ಚರಂಡಿಯಿಲ್ಲದ ಹೆದ್ದಾರಿ: ರಸ್ತೆಯೆಲ್ಲ ಮಳೆ ನೀರು; ವಾಹನ ಸವಾರರ ಪರದಾಟ


Team Udayavani, May 29, 2018, 4:35 AM IST

rain-water-28-5.jpg

ಮಹಾನಗರ: ಅಧಿಕೃತವಾಗಿ ಮಳೆಗಾಲ ಇನ್ನಷ್ಟೇ ಶುರುವಾಗುವ ಮೊದಲೇ ರವಿವಾರ ರಾತ್ರಿ ಸುರಿದ ಮಳೆಗೆ ಮಂಗಳೂರು ಅಕ್ಷರಶಃ ಸಮಸ್ಯೆಯ ಸುಳಿಗೆ ಸಿಲುಕಿದಂತಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣದಿಂದ ರಸ್ತೆಯ ಲ್ಲಿಯೇ ಮಳೆ ನೀರು ನಿಂತು ವಾಹನ ಸವಾರರು ಆತಂಕ ಎದುರಿಸುವ ಪಡಿಪಾಟಿಲು ಪ್ರತೀವರ್ಷದಂತೆ ಈ ಬಾರಿಯೂ ಮತ್ತೆ ಎದುರಾದಂತಾಗಿದೆ. ಹೀಗಾಗಿ, ಪ್ರತೀ ವರ್ಷದ ಮಂಗಳೂರಿನ ರಸ್ತೆ ಪ್ರಯಾಣಿಕರ ಈ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗಿದೆ.ಮಂಗಳೂರು ವ್ಯಾಪ್ತಿಯಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಯು ಮಳೆ ನೀರಿನ ಸಮಸ್ಯೆಯಿಂದ ವಾಹನ ಸವಾರರಿಗೆ ಅಪಾಯವಾಗಿ ಪರಿಣಮಿಸಿದೆ. ಎಲ್ಲಿ ಹೊಂಡ? ಎಲ್ಲಿ ರಸ್ತೆ? ಎಂಬುದೇ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ರವಿವಾರ ಸಂಜೆಯಿಂದಲೇ ನಗರದಲ್ಲಿ ಸುರಿದ ಮಳೆಯಿಂದಾಗಿ ಮಂಗಳೂರಿನ ರಾ.ಹೆ.ಯು ಇದೇ ಪರಿಸ್ಥಿತಿ ಎದುರಿಸುವಂತಾಯಿತು. ಅಡ್ಯಾರ್‌ ನಿಂದ ಫರಂಗಿಪೇಟೆವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಸಮಸ್ಯೆ ಎದುರಿಸಿದರು. ನೀರಲ್ಲಿ ರಸ್ತೆಯೋ? ಅಥವಾ ರಸ್ತೆಯಲ್ಲಿ ನೀರೋ? ಎಂದು ಕೂಡ ಗೊತ್ತಾಗದಷ್ಟು ಮಳೆನೀರು ರಸ್ತೆಯಲ್ಲಿ ನಿಂತು ವಾಹನಸವಾರರು ಪರದಾಡುವಂತಾಯಿತು. ಕೊಡಕ್ಕಲ್‌, ಕಣ್ಣೂರು, ಅಡ್ಯಾರ್‌, ಅರ್ಕುಳ ವ್ಯಾಪ್ತಿಯಲ್ಲಿ ಈ ಸಮಸ್ಯೆ ಉಲ್ಬಣಗೊಂಡಿತ್ತು.


ಪ್ರತೀ ಮಳೆಗಾಲದಲ್ಲೂ ಈ ಹೆದ್ದಾರಿಯಲ್ಲಿ  ಸಮಸ್ಯೆ ತಪ್ಪಿದ್ದಲ್ಲ. ಸಮರ್ಪಕ ಚರಂಡಿ ವ್ಯವಸ್ಥೆಯನ್ನು ರಾ.ಹೆ. ಪ್ರಾಧಿಕಾರ ಹಾಗೂ ಪಾಲಿಕೆ ಸಮನ್ವಯ ರೀತಿಯಲ್ಲಿ ಮಾಡದಿರುವುದರಿಂದ ಈ ಸಮಸ್ಯೆ ಕಾಣಿಸುತ್ತದೆ. ‘ಚರಂಡಿ ಕೆಲಸ ಅವರದ್ದು’ ಎಂದು ಪಾಲಿಕೆ, ‘ನಮ್ಮದಲ್ಲ ನಿಮ್ಮದು’ ಎಂದು ಹೆದ್ದಾರಿ ಇಲಾಖೆ ಬೆರಳು ತೋರಿಸಿದ ಪರಿಣಾಮ ಇಂದಿಗೂ ಈ ಸಮಸ್ಯೆ ಪರಿಹಾರವಾಗಿಲ್ಲ. ಇವರಿಬ್ಬರ ಸಮಸ್ಯೆಯಿಂದ ವಾಹನ ಸವಾರರು ನಿತ್ಯ ಮಳೆ ನೀರಿನ ಅಭಿಷೇಕದೊಂದಿಗೆ ಪ್ರಯಾಣಿಸಬೇಕಾಗಿದೆ. 

ರಸ್ತೆ ಹುಡುಕಾಡಿದ ಬಸ್‌ ಡ್ರೈವರ್‌!
ಮಳೆ ನೀರು ನಿಂತ ಕಾರಣ ಬಹುತೇಕ ದ್ವಿಚಕ್ರ ವಾಹನದವರಿಗಂತೂ ಇತರ ವಾಹನ ಸಂಚರಿಸುವಾಗ ಎರಚಿದ ಕೆಸರಿನ ಸ್ನಾನ ಅನಿವಾರ್ಯವಾಯಿತು. ಮಳೆ ನೀರು ಕಣ್ಣಿಗೆ ಬೀಳುತ್ತಿರುವಾಗ ಹೊಂಡಗಳ ಮಧ್ಯೆ ಸರಿ ರಸ್ತೆಯನ್ನು ಹುಡುಕಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಯಿತು. ಈ ಮಧ್ಯೆ, ಬಿ.ಸಿ.ರೋಡ್‌, ಪುತ್ತೂರು ಕಡೆಗೆ ಹೋಗಿ ಬರುವ ಬಸ್‌ಗಳು ಈ ರಸ್ತೆಯಲ್ಲಿ ಓಡಾಡಲು ಪರದಾಡಬೇಕಾಯಿತು. ಕೆಲವು ಡ್ರೈವರ್‌ ಗಳಂತು ಬಸ್‌ ನಲ್ಲಿ ತಮ್ಮ ಸೀಟ್‌ ನ ಸ್ವಲ್ಪ ಮುಂಭಾಗಕ್ಕೆ ಬಂದು ರಸ್ತೆಯನ್ನು ಹುಡುಕಾಡಿ ಸಂಚರಿಸುವ ಪ್ರಮೇಯ ಎದುರಾಯಿತು. 

ನೀರು ನೋಡಿ ಒಮ್ಮೆಗೇ ಬ್ರೇಕ್‌; ಹಿಂಬದಿಯಲ್ಲಿ ಡಿಶ್ಯುಂ!
ಅಡ್ಯಾರ್‌ ಸಮೀಪ ಹೆದ್ದಾರಿಯಲ್ಲಿ ಮಳೆ ನೀರು ನಿಂತಿರುವುದನ್ನು ದೂರದಲ್ಲಿ ಗಮನಿಸದ ಕಾರೊಂದು ಒಮ್ಮೆಲೇ ಬಂದು ಬ್ರೇಕ್‌ ಹಾಕಿದ ಪರಿಣಾಮ, ಹಿಂಬದಿಯಲ್ಲಿ ಬರುತ್ತಿದ್ದ ಮತ್ತೂಂದು ಕಾರು ನಡುವೆ ಅಪಘಾತವಾಗಿದೆ. ಮಳೆಗಾಲದ ಸಂದರ್ಭ ಇಂತಹ ಘಟನೆಗಳು ಎದುರಾಗುತ್ತಲೇ ಇದೆ. ಮಳೆ ನೀರು ಗಮನಿಸದೆ, ಡಿವೈಡರ್‌ ದಾಟಿ ವಾಹನವು ಪಕ್ಕದ ರಸ್ತೆಗೆ ಎಸೆಯಲ್ಪಟ್ಟ ಘಟನೆಯೂ ಈ ಹಿಂದೆ ಇಲ್ಲಿ ಸಂಭವಿಸಿದೆ. 

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.