ಪಠ್ಯಪುಸ್ತಕಗಳೇ ಬಂದಿಲ್ಲ; ಪರೀಕ್ಷೆ  ಆರಂಭ!


Team Udayavani, Jul 18, 2017, 3:35 AM IST

1707bel1ph.gif

ಬೆಳ್ತಂಗಡಿ: ಶಾಲಾರಂಭವಾಗಿ ಇಷ್ಟು ದಿನಗಳಾಗಿದ್ದರೂ ಸರಕಾರದಿಂದ ಇನ್ನೂ ಪಠ್ಯ ಪುಸ್ತಕ ವಿತರಣೆಯೇ ಆಗಿಲ್ಲ. ಹಾಗಿದ್ದರೂ ಸೋಮವಾರದಿಂದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಾಸಿಕ ಪರೀಕ್ಷೆ ನಡೆಯಲಿದೆ !

ಮೇ 29ರಂದು ಶಾಲೆಗಳು ಆರಂಭವಾಗಿವೆ. ಶಾಲೆಗಳು ಬಾಗಿಲು ತೆರೆದು ಒಂದೆರಡು ದಿನಗಳಲ್ಲೇ ಪಠ್ಯಪುಸ್ತಕ ಸರಬರಾಜಾಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಅದಾಗಿ 50 ದಿನಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ಪುಸ್ತಕಗಳು ಬರದೆ ಪಾಠ ಮಾಡುವುದು ಏನನ್ನು ಎಂದು ಶಿಕ್ಷಕರು ದಿಕ್ಕು ತೋಚದೇ ಕುಳಿತಿದ್ದಾರೆ.

ಎಲ್ಲ ಕಡೆ ಹಳೆಯ ಪಠ್ಯ ಪುಸ್ತಕವನ್ನಾಧರಿಸಿ ಪಾಠ ಪ್ರವಚನ ನಡೆಸಲಾಗುತ್ತಿದೆ. ಆದರೆ ಹೊಸ ಪುಸ್ತಕ ಬಂದಾಗ ಕಳವಳಗೊಳ್ಳು ತ್ತಿದ್ದಾರೆ. ಏಕೆಂದರೆ ಅದರಲ್ಲಿ ಆ ಪಾಠವೇ ಇರುವುದಿಲ್ಲ ಅಥವಾ ಇನ್ನಷ್ಟು ವ್ಯಾಕರಣ ಪಾಠ ಗಳಿವೆ. ಮಾಸಿಕ ಇಂತಿಷ್ಟು ಪಾಠ ಬೋಧನೆಯಾಗ ಬೇಕೆಂದು ಶಿಕ್ಷಣ ಇಲಾಖೆಯೇ ವೇಳಾಪಟ್ಟಿ ನಿಗದಿ ಮಾಡುತ್ತದೆ. ಆದರೆ ಪುಸ್ತಕಗಳನ್ನೇ ಕೊಡದೇ ಪಾಠ ಮುಗಿಸುವುದು ಹೇಗೆ ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.

ವಿತರಣೆಯಲ್ಲಿ ಬೇಜವಾಬ್ದಾರಿ
ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಸರಕಾರದಿಂದ ಜವಾಬ್ದಾರಿ ವಹಿಸಿ ಕೊಂಡ ಸಂಸ್ಥೆಯ ಬೇಜವಾಬ್ದಾರಿ ಕೋಟ್ಯಂ ತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ವಾಡು ತ್ತಿದೆ. ಹೀಗೊಂದು ಅಪರಾತಪರಾ ನೋಡಿ. ಕೆಲವು ದಿನಗಳ ಹಿಂದೆ 6ನೇ ತರಗತಿಯ ಸಮಾಜ ಪಠ್ಯದ ಎರಡನೇ ಭಾಗ ಬಂದಿತ್ತು. ಮೊದಲ ಭಾಗವೇ ಬಂದಿರಲಿಲ್ಲ. ಎರಡನೇ ಭಾಗವನ್ನು ನವೆಂಬರ್‌ ಅನಂತರ ಬೋಧಿಸ ಬೇಕಿದ್ದು ಈ ಅವಧಿಯಲ್ಲಿ ಬೋಧಿಸಬೇಕಾದ ಪುಸ್ತಕ ಬರದೇ ಎರಡನೇ ಭಾಗವನ್ನು ಕೊಟ್ಟ ಹೆಡ್ಡತನಕ್ಕೆ ಏನು ಮಾಡುವುದು?  ಸರಬ ರಾಜು ಮಾಡಿದ ಪುಸ್ತಕಗಳ ಲೆಕ್ಕಾಚಾರ ಸರಿ ದೂಗಿಸಲು ಇಂತಹ ಉಪಾಯಗಳನ್ನೆಲ್ಲ ಮಾಡಲಾಗಿದೆ.

ಪುಸ್ತಕ ವಿತರಣೆಗೆ ತೊಂದರೆಯಾಗಬಾರದು ಹಾಗೂ ಕಾಗದದ ಕೊರತೆಯಿಂದಾಗಿ ಕೆಲ ಪುಸ್ತಕ ಗಳನ್ನು ಎರಡು ಭಾಗಗಳಾಗಿ ವಿಂಗ ಡಿಸ ಲಾಗಿದೆ. ಆದರೆ ಕಣ್ಣುಮುಚ್ಚಿ ವಿತ ರಣೆ ಮಾಡುವವರಿಂದಾಗಿ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ. ಒಂದೊಮ್ಮೆ ಎಲ್ಲ ಪಠ್ಯಪುಸ್ತಕಗಳನ್ನು ಇಲಾಖೆಯ ವೆಬ್‌ಸೈಟಿನಲ್ಲಾದರೂ ಹಾಕಿದ್ದರೆ ಆನ್‌ಲೈನ್‌ ಮೂಲಕ ಪ್ರಿಂಟ್‌ ತೆಗೆದು ಪಾಠ ವಾದರೂ ಮಾಡಬಹುದಿತ್ತು.

ಪುಸ್ತಕಗಳು ಬಂದಿಲ್ಲ: ಸುಮಾರು 12 ಶೀರ್ಷಿಕೆಯ ಪುಸ್ತಕ ಗಳು ಇನ್ನೂ ಶಾಲೆಗಳಿಗೆ, ಶಿಕ್ಷಣ ಇಲಾಖೆ ಕಚೇರಿಗೆ ಬಂದಿಲ್ಲ. ಇವುಗಳು ಇನ್ನೂ ಮುದ್ರಣಾಲಯದಿಂದಲೇ ಬಂದಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಬಾಕಿಯಾದ ಪುಸ್ತಕಗಳು
ಆಂಗ್ಲ ಮಾಧ್ಯಮದ 1ನೇ ತರಗತಿಯ ಕನ್ನಡ, 2ನೇ ತರಗತಿಯ ಗಣಿತ, 3ನೇ ತರಗತಿಯ ಗಣಿತ ಭಾಗ 1, 4ನೇ ತರಗತಿಯ ಕನ್ನಡ, ಗಣಿತ ಭಾಗ 2, 5ನೇ ತರಗತಿಯ ಕನ್ನಡ, ಗಣಿತ ಭಾಗ 2, 6ನೇ ತರಗತಿಯ ಕನ್ನಡ, 7ನೇ ತರಗತಿಯ ಕನ್ನಡ, ಇಂಗ್ಲಿಷ್‌ ಪ್ರಥಮ ಭಾಷೆ, 8ನೇ ತರಗತಿಯ ಸಂಸ್ಕೃತ ಪ್ರಥಮ ಭಾಷೆ, ಕನ್ನಡ ತೃತೀಯ ಭಾಷೆ, 9ನೇ ತರಗತಿಯ ವಿಜ್ಞಾನ ಭಾಗ 1, ಇಂಗ್ಲಿಷ್‌ ದ್ವಿತೀಯ ಭಾಷೆ, 10ನೇ ತರಗತಿಯ ವಿಜ್ಞಾನ ಭಾಗ 1, ದೈಹಿಕ ಶಿಕ್ಷಣ ಪಠ್ಯಗಳು ಬಂದಿಲ್ಲ ಎನ್ನುತ್ತಾರೆ ಖಾಸಗಿ ಶಾಲೆಯವರು.

ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಎರಡನೇ ತರಗತಿಯ ಇಂಗ್ಲಿಷ್‌ ಆಕ್ಟಿವಿಟಿ ಪುಸ್ತಕ, 4ನೇ ತರಗತಿ ಆಂಗ್ಲಮಾಧ್ಯಮ ಗಣಿತ ಭಾಗ 2, 5ನೇ ತರಗತಿ ಆಂಗ್ಲಮಾಧ್ಯಮ ಭಾಗ 2, ಇಂಗ್ಲಿಷ್‌ ದ್ವಿತೀಯ ಭಾಷೆ, 6ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಭಾಗ 1, ವಿಜ್ಞಾನ, 7ನೇ ತರಗತಿ ಕನ್ನಡ ಮಾಧ್ಯಮ ವಿಜ್ಞಾನ ಭಾಗ 2, ಗಣಿತ ಭಾಗ 2, 7ನೇ ತರಗತಿ ಇಂಗ್ಲಿಷ್‌ ಪ್ರಥಮ ಭಾಷೆ, 7ನೇ ಆಂಗ್ಲ ಮಾಧ್ಯಮ ದೈಹಿಕ ಶಿಕ್ಷಣ, 8ನೇ ತರಗತಿ ಆಂಗ್ಲಮಾಧ್ಯಮ ಗಣಿತ ಭಾಗ 2, ಆಂಗ್ಲಮಾಧ್ಯಮ ವಿಜ್ಞಾನ ಭಾಗ 2, 8ನೇ ತರಗತಿ ತುಳು ತೃತೀಯ ಭಾಷೆ, 9ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಭಾಗ 2, ಗಣಿತ ಭಾಗ 1, ಗಣಿತ ಭಾಗ 2, ದೈಹಿಕ ಶಿಕ್ಷಣ, ಆಂಗ್ಲ ಮಾಧ್ಯಮ ಸಮಾಜ ವಿಜ್ಞಾನ ಭಾಗ 2, ವಿಜ್ಞಾನ ಭಾಗ 2, ಗಣಿತ ಭಾಗ 2, ಇಂಗ್ಲಿಷ್‌ ದ್ವಿತೀಯ ಭಾಷೆ, ಸಂಸ್ಕೃತ ಪ್ರಥಮ ಭಾಷೆ, ತುಳು ತೃತೀಯ ಭಾಷೆ, 10ನೇ ತರಗತಿ ಕನ್ನಡ ಮಾಧ್ಯಮ ಗಣಿತ ಭಾಗ 2, ಸಂಸ್ಕೃತ ತೃತೀಯ ಭಾಷೆ, ತುಳು ತೃತೀಯ ಭಾಷೆಯ ಪಠ್ಯ ಪುಸ್ತಕಗಳು ಬಂದಿಲ್ಲ. ನವೆಂಬರ್‌ನಲ್ಲೇ ಎಷ್ಟು ಪುಸ್ತಕ ಬೇಕೆಂದು ಅಂಕಿ-ಅಂಶ ತೆಗೆದುಕೊಂಡರೂ ಬೆಳ್ತಂಗಡಿ ತಾಲೂಕೊಂದಕ್ಕೇ 35,922 ಪುಸ್ತಕಗಳು ಬರಬೇಕಿವೆ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.