ಇಂಡಿಯನ್ ಐಡೋಲ್ ಗಾಯನ ಸ್ಪರ್ಧೆ: ಅಂತಿಮ ಕಣದಲ್ಲಿ ಮೂಡುಬಿದಿರೆಯ ನಿಹಾಲ್ ತಾವ್ರೋ
Team Udayavani, Aug 10, 2021, 7:40 AM IST
ಮೂಡುಬಿದಿರೆ: ಸೋನಿ ಟಿವಿಯ ಇಂಡಿಯನ್ ಐಡೋಲ್ ಗಾಯನ ರಿಯಾಲಿಟಿ ಶೋ ಸ್ಪರ್ಧೆಯ ಅಂತಿಮ ಕಣಕ್ಕೆ ಮೂಡುಬಿದಿರೆಯ ಕಡಲಕೆರೆ ಪರಿಸರದ ನಿಹಾಲ್ ತಾವ್ರೋ ಕೂಡ ಆಯ್ಕೆಯಾಗಿದ್ದಾರೆ. ಒಟ್ಟು 6 ಮಂದಿ ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ. ಈ ಅವಕಾಶ ಪಡೆದ ಮೊದಲ ಕನ್ನಡಿಗ ತಾವ್ರೋ ಆಗಿದ್ದಾರೆ.
ಮೂರನೇ ತರಗತಿಯಲ್ಲಿರುವಾಗಲೇ ಆಲ್ಬಂ ಸಾಂಗ್ ಒಂದಕ್ಕೆ ಯಾವುದೇ ತರಬೇತಿ, ರಿಹರ್ಸಲ್ ಇಲ್ಲದೆ ಹಾಡಿದ್ದ ನಿಹಾಲ್ ಅಳ್ವಾಸ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿ.
ಶಾಲಾ ದಿನಗಳಲ್ಲಿ ಪ್ರತಿಭಾ ಕಾರಂಜಿಯಲ್ಲದೇ ಹಲವು ಟಿ ವಿ ಷೋಗಳಲ್ಲಿ ಭಾಗವಹಿಸಿದವರು. ನಾದಬ್ರಹ್ಮ ಹಂಸಲೇಖ ಅವರು “ನಿಹಾಲ್ ತಾವ್ರೋ ಅಲ್ಲಪ್ಪಾ ನಿಹಾಲ್ ದೇವ್ರು’ ಎಂದಿದ್ದರೆ, ಗಾಯಕ ವಿಜಯ ಪ್ರಕಾಶ್ “ನಿಹಾಲ್ ವಿಶ್ವದ ಗಮನ ಸೆಳೆಯುವ ಗಾಯಕನಾಗುತ್ತಾನೆ,’ ಎಂದು ಝೀ ಕನ್ನಡದ ಷೋದಲ್ಲಿ ಭವಿಷ್ಯ ನುಡಿದಿದ್ದರು..
ಕನ್ನಡ, ತುಳು, ಕೊಂಕಣಿ ಸಹಿತ ಹಲವು ಸಿನೆಮಾಗಳಲ್ಲಿ ಹಾಡಿರುವ ನಿಹಾಲ್ ರ “ಗಿರ್ಗಿಟ್’ ತುಳು ಸಿನೆಮಾದ ಗೀತೆ ಅರೆ ಗಾಲಡ್ ಮರುಭೂಮಿಡ್’ ಜನಪ್ರಿಯ. ನೂರಕ್ಕೂ ಹೆಚ್ಚು ಹಾಡುಗಳನ್ನು ತಾವ್ರೋ ಹಾಡಿದ್ದಾರೆ. ತಾವ್ರೋ ಆವರನ್ನು ಬೆಂಬಲಿಸಿ ಆ. 14ರ ವರೆಗೆ Sony ಆ್ಯಪ್ ಹಾಗೂ firstcry.com ಮೂಲಕ ಮತಗಳನ್ನು ಚಲಾಯಿಸಿ ಬೆಂಬಲವನ್ನು ವ್ಯಕ್ತ ಪಡಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ; ಎನ್ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್ಪಿ ಆಗ್ರಹ
Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
Mangaluru ಪೆಟ್ರೋಲ್, ಡೀಸೆಲ್ ತುಟ್ಟಿ : ಪುಷ್ಪಾ ಅಮರನಾಥ್
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
MUST WATCH
ಹೊಸ ಸೇರ್ಪಡೆ
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ