ಕರಾವಳಿಯಲ್ಲಿ ಕಳೆಗಟ್ಟಲು ಲೋಕಾಯುಕ್ತ ಸಜ್ಜು


Team Udayavani, Sep 16, 2022, 8:00 AM IST

ಕರಾವಳಿಯಲ್ಲಿ ಕಳೆಗಟ್ಟಲು ಲೋಕಾಯುಕ್ತ ಸಜ್ಜು

ಮಂಗಳೂರು: ಹೈಕೋರ್ಟ್‌ ಆದೇಶದಂತೆ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ಮುಂದಡಿ ಇಟ್ಟಿರು ವಂತೆಯೇ ಕರಾವಳಿಯ ಉಭಯ ಜಿಲ್ಲೆಗಳಲ್ಲೂ   ಈ  ಎರಡೂ ಸಂಸ್ಥೆಗಳ ವಿಲೀನಕ್ಕೆ ಸಿದ್ಧತೆ ನಡೆಯುತ್ತಿದೆ.

ಸುಸಜ್ಜಿತ ಕಟ್ಟಡವಿದ್ದರೂ ದಾಳಿ ನಡೆಸು ವಂತಹ ಹಾಗೂ ಟ್ರಾÂಪ್‌ ಮಾಡುವ ಅಧಿಕಾರ ಇರದ ಕಾರಣ ಇದ್ದೂ ಇಲ್ಲದಂತಿದ್ದ ಲೋಕಾ ಯುಕ್ತದ ಮಂಗಳೂರು ಕಚೇರಿ ಮತ್ತೆ ಕಳೆಗಟ್ಟಲು ಸಜ್ಜಾಗುತ್ತಿದೆ.

ಮಂಗಳೂರಿನಲ್ಲಿ ಎಸಿಬಿಯ ನಾಲ್ಕು ಜಿಲ್ಲೆಗಳ ಕೇಂದ್ರ ಕಚೇರಿ ಇದ್ದು ಅದನ್ನು ಕೆಲವು ದಿನಗಳಲ್ಲಿ ಮುಚ್ಚಲಾಗುತ್ತದೆ. ಇರುವಂತಹ ವಿವಿಧ ಪ್ರಕರಣಗಳ ಕಡತಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವುದಕ್ಕೆ ಕೊನೆಯ ಕ್ಷಣಗಳ ತಯಾರಿ ನಡೆದಿದೆ. ಹೈಕೋರ್ಟ್‌ ಆದೇಶದ ದಿನದಿಂದಲೇ ಯಾವುದೇ ಕೇಸ್‌ ದಾಖಲಿಸುತ್ತಿಲ್ಲ. ದಾಖಲಿಸಿರುವ ಪ್ರಕರಣಗಳ ತನಿಖೆಯೂ ಸ್ಥಗಿತಗೊಂಡಿದೆ.

ಇನ್ನು ಲೋಕಾಯುಕ್ತ ದ.ಕ. ಕಚೇರಿಯಲ್ಲಿ 6 ವರ್ಷಗಳಿಂದ ಕೇವಲ ಅರ್ಜಿ ವಿಲೇವಾರಿಯಲ್ಲಿ ವಿಳಂಬದಂತಹ ಸಾರ್ವ ಜನಿಕರ ದೂರಿನ ವಿಚಾರಣೆ ಮಾತ್ರ ನಡೆಯುತ್ತಿದೆ. ಸ್ಥಳೀಯ ವಾಗಿ ವಿಚಾರಣೆ ನಡೆಸಿ, ಪ್ರಾಥಮಿಕವಾಗಿ ಇದು ದೃಢಪಟ್ಟರೆ ಪ್ರಕರಣವನ್ನು ಬೆಂಗಳೂರು ಲೋಕಾಯುಕ್ತ ಪ್ರಧಾನ ಕಚೇರಿಗೆ ಕಳುಹಿಸಿ ಅಲ್ಲಿ ಅಂತಿಮವಾಗಿ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತಿತ್ತು.

ದ.ಕ. ವ್ಯಾಪ್ತಿಯ ಲೋಕಾಯುಕ್ತದಲ್ಲಿ 15 ಪ್ರಕರಣಗಳಷ್ಟೇ ಉಳಿದಿವೆ. ಮುಂದೆ ತನಿಖೆ ಮಾಡುವ ಪೊಲೀಸ್‌ ಅಧಿಕಾರ ಬರುವ ಹಿನ್ನೆಲೆಯಲ್ಲಿ ಸಿಬಂದಿಯೂ ಉತ್ಸಾಹಿತರಾಗಿದ್ದಾರೆ.

ಒಒಡಿ ಸಿಬಂದಿ ಹಿಂದಕ್ಕೆ : 

ಎಸಿಬಿಯಲ್ಲಿ ಒಒಡಿ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಬಂದಿಯನ್ನು ಮರಳಿಸುವಂತೆ ಸರಕಾರ  ಆದೇಶಿಸಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಎಸಿಬಿಯಿಂದ ಹೆಡ್‌ಕಾನ್‌ಸ್ಟೆಬಲ್‌ಗ‌ಳಿಬ್ಬರು ಬೇರೆ ಠಾಣೆಗೆ ಹಿಂದಿರುಗಿದ್ದಾರೆ. ಇಬ್ಬರು ಸಿಬಂದಿ ಲೋಕಾಯುಕ್ತಕ್ಕೂ ಮರಳಿದ್ದಾರೆ. ಸದ್ಯ ಒಬ್ಬರು ಎಸ್ಪಿ, ಒಬ್ಬರು ಡಿಎಸ್‌ಪಿ, ಇಬ್ಬರು ಇನ್‌ಸ್ಪೆಕ್ಟರ್‌, ಇಬ್ಬರು ಹೆಡ್‌ಕಾನ್‌ಸ್ಟೆಬಲ್‌ಗ‌ಳು ಕಾರ್ಯನಿರ್ವಹಿಸುತ್ತಿದ್ದಾರೆ.  ದ.ಕ. ಲೋಕಾಯುಕ್ತ ಕಚೇರಿಯಲ್ಲಿ ಪ್ರಸ್ತುತ ಒಬ್ಬರು ಎಸ್ಪಿ (ಉಡುಪಿಗೂ ಸೇರಿ), ಇಬ್ಬರು ಡಿವೈಎಸ್ಪಿಗಳು, ಒಬ್ಬರು ಇನ್‌ಸ್ಪೆಕ್ಟರ್‌ (2 ಹುದ್ದೆ ಖಾಲಿ), ಹಾಗೂ ಕಚೇರಿ ಸಿಬಂದಿ ಇದ್ದಾರೆ. ಉಡುಪಿಯಲ್ಲಿ ಒಬ್ಬರು ಡಿವೈಎಸ್ಪಿ, ಒಬ್ಬರು ಇನ್‌ಸ್ಪೆಕ್ಟರ್‌ ಹಾಗೂ ಕಚೇರಿ ಸಿಬಂದಿ ಇದ್ದಾರೆ.

ಒಂದು ಪ್ರಕರಣದಲ್ಲೂ ತೀರ್ಪು ಬಂದಿಲ್ಲ :

ಎಸಿಬಿ 2016ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ದ.ಕ., ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ  ಜಿಲ್ಲೆಗಳು ಮಂಗಳೂರು ಕೇಂದ್ರ ಸ್ಥಾನವಾಗಿ ರುವ ಎಸಿಬಿ ಎಸ್ಪಿ ಕಚೇರಿ ವ್ಯಾಪ್ತಿಗೆ ಬರುತ್ತವೆ.

ಈ ವರೆಗೆ ಒಟ್ಟು 175 ಪ್ರಕರಣಗಳು ಈ ನಾಲ್ಕು ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಾಗಿವೆ. ದ.ಕ.ಲ್ಲಿ 61, ಉಡುಪಿ ಯಲ್ಲಿ 28 ಪ್ರಕರಣಗಳಿವೆ. ಎಲ್ಲವೂ ತನಿಖೆಯ  ಹಂತಗಳಲ್ಲಿವೆ. ಈ ಪೈಕಿ ಅರ್ಧದಷ್ಟು ಪ್ರಕರಣಗಳು ಎಸಿಬಿ ಸ್ಪೆಷಲ್‌ ಕೋರ್ಟ್‌ನಲ್ಲಿ ವಿವಿಧ ವಿಚಾರಣೆಯ ಮಜಲುಗಳಲ್ಲಿವೆ. ಇದುವರೆಗೆ ಯಾವುದೇ ಪ್ರಕರಣದಲ್ಲಿ ತೀರ್ಪು ಬಂದಿಲ್ಲ.

ಹೊಸ ಸವಾಲು :

ಪ್ರಸ್ತುತ ವಿವಿಧ ಹಂತಗಳಲ್ಲಿರುವ ಎಸಿಬಿ ಪ್ರಕರಣಗಳನ್ನು  ಕೆಲವು ದಿನಗಳಲ್ಲಿ ಲೋಕಾ ಯುಕ್ತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಆದರೆ ಇದು ವರೆಗೆ ಎಸಿಬಿಯಲ್ಲಿರುವ ಸಿಬಂದಿ ಅದನ್ನು ನಿರ್ವಹಿಸುತ್ತಿದ್ದರು, ಆದರೆ ಮುಂದೆ ಲೋಕಾ ಯುಕ್ತದವರಿಗೆ ಈ ಪ್ರಕರಣಗಳು ಹೊಸದಾಗಿರು ವುದರಿಂದ ಅದನ್ನು ವಿಸ್ತೃತವಾಗಿ ತಿಳಿದುಕೊಂಡು ತನಿಖೆ ಮುಂದುವರಿಸಬೇಕಾಗುತ್ತದೆ. ಇದು ಹೊಸ ಸವಾಲಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

ನಮಗೆ ಲೋಕಾಯುಕ್ತರಿಂದ ಬಂದಿರುವ ಸೂಚನೆಗಳ ಆಧಾರದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ, ಈ ಕುರಿತು ವಿವರಗಳನ್ನು ನೀಡುವಂತಿಲ್ಲ.   – ಜಗದೀಶ್‌, ಎಸ್ಪಿ, ಲೋಕಾಯುಕ್ತ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.