ಸಿದ್ಧ ವಿದೆ ವಿವಿಧ ಜಾತಿಯ ಸಾವಿರಾರು ಗಿಡಗಳು


Team Udayavani, Jun 29, 2017, 5:12 PM IST

Nursery-29-6.jpg

ಬಂಟ್ವಾಳ: ಪ್ರಾದೇಶಿಕ ವಲಯ ಅರಣ್ಯ ಇಲಾಖೆಯಿಂದ 2017-18ನೇ ಸಾಲಿಗೆ 48 ಸಾವಿರ ವಿವಿಧ ಜಾತಿಯ ಗಿಡಗಳು ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ರೈತರಿಗೆ ವಿತರಣೆಗೆ ದೊರೆಯಲಿವೆ. ಸಾಗುವಾನಿ-19,920, ದಾಲ್ಚಿನಿ-462, ಪುನರ್ಪುಳಿ-168, ಬೆತ್ತ-250,  ಮಹಾಗನಿ – 2,870, ಸಿಲ್ವರ್‌- 6,641, ಹುಣಸೆ-580, ನೆಲ್ಲಿ-1,800,  ಬೇಂಗ-2,951, ಬೀಟೆ – 3,208, ಹೆಬ್ಬಲಸು-553, ಕಾಯಿಧೂಪ – 914,  ಹಲಸು-250, ಹೊಳೆಮತ್ತಿ-350, ಸೀತಾ ಅಶೋಕ- 46, ಮಾವು-177, ಶಾಂತಿ-582, ರೆಂಜ-568, ಕಂಬ ಅಶೋಕ – 1,000, ಕಹಿಬೇವು-608, ಬಿಲ್ವಪತ್ರೆ- 2,000, ಬಾದಾಮಿ-300, ನೇರಳೆ-500, ಹೊನ್ನೆ-74, ಸಿಮರೊಬ-210, ಉಂಡೆ ಹುಳಿ- 28, ಸಂಪಿಗೆ-49, ಚೆರ್ರಿ- 42, ಹಿಪ್ಪೆ-350, ರಕ್ತಚಂದನ-500 ಗಿಡಗಳು ಶಂಭೂರು ನರ್ಸರಿಯಲ್ಲಿ ಲಭ್ಯವಿವೆ.

ಪ್ರತೀ ಗಿಡಕ್ಕೆ ನೂರು ರೂ.
ಅರಣ್ಯ ಇಲಾಖೆಯು 2017-18ನೇ ಸಾಲಿನಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಇಲಾಖೆಯಲ್ಲಿ ನೋಂದಾಯಿಸಿಕೊಂಡು ನೆಟ್ಟು ಉಳಿಸಿಕೊಂಡ ಪ್ರತಿ ಗಿಡಕ್ಕೆ ಮೊದಲ ವರ್ಷಾಂತ್ಯದಲ್ಲಿ 30 ರೂ., ಎರಡನೇ ವರ್ಷಾಂತ್ಯದಲ್ಲಿ 30 ರೂ., ಮೂರನೇ ವರ್ಷಾಂತ್ಯದಲ್ಲಿ 40 ರೂ. ನಂತೆ ಒಟ್ಟು 100 ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು. ಒಬ್ಬ ರೈತನಿಗೆ ಗರಿಷ್ಠ 500 ಗಿಡಗಳನ್ನು ನೆಟ್ಟು ಸಂರಕ್ಷಿಸುವುದಕ್ಕೆ ಮಿತಿಯನ್ನು ಮಾಡಲಾಗಿದೆ. ಇದರಲ್ಲಿ ರೈತ ಸ್ವಂತದ್ದಾಗಿರುವ ಜಮೀನು ಹೊಂದಿರಬೇಕು. ನೆಟ್ಟ ಗಿಡವು ಸಾಯದಂತೆ ಬದುಕಿಸುವಲ್ಲಿ  ಪ್ರಯತ್ನಗಳು ಇರಬೇಕು.

2011-12ನೇ ಸಾಲಿನಲ್ಲಿ ಈ ಯೋಜನೆ ಜಾರಿಗೆ ಬಂದಿತ್ತು. ಆಗ 10  ರೂ., 15, 20ರಂತೆ ಒಟ್ಟು 45 ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು ಅದರಂತೆ ಬಂಟ್ವಾಳ ತಾಲೂಕಿನಲ್ಲಿ 25 ಮಂದಿ ರೈತರು 90,000 ರೂ.ಗಳನ್ನು ಪಡೆದುಕೊಂಡಿದ್ದಾರೆ ಎಂದು ಇಲಾಖೆ ಅಂಕಿಅಂಶ ತಿಳಿಸಿದೆ. ವಲಯ ಅರಣ್ಯ ಇಲಾಖೆ ನೀಡುವ ಚಿಕ್ಕ ಗಾತ್ರದ ತೊಟ್ಟೆಯ ಗಿಡಕ್ಕೆ 1ರೂ. ಮತ್ತು ದೊಡ್ಡ ಗಾತ್ರದ ತೊಟ್ಟೆಯ ಗಿಡಕ್ಕೆ 3 ರೂ. ದರವನ್ನು ವಿಧಿಸಲಾಗುತ್ತಿದ್ದು ನೋಂದಾಯಿಸಿಕೊಂಡು ನೀಡಲಾಗುತ್ತದೆ.

ಸಾಮಾಜಿಕ ಅರಣ್ಯದಲ್ಲಿ 88 ,000 ಗಿಡ
ಸಾಮಾಜಿಕ ಅರಣ್ಯದಿಂದಲೂ ಸಾರ್ವಜನಿಕ ವಿತರಣೆಗೆ ಗಿಡಗಳನ್ನು ನೀಡುತ್ತಿದ್ದು 88,000  ಗಿಡಗಳು ವಿತರಣೆಗೆ ಲಭ್ಯವಿದ್ದು ಈಗಾಗಲೇ ಗಿಡಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ನರೇಶ್‌ ತಿಳಿಸಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆಯು ವಲಯ ಅರಣ್ಯ ಇಲಾಖೆಯಿಂದ ನೀಡುವ ಜಾತಿವಾರು ಗಿಡಗಳ ಹೊರತಾದ ಗಿಡಗಳನ್ನು ಸಹ ಪಡೆಯಬಹುದು ಎಂದವರು ತಿಳಿಸಿದ್ದಾರೆ. ರೈತರು ಉದ್ಯೋಗ ಖಾತರಿ ಯೋಜನೆಯಡಿ ಹೊಂಡ – ಗುಂಡಿಗಳನ್ನು ಮಾಡಿ ಗಿಡಗಳನ್ನು ನೆಡುವುದಾದರೆ ಅವರಿಗೆ ಖರ್ಚು ವೆಚ್ಚ ಗ್ರಾ.ಪಂ. ಮೂಲಕ ಲಭ್ಯವಾಗಲಿದೆ. ಸಂಘಸಂಸ್ಥೆಗಳಿಗೆ ಗಿಡಗಳ ಸರಬರಾಜು ವ್ಯವಸ್ಥೆಗೆ ಕೂಡ ಇಲಾಖೆಯಿಂದ ಸೂಕ್ತ ವೆಚ್ಚವು ಲಭ್ಯವಾಗುತ್ತದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ತುಂಬೆ ನರ್ಸರಿಯಲ್ಲಿ ಗಿಡಗಳು ದೊರೆಯುತ್ತವೆ. ಬಿ.ಸಿ.ರೋಡ್‌ ತಾ.ಪಂ. ಹಳೆಯ ಕಟ್ಟಡದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಿಂದ ಸೂಕ್ತ ಅರ್ಜಿ ನೀಡಿ ಗಿಡಗಳನ್ನು ಪಡೆಯಲು ಅವಕಾಶವಿದೆ ಎಂದವರು ತಿಳಿಸಿದ್ದಾರೆ.

ಪ್ರತಿ ಗಿಡಕ್ಕೆ ಪ್ರೋತ್ಸಾಹಧನ
ಈಗಾಗಲೇ ಮಳೆಗಾಲ ಆರಂಭವಾಗಿದ್ದು ಅನೇಕ ಕಡೆಗಳಲ್ಲಿ ಗಿಡಗಳನ್ನು ನೆಡುವ ಪ್ರಕ್ರಿಯೆ ಜಾರಿಯಲ್ಲಿದೆ. ಸರಕಾರದ ಹೊಸ ಸುತ್ತೋಲೆಯಂತೆ ಪ್ರತೀ ಗಿಡಕ್ಕೆ ಪ್ರೋತ್ಸಾಹ ಧನವನ್ನು ಮೂರು ಹಂತದಲ್ಲಿ ನೀಡಲಾಗುತ್ತದೆ. ಇದರ ಸದುಪಯೋಗ ಪಡೆಯುವಂತಾಗಬೇಕು.
– ಸುರೇಶ್‌, ಅರಣ್ಯಾಧಿಕಾರಿ, ಬಂಟ್ವಾಳ ವಲಯ

ಟಾಪ್ ನ್ಯೂಸ್

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

10

Missing: ಚುನಾವಣಾ ಕರ್ತವ್ಯದಲ್ಲಿದ್ದ ಸರಕಾರಿ ನೌಕರ ನಾಪತ್ತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.