ನೆಲ್ಯಾಡಿ: ಸಿಡಿಲು ಬಡಿದು ಸಾವು
Team Udayavani, May 29, 2018, 12:42 PM IST
ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸಮೀಪದ ಸರೋಳಿಕೆರೆಯಲ್ಲಿ ರವಿವಾರ ತಡ ರಾತ್ರಿ ಸಿಡಿಲು ಬಡಿದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.
ಸರೋಳಿಕೆರೆ ದಿ| ಲಾರೆನ್ಸ್ ಡಿ’ಸೋಜಾ ಅವರ ಪುತ್ರ ಮೇಸಿŒ ವೃತ್ತಿಯ ಪ್ರವೀಣ್ ಪೀಟರ್ ಡಿ’ಸೋಜಾ (38) ಮೃತಪಟ್ಟವರು.
ಪ್ರವೀಣ್ ರಾತ್ರಿ 10.30ರ ವೇಳೆಗೆ ಊಟ ಮುಗಿಸಿ ಹಜಾರದ ಕಿಟಕಿ ಸಮೀಪ ಕುರ್ಚಿಯಲ್ಲಿ ಕುಳಿತುಕೊಂಡಿದ್ದ ವೇಳೆ ಏಕಾ ಏಕಿ ಸಿಡಿಲು ಬಡಿ ಯಿತು. ತೀವ್ರ ಅಸ್ವಸ್ಥಗೊಂಡ ಅವರನ್ನು ತತ್ಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆ ತರ ಲಾಯಿತಾದರೂ ಅದಾಗಲೇ ಅವರು ಮೃತ ಪಟ್ಟಿ ದ್ದರು. ಸಿಡಿಲಿನ ಅಬ್ಬರಕ್ಕೆ ಅವರ ಮನೆಯ ವಿದ್ಯುತ್ ವಯರ್ಗಳು ಸುಟ್ಟುಹೋಗಿವೆ.
ಮೃತರು ತಾಯಿ ತೆರೆಸಾ ಡಿ’ಸೋಜಾ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ನೆಲ್ಯಾಡಿ ಗ್ರಾಮಕರಣಿಕೆ ಅಶ್ವಿನಿ, ಗ್ರಾಮ ಸಹಾಯಕ ಮಾಯಿಲಪ್ಪ ಗೌಡ ಅವರು ಮೃತರ ಮನೆಗೆ ಭೇಟಿ ನೀಡಿ ಸ್ಥಳ ತನಿಖೆ ನಡೆಸಿ ಹೇಳಿಕೆ ಮಹಜರು ಪಡೆದುಕೊಂಡು ಪರಿಹಾರಕ್ಕಾಗಿ ತಹಶೀಲ್ದಾರ್ಗೆ ವರದಿ ಸಲ್ಲಿಸಿದ್ದಾರೆ.
ಪಕ್ಕದ ಮನೆಗೆ ಹಾನಿ: ಮೃತ ಪ್ರವೀಣ್ ಮನೆಯಿಂದ ತುಸು ದೂರದಲ್ಲಿರುವ ನೆಲ್ಯಾಡಿ ಗ್ರಾ.ಪಂ. ಸದಸ್ಯೆ ಫ್ಲೋರಿನಾ ಡಿ’ಸೋಜಾ ಅವರ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ.
ತಾಯಿ, ಮಗು ಪಾರು
ಸಿಡಿಲು ಬಡಿದಾಗ ಪ್ರವೀಣ್ ಅವರ ಪತ್ನಿ ಲಲಿತಾ ಡಿ’ಸೋಜಾ, ಪಡುಬೆಟ್ಟು ಹಿ.ಪ್ರಾ. ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಮಗಳು ಪ್ರಣೀತಾ ಪ್ರಿಯಾ ಡಿ’ಸೋಜಾ ಅವರು ಮನೆಯ ಒಳ ಕೊಠಡಿ ಯಲ್ಲಿದ್ದ ಕಾರಣ ಅಪಾಯ ದಿಂದ ಪಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ
CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್
Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು
Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?