ಕೆ ತೆರಳಿದ್ದರು. 3 ದಿನಗಳ ಕಾಲ ರಷ್ಯಾ ಫೆಡರೇಶನ್ನ ವಿವಿಧ ಸಭೆಗಳಲ್ಲಿ ಭಾಗವಹಿಸಿ, ಜು. 14ರಂದು ಭಾರತಕ್ಕೆ ಮರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಸ್ಪೀಕರ್ ಅವರ ಅನುಮತಿ ಪಡೆದು ನಳಿನ್ ಕುಮಾರ್ ಕಟೀಲು ಮುಂಚಿತವಾಗಿಯೇ ಸ್ವದೇಶಕ್ಕೆ ಮರಳಲಿದ್ದಾರೆ.
ಸುಮಿತ್ರಾ ಮಹಾಜನ್ ನೇತೃತ್ವದ ಸಂಸದೀಯ ನಿಯೋಗ ರಷ್ಯಾಕ್ಕೆ ಭೇಟಿ ನೀಡಿದ್ದು, ರಷ್ಯಾ ಫೆಡರೇಶನ್ನ ಸ್ಟೇಟ್ ಡ್ನೂಮಾದ ಅಧ್ಯಕ್ಷ ವಿ.ವೊಲೊಡಿನ್ ಜತೆ 4ನೇ ಅಂತರ್ ಸಂಸದೀಯ ಆಯೋಗದ ಸಭೆ ನಡೆಸಿತು. ನಳಿನ್ಕುಮಾರ್ ಕಟೀಲು, ಸಂಸದರಾದ ಹೇಮಾಮಾಲಿನಿ, ಡಾ| ವೀರೇಂದ್ರ ಕುಮಾರ್, ಮಹಮ್ಮದ್ ಸಲೀಂ ಹಾಗೂ ಅಧಿಕಾರಿಗಳು ಸಂಸದೀಯ ನಿಯೋಗದ ಸದಸ್ಯರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್
Supreme Court ಆದೇಶದಿಂದ ಮೋದಿ ಸರಕಾರದ ಮುಖಭಂಗ: ಸುರ್ಜೇವಾಲ