ತ್ಯಾಜ್ಯ ಸಮಸ್ಯೆಗೆ ಬಿದ್ದಿಲ್ಲ  ಪೂರ್ಣ ಅಂಕುಶ 


Team Udayavani, Jun 20, 2018, 1:05 PM IST

20-june-11.jpg

ನಗರ : ಘನತ್ಯಾಜ್ಯ ವಿಲೇವಾರಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾದಂತೆ ಕಾಣುತ್ತಿಲ್ಲ. ಕೆಲವು ಕಡೆಗಳಲ್ಲಿ ಘನತ್ಯಾಜ್ಯ ಚೆಲ್ಲಾಡು ತ್ತಿದ್ದು, ಕೆಲವು ಅಂಗಡಿಗಳಲ್ಲೂ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ ಎಂಬ ದೂರು ಕೇಳಿಬಂದಿದೆ.

ತಿಂಗಳ ಹಿಂದೆ ಘನತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಆಗದೆ, ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಮನೆ, ಅಂಗಡಿಗಳ ತ್ಯಾಜ್ಯ ರಸ್ತೆ ಬದಿಯ ಡಬ್ಬಿಯಲ್ಲಿ ತುಂಬಿ ತುಳುಕುತ್ತಿತ್ತು. ಹೊಸ ವ್ಯವಸ್ಥೆ ಆಗಿನ್ನೂ ಪ್ರಾರಂಭವಾಗದೆ, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಹೊಸ ವ್ಯವಸ್ಥೆ ಕ್ರಮೇಣ ಸಮಸ್ಯೆ ಬಗೆಹರಿಸುವಲ್ಲಿ ಸಫಲವಾಯಿತು. ಹಾಗೆಂದು ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪೂರ್ಣ ಪ್ರಮಾಣದಲ್ಲಿ ಅಂಕುಶ ಹಾಕಲು ಯಶಸ್ವಿಯಾಗಿಲ್ಲ.

ಸಕಾಲಿಕ ಸ್ಪಂದನೆ ಅಗತ್ಯ
ಪೇಟೆ ಬೆಳೆದಂತೆ ಘನತ್ಯಾಜ್ಯ ವಿಲೇವಾರಿಯೂ ಬೃಹತ್‌ ಸಮಸ್ಯೆಯಾಗಿ ಕಾಡುವುದು ಸಹಜ. ಸ್ಥಳೀಯಾಡಳಿತ ಸಕಾಲಿಕವಾಗಿ ಸ್ಪಂದಿಸದೇ ಹೋದರೆ, ಸಮಸ್ಯೆ ಕೈಮೀರಿ ಹೋಗುತ್ತದೆ. ಪುತ್ತೂರು ನಗರಸಭೆ ವ್ಯಾಪ್ತಿಯೂ ಇದಕ್ಕೆ ಹೊರತಾಗಿಲ್ಲ. ಒಂದೊಮ್ಮೆ ನಗರಸಭೆಯ ಪೌರಕಾರ್ಮಿಕರೇ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರು. ಬಳಿಕ ಸ್ವಸಹಾಯ ಸಂಘಗಳ ಮೂಲಕ ಪುತ್ತೂರು ಪೇಟೆಯ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಘನತ್ಯಾಜ್ಯ ಸಂಗ್ರಹಕ್ಕೆ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. 7 ವಾಹನಗಳನ್ನು ಟೆಂಡರ್‌ಗೆ ವಹಿಸಿಕೊಂಡು, ಪೌರಕಾರ್ಮಿಕರ ಮೂಲಕವೇ ತ್ಯಾಜ್ಯ ಸಂಗ್ರಹ ಮಾಡಲು ಆರಂಭಿಸಿತು. ಇದು ಒಗ್ಗಿಕೊಳ್ಳಲು ಸ್ವಲ್ಪ ಸಮಯವನ್ನೇ ತೆಗೆದುಕೊಂಡಿತು. ಹಾಗೆಂದು ಇದು ಇಂದಿಗೂ ಸುಸ್ಥಿತಿಗೆ ಬಂದಿಲ್ಲ.

41 ಕಾರ್ಮಿಕರ ನೇಮಕ
ಹೊಸ ಟೆಂಡರ್‌ ವಹಿಸಿಕೊಂಡ ಲಾರಿಗಳಿಗೆ 41 ಹೊಸ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಇವರಿಗೆ ಪುತ್ತೂರಿನ ತ್ಯಾಜ್ಯ ಸಂಗ್ರಹ ವಿಷಯ ಹೊಸದು. ಎಲ್ಲೆಲ್ಲ ತ್ಯಾಜ್ಯ ಡಬ್ಬಿ ಇಟ್ಟಿದ್ದಾರೆ. ಯಾವೆಲ್ಲ ಪ್ರದೇಶದಲ್ಲಿ ಅಂಗಡಿಗಳಿವೆ ಎನ್ನುವ ಮೂಲ ವಿಚಾರವೇ ತಿಳಿದಂತೆ ಕಾಣುತ್ತಿಲ್ಲ. ಪೇಟೆಗಿಂತ ಸ್ವಲ್ಪ ಒಳ ಪ್ರದೇಶಗಳಲ್ಲಿರುವ ತ್ಯಾಜ್ಯ ಡಬ್ಬಿ ಹಾಗೂ ಕೆಲವುಅಂಗಡಿಗಳ ಘನತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ ಎಂಬ ದೂರುಗಳು ಬಂದಿವೆ.

2 ದಿನಗಳಿಗೊಮ್ಮೆ ಸಂಗ್ರಹ
ಪ್ರತಿದಿನ ತ್ಯಾಜ್ಯ ಸಂಗ್ರಹ ಕಷ್ಟ ಎನ್ನುವ ನಿರ್ಣಯಕ್ಕೆ ಪುತ್ತೂರು ನಗರಸಭೆ ಬಂದಿದೆ. ಆದ್ದರಿಂದ 2 ದಿನಗಳಿಗೊಮ್ಮೆ ತ್ಯಾಜ್ಯ ಡಬ್ಬಿಗಳಿಂದ ಘನತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. 2 ದಿನಗಳಿಗೊಮ್ಮೆ ತ್ಯಾಜ್ಯ ಸಂಗ್ರಹ ಮಾಡುವುದು ಆಡಳಿತಕ್ಕೆ ಸುಲಭದ ವಿಷಯ. ಆದರೆ ತ್ಯಾಜ್ಯದ ರಾಶಿ ಬೃಹದಾಗಿ ಬೆಳೆದು, ಸ್ಥಳೀಯರಿಗೆ ತಲೆನೋವಾಗಿದೆ. ಡಬ್ಬಿಯಿಂದ ತ್ಯಾಜ್ಯ ಹೊರ ಚೆಲ್ಲುತ್ತಿದ್ದು, ಕಾಗೆ – ನಾಯಿ ಮೊದಲಾದ ಪ್ರಾಣಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಾಡುತ್ತಿವೆ.

ನೇರ ನೇಮಕಾತಿ
ಪುತ್ತೂರು ನಗರಸಭೆಗೆ ನೇರ ನೇಮಕಾತಿ ಮೂಲಕ ಪೌರಕಾರ್ಮಿಕರನ್ನು ತೆಗೆದುಕೊಳ್ಳಲು ಸರಕಾರ ಅನುಮತಿಸಿದೆ. ಇದಕ್ಕೆ ಜಿಲ್ಲಾಧಿಕಾರಿ ಅನುಮೋದನೆ ನೀಡಿದರೆ ಮುಗಿಯಿತು. ಇರುವ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿಕೊಂಡು, ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಈಗ ಟೆಂಡರ್‌ ಕರೆಯಲು ಅನುಮತಿ ಇಲ್ಲದ ಕಾರಣ, ಇಂತಹ ಪರ್ಯಾಯ ಮಾರ್ಗ ಸ್ಥಳೀಯಾಡಳಿತಕ್ಕೆ ಅನಿವಾರ್ಯ ಆಗಿದೆ. ಈ ಪೌರಕಾರ್ಮಿಕರಿಗೆ ನಗರಸಭೆಯೇ ನೇರ ವೇತನ ಪಾವತಿ ಮಾಡಲಿದೆ.

100 ಮಂದಿ ಬೇಕು
ಪುತ್ತೂರು ನಗರಸಭೆ ವ್ಯಾಪ್ತಿಯ ಶುಚಿತ್ವ ಕೆಲಸಕ್ಕೆ ಸುಮಾರು 100 ಮಂದಿ ಪೌರ ಕಾರ್ಮಿಕರ ಅಗತ್ಯವಿದೆಯಂತೆ. ಸದ್ಯ 15
ಮಂದಿ ಮಾತ್ರ ಶಾಶ್ವತ ಪೌರ ಕಾರ್ಮಿಕರಿದ್ದಾರೆ. ಉಳಿದಂತೆ ಹೊಸ ವ್ಯವಸ್ಥೆಯಡಿ 41 ಮಂದಿ ಪೌರ ಕಾರ್ಮಿಕರಿದ್ದಾರೆ. ಇವರನ್ನು ನೇರ ನೇಮಕಾತಿ ಮಾಡಿಕೊಳ್ಳಬಹುದು. ಇವರಿಗೆ ಪಿಎಫ್‌ ಸೌಲಭ್ಯವೂ ಇದೆ. ಹಾಗಿದ್ದು 56 ಪೌರ ಕಾರ್ಮಿಕರನ್ನು ಪುತ್ತೂರು ನಗರಸಭೆ ಶುಚಿತ್ವಕ್ಕೆ ಬಳಸಿಕೊಂಡಂತಾಯಿತು. ಇನ್ನೂ 44ರಷ್ಟು ಪೌರ ಕಾರ್ಮಿಕರ ಅಗತ್ಯವಿದೆ.

ನೇರ ನೇಮಕಾತಿ
ಟೆಂಡರ್‌ ಕರೆಯಲು ಅವಕಾಶ ಇಲ್ಲದ ಕಾರಣ, ನೇರ ನೇಮಕಾತಿಗೆ ಸರಕಾರ ಆದೇಶಿಸಿದೆ. ಇವರಿಗೆ ನಗರಸಭೆ ಆಡಳಿತ ವೇತನ ಪಾವತಿ ಮಾಡಲಿದೆ. ಇವರಿಗೆ ವಾಹನ ಗುತ್ತಿಗೆ ನೀಡಿದ ವ್ಯಕ್ತಿ ಪೇಮೆಂಟ್‌ ನೀಡಬೇಕಾಗಿಲ್ಲ. ಉಳಿದ ವಿಷಯ ಸರಕಾರಕ್ಕೆ ಬಿಟ್ಟದ್ದು.
 - ರೂಪಾ ಶೆಟ್ಟಿ, ಪೌರಾಯುಕ್ತೆ
    ಪುತ್ತೂರು ನಗರಸಭೆ 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.