“ಸದ್ಗುಣ ಮೈಗೂಡಿಸಿಕೊಂಡಾಗ ಉತ್ಸವ ಅರ್ಥಪೂರ್ಣ’
Team Udayavani, Aug 27, 2017, 7:35 AM IST
ವಿಟ್ಲ : ಒಳ್ಳೆಯಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು ಎಂಬುದೇ ಗಣಪತಿತಣ್ತೀವಾಗಿದೆ. ಮನುಷ್ಯ ಉತ್ಸವಪ್ರಿಯ. ಉತ್ಸವಗಳು ಆತೊ¾àನ್ನತಿಗೆ ದಾರಿಯೂ ಹೌದು. ಆಚರಣೆಗಳು ಆತ್ಮರಂಜನೆಗೆ ಪೂರಕವಾಗಿರಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನ ನೀಡಿದರು.
ಸ್ಥೂಲ ಶರೀರಕ್ಕೆ ಸೂಕ್ಷ್ಮಕಣ್ಣುಗಳನ್ನು ಹೊಂದಿರುವ ಗಣಪತಿಯ ಪ್ರತಿಯೊಂದು ಅಂಗಗಳಲ್ಲಿ ಒಂದೊಂದು ವಿಚಾರಗಳನ್ನು ಕಾಣಬಹುದು. ದೆ„ವತ್ವವನ್ನು ಮೈಗೂಡಿಸಿಕೊಳ್ಳಬೇಕು ಎನ್ನುವುದೇ ಮಣ್ಣಿನ ಮೂರ್ತಿಯಲ್ಲಿ ಗಣಪತಿಯನ್ನು ಆವಾಹಿಸಿ ಪೂಜಿಸುವ ಉದ್ದೇಶವಾಗಿದೆ ಎಂದವರು ಹೇಳಿದರು.
ಸಾಧ್ವಿ ಶ್ರೀ ಮಾತಾನಂದಮಯೀ ಅವರು ಉಪಸ್ಥಿತರಿದ್ದರು. ವೇ| ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಮತ್ತು ಬಳಗದವರಿಂದ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು.