ನಂದಗೋಕುಲ ಲೋಕಾರ್ಪಣೆ
ನಿರ್ಮಾಣ್ ಹೋಮ್ಸ್, ಕೋಸ್ಟಲ್ ಕರ್ನಾಟಕ ಡೆವಲಪರ್
Team Udayavani, May 25, 2019, 6:33 AM IST
ಮಂಗಳೂರು: ನಿರ್ಮಾಣ್ ಹೋಮ್ಸ್ ಹಾಗೂ ಕೋಸ್ಟಲ್ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್ನಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67 ಮನೆಗಳಿರುವ ನಂದಗೋಕುಲ ವಸತಿ ಸಮುಚ್ಚಯ ಶುಕ್ರವಾರ ಲೋಕಾರ್ಪಣೆಗೊಂಡಿತು.
ಈ ಸಂದರ್ಭ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರು ಮಾತನಾಡಿ, ಒಬ್ಬ ವ್ಯಕ್ತಿಗೆ ಆಹಾರ, ಬಟ್ಟೆ, ವಸತಿ ಬಹಳ ಮುಖ್ಯವಾದುದು. ಅದಕ್ಕಾಗಿಯೇ ಜೀವನ ಪೂರ್ತಿ ದುಡಿಯುತ್ತಾರೆ. ಕಷ್ಟ ಪಟ್ಟು ಮಾಡಿದ ಸ್ವಂತ ಮನೆಯಲ್ಲಿ ಇರುವ ಖುಷಿ ದುಬಾರಿ ಬೆಲೆ ತೆತ್ತು ಬದುಕುವ ಬಾಡಿಗೆ ಮನೆಯಲ್ಲೂ ಸಿಗಲಾರದು. ಎಲ್ಲರ ಕನಸನ್ನು ನನಸು ಮಾಡುವ ಹೊಣೆ ಹೊತ್ತಿರುವ ನಿರ್ಮಾಣ್ ಹೋಮ್ಸ್ ಉತ್ತಮ ವಸತಿ ಸಮುಚ್ಚಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದೀಗ ನಂದಗೋಕುಲ ವಸತಿ ಸಮುಚ್ಚಯವನ್ನು ಕೈಗೆಟಕುವ ದರದಲ್ಲಿ ನೀಡಿದೆ ಎಂದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ಉತ್ತಮ ಸೌಲಭ್ಯದೊಂದಿಗೆ ಕೈಗೆಟಕುವ ದರದಲ್ಲಿ ಶಿಸ್ತುಬದ್ಧವಾಗಿ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಿದ ನಿರ್ಮಾಣ ಹೋಮ್ಸ್ ಇದೀಗ ನಂದಗೋಕುಲ ವಸತಿ ಸಮುಚ್ಚಯವನ್ನು ಗ್ರಾಹಕರ ಮುಂದಿಟ್ಟಿದೆ. ಇನ್ನೂ ಅನೇಕ ಉತ್ತಮ ಯೋಜನೆಗಳನ್ನು ಗ್ರಾಹಕರಿಗೆ ನೀಡಲಿ ಎಂದು ಶುಭ ಹಾರೈಸಿದರು.
ಎಂಜಿನಿಯರ್ ಸುರೇಶ್ ಪೈ, ಮಾಜಿ ಕಾರ್ಪೊರೇಟರ್ ಲ್ಯಾನ್ಸಿ ಲ್ಯಾಟ್ ಪಿಂಟೋ, ಮಹೇಶ್ ವರ್ಮಾ, ಬಿ.ಆರ್. ಇನಾಬಿಲ್ಡರ್ ಪಾಲುದಾರ
ರಾದ ಭಾಸ್ಕರ್ ಗಡಿಯಾರ್, ನಿರ್ಮಾಣ್ ಹೋಮ್ಸ್ ಆಡಳಿತ ನಿರ್ದೇಶಕ ಗುರುದತ್ ಶೆಣೈ ಉಪಸ್ಥಿತರಿದ್ದರು. ಕೃಷ್ಣ ಮಯ್ಯ ಸ್ವಾಗತಿಸಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
Pilikula: “ಫ್ಯಾನ್-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!
Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ
Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ
Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
MUST WATCH
ಹೊಸ ಸೇರ್ಪಡೆ
ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್ ಮುಂದಿದೆ ಅಗ್ನಿ ಪರೀಕ್ಷೆ
ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ